ಹೊಸದಾಗಿ ಕಲಕೇರಿ ಜಿಪಂ ಕ್ಷೇತ್ರ ಸೃಷ್ಟಿ

ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಳ­ಕದಾಂಪೂರ-ಹೆಸರೂರು ತಾಪಂ ಸ್ಥಾನ ಕಡಿತ

Team Udayavani, Apr 4, 2021, 7:44 PM IST

hhhre

ಹು.ಬಾ. ವಡ್ಡಟ್ಟಿ

ಮುಂಡರಗಿ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ತಾಪಂ ಮತ್ತು ಜಿಪಂ ಚುನಾವಣೆಯ ಕ್ಷೇತ್ರ ಪುನರ್ವಿಂಗಡಣೆ ಪಟ್ಟಿ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ. ಜನಸಂಖ್ಯೆ ಆಧರಿಸಿ ಜಿಪಂನ ಒಂದು ಸ್ಥಾನ ಹೆಚ್ಚಾಗಿದ್ದರೆ, ತಾಪಂನ ಕದಾಂಪೂರ, ಹೆಸರೂರು ಎರಡು ಸ್ಥಾನ ಕಡಿತಗೊಂಡಿವೆ.

ಕ್ಷೇತ್ರಗಳ ಪುನರ್ವಿಂಗಡಣೆಯಲ್ಲಿ ಜಿಪಂನ ಕಲಕೇರಿ ಕ್ಷೇತ್ರ ಹೆಚ್ಚಾಗಿರುವುದರಿಂದ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ತಾಲೂಕಿನಲ್ಲಿ 19 ಗ್ರಾಪಂಗಳಿದ್ದು, ಈ ಗ್ರಾಪಂಗೆ ಅನುಗುಣವಾಗಿಯಾದರೂ ತಾಪಂ ಸ್ಥಾನಗಳು ಹೆಚ್ಚಾಗಬೇಕಿತ್ತು. ಜೊತೆಗೆ 19 ಗ್ರಾಪಂಗಳಿಗೆ 10 ತಾಪಂ ಸ್ಥಾನಗಳು ದೊರಕಬೇಕಿತ್ತು. ಕನಿಷ್ಠ ಇರುವ ತಾಪಂ 11 ಕ್ಷೇತ್ರಗಳನ್ನು ಉಳಿಸಿಕೊಳ್ಳಬೇಕಾಗಿತ್ತು ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಷಯವಾಗಿದೆ.

ಡಂಬಳ ಹೋಬಳಿಯಲ್ಲಿ ಕದಾಂಪೂರ, ಮುಂಡರಗಿ ಹೋಬಳಿಯಲ್ಲಿ ಹೆಸರೂರು ಕ್ಷೇತ್ರಗಳು ಕಡಿತಗೊಂಡಂತಾಗಿದೆ. ಜಿಪಂ ಮತ್ತು ತಾಪಂ ಸ್ಥಾನಗಳು ಅಧಿಕೃತವಾಗಿ ತಾಲೂಕು ಆಡಳಿತ ಕಳುಹಿಸಿರುವ ಪ್ರಸ್ತಾವನೆಯಂತೆ, ತಾಲೂಕಿನಲ್ಲಿ ಈ ಹಿಂದೆ ಡಂಬಳ, ಹಿರೇವಡ್ಡಟ್ಟಿ, ಹಮ್ಮಿಗಿ ಮೂರು ಜಿಪಂ ಕ್ಷೇತ್ರಗಳು, ತಾಪಂನಲ್ಲಿ ಹನ್ನೊಂದು ಕ್ಷೇತ್ರಗಳು ಇದ್ದವು. ಅದರಂತೆ ಕಲಕೇರಿ ಜಿಪಂ ಒಂದು ಕ್ಷೇತ್ರ ಹೆಚ್ಚಾಗಿ, ನಾಲ್ಕು ಜಿಪಂ ಕ್ಷೇತ್ರಗಳು, ತಾಪಂನ ಹನ್ನೊಂದು ಸ್ಥಾನಗಳಲ್ಲಿ ಎರಡು ಕಡಿತಗೊಂಡು ಒಂಬತ್ತು ಸ್ಥಾನಕ್ಕೆ ಇಳಿಕೆಯಾಗಿವೆ.

ಜಿಪಂ ಹೆಚ್ಚುವರಿ ಸ್ಥಾನ: ಈಗಾಗಲೇ ಇರುವ ಜಿಪಂ ಕ್ಷೇತ್ರಗಳಲ್ಲಿ ಡಂಬಳ, ಹಿರೇವಡ್ಡಟ್ಟಿ, ಹಮ್ಮಿಗಿಯ ಜೊತೆಗೆ ಕಲಕೇರಿ ಜಿಪಂ ಸ್ಥಾನ ಹೊಸದಾಗಿ ಸೇರ್ಪಡೆಯಾಗಿರುವುದರಿಂದ ನಾಲ್ಕು ಕ್ಷೇತ್ರಗಳಾಗಿವೆ. ಈಗಿರುವ 11 ತಾಪಂ ಸ್ಥಾನಗಳಲ್ಲಿ ಎರಡು ಕಡಿತಗೊಂಡು ಒಂಬತ್ತು ಸ್ಥಾನಗಳಿಗೆ ಇಳಿಕೆಯಾಗಿದ್ದು, ತಾಪಂನ ಅಧಿಕಾರ ನಿಶ್ಯಕ್ತಗೊಂಡಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಜಿಪಂನ ನಾಲ್ಕು ಸ್ಥಾನ-ಡಂಬಳ ಜಿಪಂ ಕ್ಷೇತ್ರ: ಡಂಬಳ, ಕದಾಂಪೂರ, ಶಿವಾಜಿನಗರ, ಡೋಣಿ, ಶಿವಾಜಿನಗರ, ಜಂತ್ಲಿ ಇವೆ. ಹಿರೇವಡ್ಡಟ್ಟಿ ಜಿಪಂ ಕ್ಷೇತ್ರ: ಹಿರೇವಡ್ಡಟ್ಟಿ, ಹಳ್ಳಿಕೇರಿ, ಮೇವುಂಡಿ, ಯಕ್ಲಾಸಪೂರ, ಆಲೂರು ಗ್ರಾಪಂಗಳು. ಹಮ್ಮಿಗಿ ಜಿಪಂ ಕ್ಷೇತ್ರ: ಹಮ್ಮಿಗಿ, ಕೋರ್ಲಹಳ್ಳಿ, ಶಿಂಗಟಾಲೂರು, ಹೆಸರೂರು ಬಿದರಹಳ್ಳಿ ಗ್ರಾಮ ಪಂಚಾಯಿತಿಗಳು ಇವೆ. ಕಲಕೇರಿ ಜಿಪಂ ಕ್ಷೇತ್ರ: ಕಲಕೇರಿ, ಬಾಗೇವಾಡಿ, ಮುರುಡಿ-ಮುರುಡಿತಾಂಡಾ, ಬೀಡನಾಳ, ಹಾರೋಗೇರಿ ಗ್ರಾಪಂಗಳು ಬರುತ್ತವೆ.

ಈ ನಾಲ್ಕು ಜಿಪಂ ಸ್ಥಾನಗಳಲ್ಲಿ ಮೀಸಲಾತಿ ಡಂಬಳ, ಹಿರೇವಡ್ಡಟ್ಟಿ, ಹಮ್ಮಿಗಿ, ಕಲಕೇರಿ ಕ್ಷೇತ್ರಗಳನ್ನು ಮಾತ್ರ ಘೋಷಣೆಯಾಗಿದ್ದು, ಇನ್ನೂ ಈ ಮೀಸಲಾತಿ ಪ್ರಕಟವಾಗಬೇಕಿದೆ. ತಾಪಂ ಕ್ಷೇತ್ರಗಳು; ಒಂಬತ್ತು ತಾಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಕಡಿತಗೊಂಡ ಎರಡು ಕ್ಷೇತ್ರಗಳ ಪೈಕಿ ಕದಾಂಪೂರ ಜಂತ್ಲಿ ಕ್ಷೇತ್ರದಲ್ಲಿ ವಿಲೀನವಾಗಿದ್ದರೆ, ಹೆಸರೂರು ಕ್ಷೇತ್ರ ಕೋರ್ಲಹಳ್ಳಿಯಲ್ಲಿ ಲೀನವಾಗಿವೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.