ಅಪಾಯದಂಚಿನಲ್ಲಿ ಸ್ವಾಗತ ಕಮಾನು


Team Udayavani, Dec 5, 2018, 3:59 PM IST

5-december-18.gif

ನರಗುಂದ: ಪಟ್ಟಣಕ್ಕೆ ಬರುವ ಸಾರ್ವಜನಿಕರು, ಪ್ರವಾಸಿಗರನ್ನು ಸ್ವಾಗತಿಸಲು ಪಟ್ಟಣ ಪ್ರವೇಶ ದ್ವಾರದಲ್ಲಿ ಸ್ವಾಗತ ಕಮಾನು ಹಾಕುವುದು ವಾಡಿಕೆ. ಆದರೆ ಇಲ್ಲಿ ನಿರ್ಮಿಸಿರುವ ಕಮಾನು ಸ್ವಾಗತ ಬದಲು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪುರಸಭೆ ನಿರ್ಮಿಸಿದ ಕಮಾನು ಯಾವುದೇ ಕ್ಷಣದಲ್ಲಿ ಬೀಳುವ ಹಂತದಲ್ಲಿದೆ. ಆದರೂ ಇದರ ತೆರವು ಕಾರ್ಯ ಮಾತ್ರ ನಡೆದಿಲ್ಲ.

ಪಟ್ಟಣದ ಸವದತ್ತಿ ರಾಜ್ಯ ಹೆದ್ದಾರಿಯಿಂದ ದಂಡಾಪುರ ಬಡಾವಣೆ ಪಡುವಗೊಂಡ ಕೆರೆ ಹತ್ತಿರ ಸಂಗೊಳ್ಳಿ ರಾಯಣ್ಣ ವೃತ್ತ ಎದುರಿಗೆ ಅಸ್ತಿ ಪಂಜರದಂತೆ ಸ್ವಾಗತ ಕಮಾನು ಗೋಚರಿಸುತ್ತಿವೆ. ಅವೈಜ್ಞಾನಿಕವಾಗಿ ನಿರ್ಮಿಸಿದ್ದೇ ಅಪಾಯಕ್ಕೆ ಕಾರಣವಾಗಿದೆ. ಕಮಾನಿನ ಮೇಲಿನ ಕಬ್ಬಿಣದ ಗಲ್ಡರ್‌ ತುಕ್ಕು ಹಿಡಿಯುತ್ತಿರುವುದು ಅಪಾಯಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಮೂರು ಸಿಮೆಂಟ್‌ ಕಂಬಗಳ ಮೇಲೆ ಅರ್ಧ ಚಂದ್ರಾಕಾರದಲ್ಲಿ ಜೋಡಿಸಲಾದ ಕಬ್ಬಿಣದ ಗಲ್ಡರ್‌ನ ನಟ್‌ಗಳು ಯಾವಾಗಲೋ ಬಿಚ್ಚಿದ್ದು, ಯಾವುದೇ ಸಂದರ್ಭದಲ್ಲಿ ಕಬ್ಬಿಣದ ಗಲ್ಡರ್‌ ಹಾರಿ ಬೀಳುತ್ತದೋ ಎಂಬ ಭಯ ಇಲ್ಲಿನ ನಿವಾಸಿಗಳಲ್ಲಿ ತಲೆದೋರಿದೆ.

ಶ್ರೀಗಳ ನಾಮಾಂಕಿತ: ಸಣ್ಣ ದ್ವಾರಕ್ಕೆ ಪಡುವಗೊಂಡ ಕೆರೆಗೆ ಸ್ವಾಗತ ಮತ್ತು ಮುಖ್ಯ ರಸ್ತೆಗಿರುವ ಕಮಾನಿಗೆ ಪುರಸಭೆ ಸ್ವಾಗತ ಎಂದು ಬರೆಯಲಾಗಿತ್ತು. ಕಾಲಕ್ರಮೇಣ ನಾಮಧೇಯ ಅಳಿಸಿ ಹೋಗಿವೆ. ಈ ಕಮಾನಿಗೆ ಪಟ್ಟಣದ ಪುಣ್ಯಾರಣ್ಯ ಪತ್ರಿವನಮಠದ ಕತೃ ಲಿಂ| ಅಜ್ಜಪ್ಪಜ್ಜೇಂದ್ರ ಸ್ವಾಮಿಗಳು ಮತ್ತು ಎರಡನೇ ಪೀಠಾಧಿ ಪತಿ ಲಿಂ| ಶಿವಯ್ಯ ಜ್ಜೇಂದ್ರ ಸ್ವಾಮಿಗಳ ಹೆಸರು ಹಾಕಲಾಗಿದ್ದು ಸ್ಮರಿಸಬಹುದು. ಒಟ್ಟಾರೆ ದಂಡಾಪುರ ಬಡಾವಣೆಯಲ್ಲಿರುವ ಪಟ್ಟಣ ಪ್ರವೇಶದ ಸ್ವಾಗತ ಕಮಾನು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಗಮನ ಹರಿಸದ ಪುರಸಭೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಸ್ವಾಗತ ಕಮಾನು ಅಪಾಯತಂದೊಡ್ಡುವ ಮುನ್ನ ಸರಿಪಡಿಸಬೇಕು ಎಂಬುದು ಸ್ಥಳೀಯರ ಕೋರಿಕೆಯಾಗಿದೆ.

 15 ವರ್ಷಗಳ ಹಿಂದೆ ನಿರ್ಮಾಣ
ಸುಮಾರು 15 ವರ್ಷಗಳ ಹಿಂದೆ ಈ ಸ್ವಾಗತ ಕಮಾನು ಪುರಸಭೆ ನಿರ್ಮಿಸಿದೆ. ಪಕ್ಕದಲ್ಲೇ ಐತಿಹಾಸಿಕ ಪಡುವಗೊಂಡ ಕೆರೆಯಿರುವ ಕಾರಣ ನಿವಾಸಿಗಳ ಕೋರಿಕೆಯಂತೆ ಎರಡು ಭಾಗವಾಗಿ ಒಂದು ಮುಖ್ಯರಸ್ತೆ, ಅದಕ್ಕೆ ಜೋಡಿಸಿ ಮತ್ತೊಂದು  ಕೆರೆಗೆ ಸ್ವಾಗತ ಕಮಾನು ಹಾಕಲಾಗಿದೆ. ರಸ್ತೆಗಿರುವ ಕಮಾನು 22 ಅಡಿ ಮತ್ತು ಕೆರೆಗಿರುವ ಕಮಾನು 15 ಅಡಿ ಅಗಲವಿದೆ. ಎರಡೂ ಕಮಾನು ಅತಿಹೆಚ್ಚು 25 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಮೂರು ಸಿಮೆಂಟ್‌ ಕಂಬಗಳ ಮೇಲೆ ಹಾಕಿದ ಗಲ್ಡರ್‌ ಕಂಬಗಳಿಗೆ ಸರಿಯಾದ ಜೋಡಣೆಯಾಗಿಲ್ಲ ಮತ್ತು ಅದಕ್ಕೆ ಹಾಕಿದ ನಟ್‌ ಬೋಲ್ಟ್‌ಗಳು ಕಳಚಿರುವುದೇ ಕಮಾನು ಅಪಾಯಕಾರಿಯಾಗಿ ಪರಿವರ್ತನೆಗೊಂಡಿದೆ. ಯಾವ ಕ್ಷಣದಲ್ಲಾದರೂ ಮೇಲಿರುವ ಗಲ್ಡರ್‌ ಕಿತ್ತು ಬೀಳಬಹುದು ಎಂಬುದು ಆತಂಕ ಸಾರ್ವಜನಿಕರಲ್ಲಿದೆ.

ಗಲ್ಡರ್‌ ಕೆಳಗಿಳಿಸಿ ಮರು ನಿರ್ಮಾಣ 
ಬಹಳ ಎತ್ತರವಿದ್ದರಿಂದ ಕ್ರೇನ್‌ ಮೂಲಕ ಗಲ್ಡರ್‌ಗಳನ್ನು ಕೆಳಗಿಳಿಸಬೇಕಿದೆ. ಶೀಘ್ರದಲ್ಲಿ ಗಲ್ಡರ್‌ಗಳನ್ನು ಕೆಳಗಿಳಿಸಿ ಕಮಾನು ಮರು ನಿರ್ಮಾಣ ಮಾಡುವ ಚಿಂತನೆ ನಡೆಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ಆತಂಕ ಎದುರಾಗದಂತೆ ನಿರ್ಮಿಸಲಾಗುವುದು.
. ಬಿ.ಎ. ನದಾಫ್‌, ಪುರಸಭೆ ಕಿರಿಯ ಅಭಿಯಂತರ 

ಸಿದ್ಧಲಿಂಗಯ್ಯ ಮಣ್ಣೂರಮಠ 

ಟಾಪ್ ನ್ಯೂಸ್

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.