ಪ್ರಸಕ್ತ ವರ್ಷ ಉತ್ತಮ ಮಳೆ: ಜಿಡಗಾ ಶ್ರೀ
Team Udayavani, Mar 25, 2019, 11:10 AM IST
ಅಫಜಲಪುರ: ಕಳೆದ ವರ್ಷ ಮಳೆಯಾಗದೆ ಬಹಳ ಸಮಸ್ಯೆಯಾಗಿತ್ತು. ಆದರೆ ಈ ವರ್ಷ ವರುಣ ಕರುಣೆ ತೋರಲಿದ್ದಾನೆ. ಹೀಗಾಗಿ ರೈತ ವರ್ಗದವರು ಎದೆಗುಂದಬೇಡಿ, ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಭರವಸೆಯಿಂದ ಇರಿ. ಗುರು ಕರುಣೆ ನಿಮ್ಮ ಮೇಲಿದೆ ಎಂದು ಮುಗಳಖೋಡ ಜಿಡಗಾ ಮಠದ ಪೀಠಾಧೀಶ ಮುರುಘರಾಜೇಂದ್ರ ಮಹಾಸ್ವಾಮೀಜಿ ನುಡಿದರು.
ತಾಲೂಕಿನ ಕರ್ಜಗಿಯಲ್ಲಿ ಯಲ್ಲಾಲಿಂಗೇಶ್ವರರ 86ನೇ ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಬಂದಿದೆ. ಆದರೆ ಈ ವರ್ಷದ ಮಳೆಗಾಲ ಎಲ್ಲರಿಗೂ ಅನುಕೂಲ ಆಗಲಿದೆ. ರೈತರ ಕಷ್ಟ ಕಾರ್ಪಣ್ಯಗಳು ನೀಗಲಿವೆ. ಹೀಗಾಗಿ ಯಾವ ರೈತರು ಎದೆಗುಂದಬಾರದು, ಆತ್ಮಹತ್ಯೆ ಹಾದಿ ಹಿಡಿಯಬಾರದು ಎಂದರು.
ಕರ್ಜಗಿ ಯಲ್ಲಾಲಿಂಗರ ಸನ್ನಿಧಿ ಪವಾಡ ಮತ್ತು ಪುಣ್ಯ ಸ್ಥಾನವಾಗಿದೆ. ಇಂತಹ ಪುಣ್ಯಕ್ಷೇತ್ರದಲ್ಲಿ ಮದುವೆಯಾದ ಜೋಡಿಗಳ ಜೀವನ ಸುಖಮಯವಾಗಿರಲಿ, ಸಾಮರಸ್ಯದಿಂದ ಕೂಡಿರಲಿ, ಸಂಬಂಧ ಗಟ್ಟಿಗೊಳಿಸಿ ಸರಳ, ಸುಂದರ, ಧರ್ಮಾಧಾರಿತ ಜೀವನ ನಡೆಸುವಂತಾಗಲಿ ಎಂದು ಹರಸಿದರು.
ನಾಗಣಸೂರ ಮಠದ ರೇವಣಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಮಹಾಸ್ವಾಮೀಜಿ ಸದಾ ಜನಪರ ಕೆಲಸ ಮಾಡುತ್ತಾ ಭಕ್ತ ವರ್ಗದ ಕಷ್ಟ ನೀಗಿಸುವ
ಕೆಲಸ ಮಾಡಿದ್ದಾರೆ ಎಂದರು.
ಜಾತ್ರೆಯಲ್ಲಿ ಒಟ್ಟು 46 ಜೋಡಿಗಳ ಸಾಮೂಹಿಕ ವಿವಾಹ ನಡೆಯಿತು. ಎಲ್ಲಾ ಜೋಡಿಗಳಿಗೆ ಕರ್ಜಗಿ ಗ್ರಾಮದ ಮುಖಂಡ
ರಾಜು ಜಿಡ್ಡಗಿ ತಾಳಿ ಮತ್ತು ಕಾಲುಂಗುರ ಕಾಣಿಕೆ ನೀಡಿದರು. ಇವರು ಕಳೆದ ನಾಲ್ಕು ವರ್ಷದಿಂದ ಈ ಸೇವೆ ಸಲ್ಲಿಸುತ್ತಿದ್ದಾರೆ.
ವಧುವರರಿಗೆ ಗ್ರಾಮದ ಮುಖಂಡ ಮಹಾಂತಯ್ಯ ಹಿರೇಮಠ ಬಟ್ಟೆ ಕಾಣಿಕೆ ನೀಡಿದರೆ, ಶಿವಲಿಂಗಯ್ಯ ಸ್ವಾಮಿ ಹೂವಿನ
ಹಾರ ಮತ್ತು ದಂಡಿಗಳನ್ನು ನೀಡಿದರು. ಕಾಶಿನಾಥ ಹಳಗೋ, ವೀರಯ್ಯ ಸ್ವಾಮಿ ಸಾಲಿಮಠ, ಸಿದ್ಧಯ್ಯ ಸ್ವಾಮಿ ಹಿರೇಮಠ,
ಮಹಮ್ಮದ ಅಲಿ, ಚಂದು ದೇಸಾಯಿ, ಗುರು ಸಾಲಿಮಠ, ಸಿದ್ಧು ಹಳಗೋ , ವಿಜಯಕುಮಾರ ಬಂಗಾರಶೆಟ್ಟಿ, ಜಗದೇವಿ
ಮಾತಾ ಅಗರಖೇಡ, ವೆಂಕಟೇಶ, ಅಂಬಣ್ಣ ನರಗೋ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!