ಕಾವ್ಯಾನುವಾದದಿಂದ ಪ್ರಸ್ತುತತೆ ಪ್ರಶ್ನೆಗೆ ಉತ್ತರ 


Team Udayavani, Jun 26, 2018, 6:30 AM IST

halegannada-sahitya.jpg

ಚನ್ನರಾಯಪಟ್ಟಣ: “ಹಳಗನ್ನಡದ ಕಾವ್ಯಗಳನ್ನು ಆಧುನಿಕ ಗದ್ಯಕ್ಕೆ ತಂದು ಅವುಗಳನ್ನು ಕನ್ನಡೇತರ ಭಾಷೆಗಳಿಗೆ ಅನುವಾದಿಸಿದಾಗ ಹಳಗನ್ನಡದ ಪ್ರಸ್ತುತತೆಯ ಪ್ರಶ್ನೆ ಎತ್ತುವವರಿಗೆ ಉತ್ತರ ಸಿಗುತ್ತದೆ’ ಎಂದು ಸಾಹಿತಿ ಡಾ.ಷ.ಶೆಟ್ಟರ ತಿಳಿಸಿದರು.

ಜೈನಕಾಶಿ ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಖೀಲ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಳಗನ್ನಡದ ಸಾರಅರಿಯಬೇಕಾದರೆ ಆ ಕಾವ್ಯಗಳನ್ನು ಇಂದಿನ ಆಧುನಿಕ ಗದ್ಯಕ್ಕೆ ತರ್ಜುಮೆ ಮಾಡಿದ ನಂತರ ಪ್ರಪಂಚದ ಇತರೆ ಭಾಷೆಗಳಿಗೆ ಅನುವಾದ ಮಾಡಿದರೆ ಅವುಗಳಲ್ಲಿರುವ ತಿರುಳು ತಿಳಿಯುತ್ತದೆ ಎಂದರು.

ಹಳಗನ್ನಡವನ್ನು ಓದಲು ವ್ಯಾಕರಣ, ಛಂದಸ್ಸು ಅಲಂಕಾರ ತಿಳಿದಿರಲೇಬೇಕೆಂಬ ಕಡ್ಡಾಯವಿಲ್ಲ, ಆದರೆ ಕಾವ್ಯದಲ್ಲಿರುವ ತಿರುಳನ್ನು ಅಭಿರುಚಿ ಇರಬೇಕು. ಕಾವ್ಯವನ್ನು ಓದುತ್ತಾ ಹೋದಂತೆ ಅದರಲ್ಲಿರುವ ವಿಷಯದ ಅರಿವಿಗೆ ವ್ಯಾಕರಣ, ಛಂದಸ್ಸು ಅಲಂಕಾರ ಪ್ರಸ್ತುತವಾಗುತ್ತದೆ ಎಂದರು.

ಕನ್ನಡ ಪುನರುತ್ಥಾನ ಆರಂಭವಾಗಿದ್ದೇ 19 ನೇ ಶತಮಾನದಲ್ಲಿ ಅದಕ್ಕೂ ಮುಂಚೆ ಕನ್ನಡ ಸಾಹಿತ್ಯ ಬರಹ ನುಡಿ ಗೊತ್ತಿರಲಿಲ್ಲ. ಆದರೆ ಬ್ರಾಹ್ಮಿ ಅಕ್ಷರವನ್ನು ಮರತಂತೆ ಕನ್ನಡ ಅಕ್ಷರನ್ನು ಮರೆತಿರಲಿಲ್ಲ. ಪಂಪ, ರನ್ನ ಹಾಗೂ ಜನ್ನ ಗೊತ್ತಿರಲಿಲ್ಲ ಕನ್ನಡದ ಉಚ್ಛಾ†ಯ ಸ್ಥಿತಿ ಎಂದು 19 ನೇ ಶತಮಾತನದ ಅಂತ್ಯ ಹಾಗೂ 20 ನೇ ಶತಮಾನದ ಆರಂಭವನ್ನು ಗುರುತಿಸಬಹುದು ಎಂದು ಹೇಳಿದರು.

ಕಾವ್ಯಪ್ರಭೇದಕ್ಕೆ ನಿರ್ದಿಷ್ಟ ಶೈಲಿಯಿಲ್ಲ. ಸಮಾಜದ ಸಮಸ್ಯೆಗಳನ್ನು ಪ್ರಚೋದಿಸಲು ಕಾವ್ಯ ಬೇಕಾಗುತ್ತದೆ. ಕನ್ನಡದಲ್ಲಿ ಆಯಾ ಕಾಲ ಘಟ್ಟದ ಆಡು ಮಾತಿನ ಸಾಹಿತ್ಯ ಬದಲಾಗುತ್ತಾ ಬಂದಿದೆ. ಕನ್ನಡ ಯಾವಾಗ ಬರವಣಿಗೆಯ ರೂಪದಲ್ಲಿ ಬಂತು, ಲಿಪಿ ಯಾವಾಗ ಬಂತು ಎಂಬುದು ತಿಳಿಯುವುದಿಲ್ಲ. ಸಮಕಾಲೀನ ಇತರ ಭಾಷೆಗಳಿಂದ ಕನ್ನಡದ ಅಸ್ಮಿತೆ ಅರಿಯಬೇಕು ಎಂದರು.

ಹಲ್ಮಿಡಿ ಶಾಸನ ಪ್ರಶ್ನಾರ್ಹ?
ಹಲ್ಮಿಡಿ ಶಾಸನವೇ ಕನ್ನಡದ ಪ್ರಥಮ ಶಾಸನ ಎಂಬುದು ಪ್ರಶ್ನಾರ್ಹ. ಏಕೆಂದರೆ ಈ ಶಾಸನದಲ್ಲಿ ದಿನಾಂಕ
ನಮೂದಾಗಿಲ್ಲ. ಶಾಸನವನ್ನು ಕಂಡು ಹಿಡಿದವರು ಕ್ರಿ.ಶ.450 ರಲ್ಲಿ ರಚಿತವಾಗಿರಬಹುದೆಂದು ತಿಳಿಸಿದ್ದಾರೆ
ಎಂದು ಡಾ.ಷ.ಶೆಟ್ಟರ ಹೇಳಿದರು.

ಹಲ್ಮಿಡಿ ಶಾಸನದಲ್ಲಿ ಪ್ರಬುದಟಛಿ ಕನ್ನಡ ಬಳಕೆಯಾಗಿದೆ, ಅದಕ್ಕಿಂತಲೂ ಮುಂಚಿತವಾಗಿ ಬಾಲ್ಯಾವಸ್ಥೆಯ ಕನ್ನಡ
ಇದ್ದಿರಬಹುದು. ಆಗಿನ ಕಾಲದ ಸಂಶೋಧಕರನ್ನು ಅಲ್ಲಗಳೆಯುವಂತಿಲ್ಲ ಅಂದಿನ ಕಾಲದ ಸ್ಥಿತಿಗತಿ ಅಧ್ಯಯನದ
ಬೆಳವಣಿಗೆಗಳಿಂದ ನಿರ್ಧರಿಸಿರುತ್ತಾರೆ. ಅವರನ್ನು ಟೀಕೆ ಮಾಡುವುದು ತಪ್ಪಾಗುತ್ತದೆ. ಆದರೆ ಅದನ್ನೇ ಸರಿ
ಅಂದುಕೊಂಡು ಇರುವುದೂ ತಪ್ಪಾಗುತ್ತದೆ ಎಂದರು.

ಧರ್ಮ ಸಹಿಷ್ಣುತೆ, ಇನ್ನೊಬ್ಬರ ವಿಚಾರವನ್ನು ಸಹಿಸುವಂತಹ ವಿಷಯಗಳು ಕವಿರಾಜ ಮಾರ್ಗ ಓದಿದಾಗ ತಿಳಿಯುತ್ತದೆ. ಆದರೆ ಇಂದಿನ ರಾಜಕಾರಣಿಗಳು ತಮ್ಮ ವಿಚಾರವಂತಿಕೆಯನ್ನು ಹೇರಲು ಕೊಲೆ ಮಾಡುವ ಹಂತಕ್ಕೆ
ತಲುಪಿದ್ದಾರೆ.
– ಡಾ.ಷ.ಶೆಟ್ಟರ, ಸಾಹಿತಿ

ಟಾಪ್ ನ್ಯೂಸ್

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.