ಎಚ್.ಡಿ.ದೇವೇಗೌಡರ ತೀರ್ಮಾನವೇ ಅಂತಿಮ
Team Udayavani, Aug 7, 2018, 7:50 AM IST
ಹಾಸನ: ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದ ಸ್ಪರ್ಧೆಯ ಬಗ್ಗೆ ಎಚ್.ಡಿ.ದೇವೇಗೌಡರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರ ತೀರ್ಮಾನವೇ ಅಂತಿಮ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು.
ಪ್ರಜ್ವಲ್ ರೇವಣ್ಣ ಹಾಸನಕ್ಕೆ ದೇವೇಗೌಡರ ಉತ್ತರಾಧಿಕಾರಿಯಾಗಬೇಕೇ, ಬೇಡವೇ ಎಂಬುದೂ ದೇವೇಗೌಡರಿಗೆ ಬಿಟ್ಟಿದ್ದು. ಪ್ರಜ್ವಲ್ಗೆ ಇನ್ನೂ 28ವರ್ಷ. ನಾನು ಶಾಸಕನಾಗಿದ್ದು 34ವರ್ಷಕ್ಕೆ. ಅವಕಾಶಗಳಿಗೆ ಕಾಯಬೇಕು ಎಂದರು.