ಯತಿಗಳಿಂದ ತಾತ್ಕಾಲಿಕ ಉಪನಗರಗಳ ವೀಕ್ಷಣೆ


Team Udayavani, Nov 27, 2017, 3:31 PM IST

has-1.jpg

ಚನ್ನರಾಯಪಟ್ಟಣ: 2018ರ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಉಪನಗರಗಳಾದ ತ್ಯಾಗಿ ನಗರ, ಪಂಚಕಲ್ಯಾಣ ನಗರ, ಕಳಶಾನಗರವನ್ನು ಆಚಾರ್ಯ ವರ್ಧಮಾನಸಾಗರ ಮಹಾರಾಜರು ನೇತೃತ್ವದಲ್ಲಿ ಯತಿಗಳು ಹಾಗೂ ಮಾತಾಜಿಯವರು, ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶಾಸಕ ಸಿ.ಎನ್‌.ಬಾಲಕೃಷ್ಣರೊಂದಿಗೆ ವೀಕ್ಷಿಸಿ ಕೆಲವು ಮಾರ್ಪಾಡುಗಳನ್ನು ಕೆಆರ್‌ಡಿಸಿಐಎಲ್‌ ಅಭಿಯಂತರಿಗೆ ಸೂಚಿಸಿದರು.

ಭಾನುವಾರ ಬೆಳಗ್ಗೆ ಶ್ರೀ ಮಠದಿಂದ ಕಾಲ್ನಡಿಗೆಯಲ್ಲಿ ಶ್ರವಣಬೆಳಗೊಳದಿಂದ ಹಿರೀಸಾವೆ ಬೆಂಗಳೂರು ಮಾರ್ಗದ ರಸ್ತೆಯ ಸಮೀಪದಲ್ಲಿರುವ ಹೊಸಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಉಪನಗರಗಳ ಸ್ಥಳಕ್ಕೆ ಭೇಟಿ ನೀಡಿದ ಯತಿಗಳು ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರಲಿದ್ದು ಸರ್ಕಾರದವತಿಯಿಂದ ಯತಿಗಳು, ಮುನಿವರ್ಯರು, ಮಾತಾಜಿಗಳು, ಭಕ್ತರ ಉಳಿಯುವಿಕೆಗಾಗಿ 12 ತಾತ್ಕಾಲಿಕ ಉಪನಗರಗಳನ್ನು ನಿರ್ಮಿಸುತ್ತಿದ್ದು 28 ಸಾವಿರಕ್ಕೂ ಹೆಚ್ಚು ಜನ ಉಳಿಯುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಒಟ್ಟು 75 ಕೋಟಿ ವೆಚ್ಚದಲ್ಲಿ 12 ಉಪನಗರಗಳ ನಿರ್ಮಾಣ: 75 ಕೊಟಿ ವೆಚ್ಚದಲ್ಲಿ 12 ತಾತ್ಕಾಲಿಕ ಉಪನಗರಗಳನ್ನು ನಿರ್ಮಿಸುತ್ತಿದ್ದು. ಇದರ ಜವಬ್ದಾರಿಯನ್ನು ಕೆಆರ್‌ಡಿಸಿಐಎಲ್‌ಗೆ ವಹಿಸಲಾಗಿದೆ. ಈಗಾಗಲೇ 494 ಎಕರೆ ಜಮೀನಿನ ರೈತರಿಗೆ ಬೆಳೆಪರಿಹಾರ ನೀಡಿದ್ದು, ಕೊಳವೆ ಬಾವಿಯ ಪೈಪ್‌ಲೈನ್‌ ಇರುವ ರೈತರಿಗೆ ಪ್ರತ್ಯೇಕ ಪರಿಹಾರ ಹಾಗೂ ಕಾರ್ಯಕ್ರಮ ಮುಗಿದ ನಂತರ ಒಂದು ಗುಂಟೆಗೆ 100 ರೂ.ಗಳಂತೆ ಜಮೀನಿಗೆ ಬದು ನಿರ್ಮಿಸಲು ಹಣ ನೀಡಲಾಗಿದೆ ಎಂದು ತಿಳಿಸಿದರು.

ಬೃಹತ್‌ ವೇದಿಕೆ ನಿರ್ಮಾಣ: ತ್ಯಾಗಿನಗರ, ಪಂಚಕಲ್ಯಾಣ ನಗರ, ಎರಡು ಕಳಸಾನಗರಗಳು, ಅಧಿಕಾರಿಗಳ ನಗರ, ಸ್ವಯಂ ಸೇವಕ ನಗರ, ಜನಪ್ರತಿನಿಧಿಗಳ ನಗರ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಸ್ತುಪ್ರದರ್ಶನ,
ಬೋಜನಾಲಯ, ಮಾಧ್ಯಮ ನಗರ, ಪೊಲೀಸ್‌, ಅಗ್ನಿ ಶಾಮಕ, ವಾಹನ ನಿಲಾœಣ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಇನ್ನೂ ಮುಂತಾದ 12 ಉಪ ನಗರಗಳನ್ನು ನಿರ್ಮಿಸುತ್ತಿದ್ದು 1 ಲಕ್ಷ ಚದರ ಅಡಿಯಲ್ಲಿ ಮುಖ್ಯ ಸಭಾಂಗಣವನ್ನು ನಿರ್ಮಿಸುವ ಯೋಜೆನೆಯಿದೆ, ಅಂದರೆ 210 ಅಡಿ ಅಗಲ 600 ಅಡಿ ಉದ್ದದ ಬೃಹತ್‌ ವೇದಿಕೆಯನ್ನು ನಿರ್ಮಾಣ ಮಾಡಲಾಗುತ್ತದೆ.

ಧೂಳು ಏಳದಂತೆ ಕ್ರಮಕ್ಕೆ ಸೂಚನೆ: ರಸ್ತೆಗಳಲ್ಲಿ ಹೆಚ್ಚು ಧೂಳು ಏಳದಂತೆ ನಿರಂತರವಾಗಿ ನೀರು ಹಾಯಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸದರು. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಶಾಸಕರ ನೇತೃತ್ವದಲ್ಲಿ
ಪ್ರತಿದಿನ ಮುಂಜಾನೆ ಅಧಿಕಾರಿಗಳು ಇಲ್ಲಿಯೇ ವಾಯುವಿಹಾರ ಮಾಡುವಂತೆ ತಿಳಿಸಿದರು.

ಈ ವೇಳೆ ಸ್ಥಳದಲ್ಲಿ ಮಹಾಮಸ್ತಾಕಾಭಿಷೇಕ ವಿಶೇಷಾಧಿಕಾರಿ ಬಿ.ಎನ್‌. ವರಪ್ರಸಾದರೆಡ್ಡಿ ಕೆಆರ್‌ ಡಿಸಿಐಎಲ್‌ನ್‌ ಮುಖ್ಯ ಅಭಿಯಂತರಾದ ಎಸ್‌ .ಸಿ.ಪುಟ್ಟಸ್ವಾಮಿ, ಸಹಾಯಕ ಅಭಿಯಂತರಾದ ಪ್ರಸನ್ನ ಇನ್ನೂ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದ ಮಾರ್ಪಾಡನ್ನು ಗುರುತುಹಾಕಿಕೊಂಡರು. ಮಹಾಮಸ್ತಕಾಭಿಷೇಕದ ವಸತಿ ಉಪಸಮಿತಿ ಅಧ್ಯಕ್ಷ ಅನಿಲ್‌ ಸೇಠ್ಠ, ಶಾಸಕ ಸಿ.ಎನ್‌.ಬಾಲಕೃಷ್ಣ, ಗುತ್ತಿಗೆದಾರ ಸೋಮೇಶ್‌, ರಾಜಸ್ವ ನಿರೀಕ್ಷಕ ಮೋಹನ್‌ ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.