ಯಗಚಿ ಜಲಾಶಯದ ಸೌಂದರ್ಯ ಕಸಿದ “ಕಳೆ’


Team Udayavani, Jun 27, 2023, 2:03 PM IST

tdy-16

ಬೇಲೂರು: ಪಟ್ಟಣದ ನಾಗರಿಕರು ಸೇರಿ ತಾಲೂಕಿನ ರೈತರ ಜೀವನಾಡಿಯಾಗಿರುವ ಯಗಚಿ ಜಲಾಶ ಯದಲ್ಲಿ ಅಂತರಗಂಗೆ(ಕಳೆ ಗಿಡ) ಬೆಳೆದು ನೀರು ಕಲುಷಿತಗೊಳ್ಳುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

ಪಟ್ಟಣದಿಂದ 2.5 ಕಿ.ಮೀ. ದೂರದ ಚಿಕ್ಕಬ್ಯಾಡಿಗೆರೆ ಸಮೀಪ 1984ರಲ್ಲಿ ನಿರ್ಮಿಸಲಾದ ಯಗಚಿ ಜಲಾಶಯ 2 ಸಾವಿರ ಹೆಕ್ಟೇರ್‌ ಅಚ್ಚುಕಚ್ಚು ಪ್ರದೇಶ ಹೊಂದಿದೆ. ತಾಲೂಕಿನಲ್ಲಿ 7 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಅಲ್ಲದೆ, ಬೇಲೂರು, ಅರಸೀಕೆರೆ, ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದೆ.

ಜನರಲ್ಲಿ ಆತಂಕ: ಎರಡು ವರ್ಷದಿಂದ ಜಲಾಶಯದ ನೀರಿನ ಮೇಲೆ ಕಳೆಗಿಡ ಬೆಳೆದಿದ್ದು, ಅದರಲ್ಲಿ ಹುಳುಉಪ್ಪಟೆಗಳು, ವಿಷಜಂತುಗಳ ಜೊತೆಗೆ ಕಸವೂ ಸೇರಿ ದುರ್ನಾತ ಬೀರುವ ಸ್ಥಿತಿಗೆ ತಲುಪಿದೆ. ಜಲಾಶಯದ ನೀರು ಸೇವಿಸಲು ನಗರದ ಜನ ಹಿಂದೇಟು ಹಾಕುವಂತೆ ಆಗಿದೆ.

ಮೀನುಗಾರಿಕೆಗೆ ಸಮಸ್ಯೆ: ಈ ಕಳೆಗಿಡದಿಂದ ಜಲಾಶಯ ನಂಬಿ ಬದುಕುತ್ತಿರುವ 200 ಮೀನು ಗಾರರ ಕುಟುಂಬ ಬೀದಿಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಕಳೆಯಿಂದ ಮೀನುಗಾರಿಕೆ ಮಾಡಲು ಸಾಧ್ಯವಾ ಗುತ್ತಿ ಲ್ಲ. ಬಲೆ ಹಾಕಿದರೆ ಮೀನಿನ ಬದಲಿಗೆ ಕಳೆ ಸಿಕ್ಕಿಕೊಂಡು ಹರಿದುಹೋಗುತ್ತಿದೆ. ದೋಣಿ ಕೂಡ ಮುಂದೆ ಸಾಗದೆ ಮೀನುಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

ನೀರೇ ಕಾಣುವುದಿಲ್ಲ: ವಿಶ್ವ ವಿಖ್ಯಾತ ಬೇಲೂರು ಚೆನ್ನಕೇಶವಸ್ವಾಮಿ ದೇಗುಲವನ್ನು ವೀಕ್ಷಿಸಲು ದೇಶವಷ್ಟೇ ಅಲ್ಲ, ವಿದೇಶಿ ಪ್ರವಾಸಿಗರೂ ಆಗಮಿಸುತ್ತಾರೆ. ಚನ್ನಕೇಶವ ಸ್ವಾಮಿ ದರ್ಶನ ಪಡೆದವರು ಜಲಾಶಯ ವೀಕ್ಷಿಸಲು ಬರುತ್ತಾರೆ. ಆದರೆ, ಜಲಾಶಯದ ನೀರನ್ನು ಜಂಡು ಸಂಪೂರ್ಣ ಆವರಿಸಿಕೊಂಡಿರುವ ಕಾರಣ, ಡ್ಯಾಂನ ಸೌಂದರ್ಯಕ್ಕೆ ಧಕ್ಕೆ ಬಂದಿದೆ. ಇದೇನು ಜಲಾಶಯವೋ ಅಥವಾ ಕಲುಷಿತಗೊಂಡ ಕೆರೆಯೋ ಎಂದು ಪ್ರವಾಸಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ನದಿ, ಕೆರೆಗೂ ಹಬ್ಬಿದ ಕಳೆ: ಜಲಾಶಯದಲ್ಲಿ ಕಳೆಗಿಡದ ಜೊತೆಯಲ್ಲಿ ಹೂಳೂ ತುಂಬಿದ್ದು, ನೀರು ಹರಿಸಿದರೆ ಕಳೆಯೂ ಹೊರಗೆ ಬಂದು ರೈತರ ಜಮೀನು, ನದಿ, ಸಣ್ಣ ಕೆರೆಗಳನ್ನು ಸೇರುತ್ತಿದೆ. ಕೂಡಲೇ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಜಲಾಶಯದಲ್ಲಿ ಬೆಳೆದಿರುವ ಕಳೆ ಗಿಡವನ್ನು ತೆಗೆದು ಶುದ್ಧ ಕುಡಿಯುವ ನೀರು ಒದಗಿಸಲು, ಮೀನುಗಾರರ ಸಮಸ್ಯೆ ದೂರ ಮಾಡಲು ಮುಂದಾಗಬೇಕಿದೆ.

ತಾಲೂಕು ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ತೋಫಿಕ್‌ ಮಾತನಾಡಿ, ಈ ಹಿಂದೆ ಜಲಾಶಯ ತುಂಬ ಚೆನ್ನಾಗಿತ್ತು. ಚಿಕ್ಕಮಗಳೂರು ದಂಟರಮುಕ್ಕಿ ಕೆರೆಯಲ್ಲಿ ಕಾಣಿಸಿಕೊಂಡಿದ್ದ ಕಳೆ ಗಿಡ ಇಲ್ಲಿನ ಜಲಾಶಯ ಅವರಿಸಿಕೊಂಡಿದೆ. ಇದರಿಂದ ಜಲಾಶದಲ್ಲಿರುವ ನೀರು ವಾಸನೆ ಬರುತ್ತಿದೆ. ಕೂಡಲೇ ಅಧಿಕಾರಿಗಳು ಕಳೆ ಗಿಡ ತೆಗೆಯಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಯಗಚಿ ಜಲಾಶಯದಲ್ಲಿ 20 ವರ್ಷದಿಂದ ಮೀನು ಹಿಡಿದು ಜೀವನ ಸಾಗಿಸುತ್ತಿದ್ದೇವೆ. ಜಂಡು ಬೆಳೆದಿರುವುದರಿಂದ ಮೀನು ಹಿಡಿಯಲು ಆಗುತ್ತಿಲ್ಲ. 2 ವರ್ಷದಿಂದ ಇಲಾಖೆ ಅಧಿಕಾರಿಗಳಿಗೆ ಜಂಡು ತೆಗೆಯುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಸೂಚಿಸಿ ಜಂಡು ತೆರವು ಮಾಡಿಸಬೇಕು. ●ಅಬ್ದುಲ್‌ ಸಮದ್‌, ನಿರ್ದೇಶಕ, ತಾಲೂಕು ಮೀನುಗಾರರ ಸ್ವಸಹಾಯ ಸಂಘ

ಪ್ರವಾಸಿ ಕೇಂದ್ರವಾದ ಬೇಲೂರು ಪಟ್ಟಣಕ್ಕೆ ಪ್ರತಿ ದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಪಟ್ಟಣದ ಜನತೆಗೆ, ಪ್ರವಾಸಿಗರು ಜಲಾಶಯದ ನೀರು ಕುಡಿಯುತ್ತಾರೆ. ಜಂಡು ಬೆಳೆದಿರುವುದರಿಂದ ನೀರು ಕಲುಷಿತಗೊಂಡು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಹೀಗಾಗಿ ಜಲಾಶಯ ಸ್ವತ್ಛಗೊಳಿಸಿ, ಶುದ್ಧ ಕುಡಿಯುವ ನೀರು ಪೊರೈಸಲು ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ● ನರಸಿಂಹಸ್ವಾಮಿ, ಅಧ್ಯಕ್ಷ, ಶ್ರೀಲಕ್ಷ್ಮೀ ಸಂಗೀತ ಕಲಾ ಸೇವಾ ಟ್ರಸ್ಟ್‌

ಜಲಾಶಯದಲ್ಲಿ ಕಳೆಗಿಡ ಆವರಿಸಿಕೊಂಡಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅದನ್ನು ತೆರವು ಮಾಡುವ ಬಗ್ಗೆ ಚರ್ಚೆ ನಡೆದಿದೆ. ಕುಡಿಯಲು ಇಲ್ಲಿನ ನೀರು ಪೂರೈಕೆ ಆಗುವ ಕಾರಣ ಯಾವುದೇ ರಾಸಾಯನಿಕ ಬಳಕೆ ಮಾಡುವಂತಿಲ್ಲ. ವೈಜ್ಞಾನಿಕವಾಗಿ ಜಲಾಶಯದಿಂದ ಕಳೆ ತೆಗೆಯಲು ಕ್ರಮಕೈಗೊಳ್ಳಲಾಗುತ್ತದೆ. ● ರಾಜೇಶ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಯಗಚಿ ಅಣೆಕಟ್ಟು ಉಪವಿಭಾಗ.

ಜಲಾಶಯದಲ್ಲಿ ಕಳೆಗಿಡ ತುಂಬಿರುವುದರಿಂದ ಮೀನುಗಾರರಿಗೆ ತೊಂದರೆಯಾಗಿದೆ. 200 ಕುಟುಂಬಗಳು ಮೀನುಗಾರಿಕೆಯಲ್ಲಿ ತೊಡಗಿವೆ. ಈಗಾಗಲೇ ಜಲಾಶಯಕ್ಕೆ 7 ಲಕ್ಷ ಮೀನುಮರಿ ಬಿಡಲಾಗಿದೆ. ಕಳೆ ತೆಗೆಯದಿದ್ದರೆ ಮೀನುಗಳಿಗೂ ತೊಂದರೆ ಆಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಡ್ಯಾಂ ನಿರ್ವಹಣಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ●ರವಿಕುಮಾರ್‌, ಮೀನುಗಾರಿಗೆ ಇಲಾಖೆ ಸಹಾಯಕ ನಿರ್ದೇಶಕ

-ಡಿ.ಬಿ.ಮೋಹನ್‌ಕುಮಾರ್‌

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.