ಅನಧಿಕೃತ ಕ್ಲಿನಿಕ್ಗಳ ಮೇಲೆ ಆರೋಗ್ಯಾಧಿಕಾರಿಗಳ ದಾಳಿ
Team Udayavani, Nov 15, 2018, 5:24 PM IST
ಸವಣೂರು: ಪಟ್ಟಣ ಹಾಗೂ ತಾಲೂಕಿನ ಕಾರಡಗಿ ಗ್ರಾಮದಲ್ಲಿ ಖಾಸಗಿ ವೈದ್ಯ ವೃತ್ತಿ ನಡೆಸುತ್ತಿದ್ದ ಕ್ಲಿನಿಕ್ಗಳ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ತಾಲೂಕು ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಅನಧಿಧೀಕೃತ ಕ್ಲಿನಿಕ್ಗಳನ್ನು ನಡೆಸುತ್ತಿದ್ದ ನಕಲಿ ವೈದ್ಯರಿಗೆ ನೋಟಿಸ್ ನೀಡಿದರು.
ಸವಣೂರು ಪಟ್ಟಣದಲ್ಲಿ ಅನಧಿಧೀಕೃತವಾಗಿ ನಕಲಿ ವೈದ್ಯ ವೃತ್ತಿ ನಡೆಸುತ್ತಿದ್ದ ಡಿ.ಕೆ. ಸಂಕನೂರ, ಎಂ.ಜೆ.ತೋಶಿಖಾನೆ, ಸಂಕ್ಲಿಪೂರ, ಅಬ್ದುಲ್ ರೆಹಮಾನ್ ಕಿಸ್ಮತಗಾರ, ಅಲ್ಲಾವುದ್ದೀನ ಗೋಕಾಕ, ಅಫlಲ್ಅಹ್ಮದ್ ಸಂಕ್ಲಿಪೂರ, ಕಾರಡಗಿ ಗ್ರಾಮದ ಮೆಹಬೂಬ್ ಎಸ್. ಗುತ್ತಲ, ಮಹಿಮಾ ಬೆಳವಡಿ ಸೇರಿದಂತೆ ವಿವಿಧ ಕಡೆ ಅನ ಧೀಕೃತ ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡ ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ.ಎ.ಆರ್. ಹಾಗೂ ತಂಡ, ಕೆಪಿಎಂಇ ಕಾಯ್ದೆಯಡಿ ನೋಂದಣಿ ಪ್ರಮಾಣ ಪತ್ರ ಪಡೆಯದೆ ಮತ್ತು ವೈದ್ಯಕೀಯ ಪ್ರಮಾಣ ಪತ್ರ ಹೊಂದಿರದೆ ವೈದ್ಯಕೀಯ ಸೇವೆ ನಡೆಸುತ್ತಿರುವುದು ಕಾನೂನಿನಲ್ಲಿ ಅಪರಾಧವಾಗಿದೆ. ಹೀಗಾಗಿ ನೀವು ಈ ಕುರಿತು ಲಿಖೀತ ಸ್ಪಷ್ಟೀಕರಣ ನೀಡಬೇಕು ಹಾಗೂ ತಕ್ಷಣವೇ ಕ್ಲಿನಿಕ್ನ್ನು ಮುಚ್ಚುವ ಮೂಲಕ ವೈದ್ಯಕೀಯ ಸೇವೆ ನೀಡದಿರಲು ಸೂಚಿಸಿದರು. ಒಂದು ವೇಳೆ ಇದೇ ರೀತಿ ಮುಂದುವರಿಸಿದ್ದಲ್ಲಿ ಕಾನೂನಿನ ಪ್ರಕಾರ ಸೆಕ್ಷನ್ 40ರ ಭಾಗ-2ರ ಮತ್ತು 38, 420 ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ನೋಟಿಸ್ ನೀಡಿದರು. ಆರೋಗ್ಯ ಇಲಾಖೆ ಮೆಲ್ವಿಚಾರಕ ಪಿ.ಎಲ್. ಪೂಜಾರ, ಬಿಎಚ್ಇಒ ಎಸ್.ಎಫ್.ಹನಕನಳ್ಳಿ, ಬಿಪಿಎಂ ನಾಗರಾಜ ಹಾವೇರಿ ಇದ್ದರು.
ಕೆಪಿಎಂಇ ಅಡಿ ನೋಂದಾಯಿಸದೇ ನಕಲಿ ವೈದ್ಯ ವೃತ್ತಿ ನಡೆಸುತ್ತಿರುವ ಕ್ಲಿನಿಕ್ಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಡಿ.ಕೆ.ಸಂಕನೂರ ಸೇರಿದಂತೆ ಕೆಲವರು ಮಾನ್ಯತೆ ಇಲ್ಲದ ವೈದ್ಯ ಕೋರ್ಸ್ಗಳ ಬೋರ್ಡ್ ಹಾಕಿ ರಾಜಾರೋಷವಾಗಿ ವೃತ್ತಿ ನಡೆಸುತ್ತಿರುವುದು ಕಂಡುಬಂದಿದೆ. ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಡಾ| ಸತೀಶ.ಎ.ಆರ್.
ತಾಲೂಕು ಆರೋಗ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
ಹಾವೇರಿ: ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ
ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು