16ನೇ ಶತಮಾನದ ಶಿಲಾಶಾಸನ ಪತ್ತೆ 


Team Udayavani, Nov 14, 2018, 4:31 PM IST

14-november-17.gif

ಹಾವೇರಿ: ರಾಣಿಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ 16ನೇ ಶತಮಾನಕ್ಕೆ ಸೇರಿದ ‘ವಿಜಯನಗರೋತ್ತರ’ ಕಾಲದ ಶಿಲಾಶಾಸನ ಪತ್ತೆಯಾಗಿದೆ. ಇತಿಹಾಸ ಸಂಶೋಧಕ ಪ್ರಮೋದ ನಲವಾಗಲ ಮತ್ತು ಡಾ| ರಮೇಶ ಎನ್‌. ತೆವರಿ ಈ ಶಾಸನ ಪತ್ತೆ ಹಚ್ಚಿದ್ದಾರೆ. ಈ ಶಾಸನವು ಮೆಡ್ಲೇರಿ ಗ್ರಾಮದಲ್ಲಿ ಕಂಡುಬರುವ ಅಪ್ರಕಟಿತ ಶಾಸನವಾಗಿದ್ದು, ಗ್ರಾಮದ ಕೋಟೆ ಭಾಗದಲ್ಲಿರುವ ಚಂದ್ರಗುತ್ತೆಮ್ಮ ದೇವಸ್ಥಾನದ ಪಕ್ಕದಲ್ಲಿ ಕಂಡುಬಂದಿದೆ.

ಶಿಲಾಶಾಸನವು ಚಂದ್ರಗುತ್ತೆಮ್ಮ ದೇವಸ್ಥಾನವನ್ನು ಇತ್ತೀಚೆಗೆ ಜೀರ್ಣೋದ್ಧಾರ ಮಾಡುವ ಸಂದರ್ಭದಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ಸಾಹಿತಿ ಮಾರುತಿ ತಳವಾರ ಸಂಶೋಧಕರಿಗೆ ತಿಳಿಸಿದ್ದಾರೆ. ‘ಮೆಡಿಲೇರಿಯ ತಾಳವಾರಿಕೆ ಜೋನಿನಾಯಕಗೆ ಯರಡು ಪಾಲು ಕರಿಯ ಅಂಣನ ಮಗ ತಿರಿಕಿ ನಾಯಕನ ವಾರಿಗೆವೊಂದು ಪಾಲು’ ಎಂಬ ವಿಷಯವು ಈ ಶಾಸನದಲ್ಲಿದ್ದು, ಶಿಲಾಶಾಸನದಲ್ಲಿ ಅಕ್ಷರಗಳನ್ನು ಆರು ಸಾಲುಗಳಿಂದ ಖಂಡರಿಸಲಾಗಿದೆ.

ಶಿಲಾಶಾಸನದಲ್ಲಿರುವ ವಿಷಯವನ್ನು ವಿಶ್ಲೇಷಿಸಿದಾಗ ಈಗ ಕರೆಯಲ್ಪಡುವ ಮೆಡ್ಲೇರಿ ಗ್ರಾಮ ಈ ಹಿಂದೆ ಮೆಡಿಲೇರಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು ಎಂಬ ಮಾಹಿತಿ ಸ್ಪಷ್ಟವಾಗುತ್ತದೆ. ಮೆಡಿಲೇರಿ ಕಾಲಾಂತರದಲ್ಲಿ ಮೆಡ್ಲೇರಿ ಆಗಿದೆ. ಗ್ರಾಮದಲ್ಲಿ ತಳವಾರಿಕೆ ಪರಂಪರೆ ಇತ್ತು ಎಂಬುದಕ್ಕೆ ಶಾಸನದಲ್ಲಿ ಕಂಡುಬರುವ ತಾಳವಾರಿಕೆ ಪದವೇ ನಿದರ್ಶನವಾಗಿದೆ. ಜೋನಿನಾಯಕ ಕರಿಯಅಂಣ ಈತನ ಮಗ ತಿರಿಕಿನಾಯಕ, ಇವರು ತಾಳವಾರಿಕೆ ವೃತ್ತಿಯನ್ನು ಈ ಗ್ರಾಮದಲ್ಲಿ ಕೈಗೊಂಡಿದ್ದ ಉಲ್ಲೇಖವನ್ನು ತಿಳಿಸುತ್ತದೆ. ಬಹುಶಃ ಹಿಂದೆ ಈ ಪ್ರದೇಶವನ್ನು ಒಬ್ಬ ರಾಜ ಅಥವಾ ಅಧಿಕಾರಿ ಆಳುತ್ತಿದ್ದು, ತಳವಾರ ಜೋನಿನಾಯಕ, ಕರಿಯ ಅಂಣನ ಮಗ ತಿರಿಕಿ ನಾಯಕ ಇವರುಗಳಿಗೆ ಗ್ರಾಮ ಸಂರಕ್ಷಣೆಯ ಜವಾಬ್ದಾರಿ ನೀಡಿರುವ ಮಾಹಿತಿ ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಜೋನಿನಾಯಕ, ತಿರಿಕಿ ನಾಯಕ ಇವರು ನಿಷ್ಠೆ, ಪ್ರಾಮಾಣಿಕತೆಯಿಂದ ಗ್ರಾಮ ಸಂರಕ್ಷಣೆ ಮಾಡುತ್ತಿದ್ದ ಪ್ರಯುಕ್ತ ರಾಜ ಅಥವಾ ಅಧಿಕಾರಿ ಇವರಿಗೆ ಭೂದಾನ ಮಾಡಿರಬಹುದಾಗಿದ್ದು, ಅದನ್ನು ಅವರು ಎರಡು ಪಾಲು, ಒಂದು ಪಾಲಿನಂತೆ ಹಂಚಿಕೊಂಡಿರಬಹುದೆಂದು ಹಾಗೂ ಈ ಶಾಸನವು 16ನೇ ಶತಮಾನಕ್ಕೆ ಸೇರಿದ್ದು ‘ತಾಳವಾರಿಕೆ’ ಪರಂಪರೆಯನ್ನು ತಿಳಿಸುವ ಮಹತ್ವದ ಶಾಸನವಾಗಿದೆ ಎಂದು ಸಂಶೋಧಕ ಡಾ| ದೇವರಕೊಂಡ ರೆಡ್ಡಿ ವಿಶ್ಲೇಷಿಸಿದ್ದಾರೆ. ‘ತಾಳವಾರಿಕೆ’ಗೆ ಪುಷ್ಠಿಕೊಡುವಂತೆ ಈಗಲೂ ಮೆಡ್ಲೇರಿ ಗ್ರಾಮದಲ್ಲಿ ಕಂಡುಬರುವ ‘ತಳವಾರ’ ಹೆಸರಿನ ಮನೆತನಗಳು ಮೇಲಿನ ನಾಯಕರ ವಂಶಸ್ಥರಿಗೆ ಸಂಬಂಧಪಟ್ಟವುಗಳಾಗಿರಬಹುದೆಂದು ಸಂಶೋಧಕರು ತಿಳಿಸಿದ್ದಾರೆ.

ಮಾಸ್ತೆಮ್ಮ (ಮಹಾಸತಿ) ಗುಡಿಯ ಪಕ್ಕದಲ್ಲಿ ತೃಟಿತ ಶಾಸನವಿದ್ದು ಹಾಗೂ ತುಂಗಭದ್ರಾ ನದಿಯ ದಂಡೆಯ ಮೇಲಿರುವ ರಾಮಲಿಂಗೇಶ್ವರ ದೇವಸ್ಥಾನದ ಮುಂದೆ ಶಿವಲಿಂಗ ಹಾಗೂ ನಂದಿಯ ವಿಗ್ರಹಗಳು ಬಿದ್ದಿದ್ದು ಇಂತಹ ಸ್ಥಳದಲ್ಲಿ ಪುರಾತತ್ವ ಇಲಾಖೆಯವರು ಉತ್ಖನನ ಕೈಗೊಂಡಲ್ಲಿ ಕೆಲವು ಮಹತ್ವದ ಐತಿಹಾಸಿಕ ಪುರಾವೆಗಳು ಲಭಿಸಬಹುದೆಂದು ಸ್ಥಳೀಯ ಸಾಹಿತಿ ಮಾರುತಿ ತಳವಾರ ಅಭಿಪ್ರಾಯಪಟ್ಟಿದ್ದಾರೆ.

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.