ಕುಂಬಾರರಿಗೆ ಶಾಪವಾದ ಪಿಂಗಾಣಿ ಹಣತೆ
ಕೈಚಳಕದಿಂದ ಸುಂದರವಾದ ಹಣತೆಗಳನ್ನು ತಯಾರಿಸುತ್ತಾರೆ.
Team Udayavani, Nov 5, 2021, 7:05 PM IST
ಹಾವೇರಿ: ಬೆಳಕಿನ ಹಬ್ಬ ದೀಪಾವಳಿ ಹಬ್ಬದಲ್ಲಿ ಎಲ್ಲರ ಮನೆಯಲ್ಲಿ ದೀಪ ಹೊತ್ತಿಸಲು ಹಣತೆ ತಯಾರಿಸುವ ಜಿಲ್ಲೆಯ ಕುಂಬಾರರ ಬದುಕಿನಲ್ಲಿ ಕತ್ತಲು ಆವರಿಸಿದೆ. ಆಧುನಿಕ ಬದುಕಿನ ತಲ್ಲಣಗಳಿಂದಾಗಿ ಹಲವಾರು ಏರಿಳಿತಗಳ ಮಧ್ಯೆಯೂ ತಮ್ಮ ಮೂಲ ಕುಲ ಕಸುಬನ್ನು ಕೈಬಿಡಬಾರದು ಎಂಬ ಸಂಕಲ್ಪದಿಂದ ಸಂಕಷ್ಟದ ಬದುಕಿನಲ್ಲಿಯೇ ನಗರದ
ಕುಂಬಾರಗುಂಡಿಯಲ್ಲಿ 10ಕ್ಕೂ ಹೆಚ್ಚು ಕುಂಬಾರರ ಕುಟುಂಬಗಳು ಹರವಿ, ವಿವಿಧ ಮಾದರಿ ಹಣತೆ, ಬಗೆಬಗೆಯ ಮಡಕೆಗಳನ್ನು ತಯಾರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಆದರೆ, ಪಿಂಗಾಣಿ ಇವರ ಬದುಕಿಗೆ ಶಾಪವಾಗಿ ಪರಿಣಮಿಸಿದೆ.
ದೂರದ ಕೂಳೇನೂರ ಗ್ರಾಮದ ಕೆರೆ ಸೇರಿದಂತೆ ಸುತ್ತಮುತ್ತಲಿನ ವಿವಿಧ ಕೆರೆಗಳಿಂದ ಜೇಡಿ ಮಣ್ಣನ್ನು ಸುಮಾರು 3000ರೂ. ವೆಚ್ಚದಲ್ಲಿ ಟ್ರ್ಯಾಕ್ಟರ್ ಮೂಲಕ ತಂದು, ಹದ ಮಾಡಿ ಯಾವುದೇ ಸಾಧನಗಳ ಸಹಾಯವಿಲ್ಲದೇ ತಮ್ಮ ಕೈಚಳಕದಿಂದ ಸುಂದರವಾದ ಹಣತೆಗಳನ್ನು ತಯಾರಿಸುತ್ತಾರೆ. ಸತತ ಆರೇಳು ಗಂಟೆಗಳ ಕಾಲ ಬಟ್ಟಿಯಲ್ಲಿ ಸುಟ್ಟು ಮಣ್ಣಿನ ಹಣತೆಗಳಿಗೆ ಅಂತಿಮ ರೂಪ ನೀಡುತ್ತಾರೆ. ಹೀಗೆ 1 ಟ್ರ್ಯಾಕ್ಟರ್ ಮಣ್ಣಿನಲ್ಲಿ ಸಾವಿರಾರು ರೂ. ಖರ್ಚು ಮಾಡಿ ಸುಮಾರು 4ಸಾವಿರದಷ್ಟು ಹಣತೆಗಳನ್ನು ತಯಾರಿಸುತ್ತಾರೆ. ಕೇವಲ 20ರಿಂದ 25ರೂ.ಗೆ ಡಜನ್ನಂತೆ ಹಣತೆಗಳನ್ನು ನೀಡಿದರೂ ಅವುಗಳನ್ನು ಕೊಳ್ಳುವವರ ಸಂಖ್ಯೆ ಮಾತ್ರ ಗಣನೀಯವಾಗಿ ಕಡಿಮೆಯಾಗಿದ್ದು, ಬದುಕು ನಡೆಸುವುದು ಕಷ್ಟಕರವಾಗಿದೆ.
ಕಟ್ಟಿಗೆ ಕೊಳ್ಳಲಾಗದ ಸ್ಥಿತಿ: ಹತ್ತಾರು ವರ್ಷಗಳ ಹಿಂದೆ ಲಕ್ಷ ಲಕ್ಷ ದೀಪಗಳನ್ನು ತಮ್ಮ ಮನೆ ಮುಂದೆ ಮಾರಾಟ ಮಾಡುತ್ತಿದ್ದ ಈ ಕುಟುಂಬಗಳು ಐದಾರು ವರ್ಷಗಳಿಂದ ಸಾವಿರ ಲೆಕ್ಕದಲ್ಲಿ ಹಣತೆಗಳನ್ನು ಮಾರಾಟ ಮಾಡಿ ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದರು. ಆದರೀಗ ಪರಿಸ್ಥಿತಿ ಸಾಕಷ್ಟು ಭಿನ್ನವಾಗಿದ್ದು, ತಾವು ಹಗಲು, ರಾತ್ರಿ ಎನ್ನದೇ ಕಷ್ಟಪಟ್ಟು ತಯಾರಿಸಿದ ದೀಪಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಸಾವಿರ ಬದಲಾಗಿ ಕೇವಲ ನೂರರ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರ ಪರಿಣಾಮ ದೀಪಗಳನ್ನು ಬಟ್ಟಿಯಲ್ಲಿ ಸುಡಲು ಇವರಿಂದ ಕಟ್ಟಿಗೆಗಳನ್ನು ಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗಾಗಿ ದೀಪಗಳನ್ನು ಸುಡಲು ಬಟ್ಟಿಯಲ್ಲಿ ಪ್ಲಾಸ್ಟಿಕ್ ಕವರ್ಗಳನ್ನು, ಉಟ್ಟು ಬಿಟ್ಟ, ಹರಿದ ಹಳೆಯ ಬಟ್ಟೆಗಳನ್ನು, ಸಿಂಪಿಗರಲ್ಲಿ ಲಭ್ಯವಾಗುವ ತುಂಡು ಬಟ್ಟೆಗಳನ್ನು ಅಗ್ಗದ ದರದಲ್ಲಿ ಮಾರಾಟಕ್ಕೆ ತಂದು ಬಳಕೆ ಮಾಡಲಾಗುತ್ತಿದೆ. ದೀಪ, ಮಡಕೆ, ಹರವಿ, ಗಡಗಿಗಳ ತಯಾರಿಕೆಯಿಂದಲೇ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗದ ಅನೇಕ ಕುಟುಂಬಗಳು ಈಗಾಗಲೇ ಬೇರೆ ಬೇರೆ ಕೆಲಸಗಳತ್ತ ಮುಖ ಮಾಡುತ್ತಿದ್ದಾರೆ. ಅಲ್ಲದೇ, ಕೆಲವರು ಕುಂಬಾರಿಕೆ ಜತೆಗೆ ಇತರ ವೃತ್ತಿಗಳನ್ನು ಅವಲಂಬಿಸಿದ್ದಾರೆ.
ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ:
ಮಾರುಕಟ್ಟೆಯಲ್ಲಿ ಇಂದು ಪಿಂಗಾಣಿಯ ವಿವಿಧ ಬಗೆಯ, ನಾನಾ ಆಕಾರಗಳಲ್ಲಿ ಬಂದ ಹಣತೆಗಳಿಗೆ ಗ್ರಾಹಕರು ಮಾರು ಹೋಗಿದ್ದು, ಸ್ಥಳೀಯವಾಗಿ ನಾವು ತಯಾರಿಸಿರುವ ಮಣ್ಣಿನ ಹಣತೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇದರ ಜೊತೆಗೆ ಆಕರ್ಷಕ ಮೊಂಬತ್ತಿ, ಸಿಲಾವರ್, ಮೆಟಲ್ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ಮೇಲೆ ಮಣ್ಣಿನ ದೀಪಗಳ ಬಳಕೆ ಹೇರಳವಾಗಿ ಕಡಿಮೆಯಾಗಿದೆ. ಪಿಂಗಾಣಿ ಹಾಗೂ ಸಿಲಾವರ್ ದೀಪಗಳಿಗಿಂತ ಮಣ್ಣಿನ ದೀಪಗಳು ಅಗ್ಗವಾದರೂ ಒಂದು ವರ್ಷ ಕೊಂಡು ಇಟ್ಟರೆ ಪ್ರತಿ ವರ್ಷ ಬಳಕೆ ಮಾಡಬಹುದು ಎಂಬ ಆಲೋಚನೆಯಲ್ಲಿ ಎಲ್ಲರೂ ಅವುಗಳತ್ತ ಮಾರು ಹೋಗಿದ್ದಾರೆ. ಹೀಗಾಗಿ, ದೀಪದ ಕೆಳಗೆ ಕತ್ತಲು ಎಂಬಂತೆ ದೀಪ ತಯಾರಿಸುವವರ ಬದುಕಿನಲ್ಲಿ ಕತ್ತಲು ಆವರಿಸಿರುವುದು ನಿಜಕ್ಕೂ ನೋವಿನ ಸಂಗತಿ.
ಅನೇಕ ವರ್ಷಗಳಿಂದ ಕಂಬಾರಿಕೆ ವೃತ್ತಿ ನಡೆಸುತ್ತಾ ಪ್ರತಿ ವರ್ಷ ಹಣತೆಗಳನ್ನು ತಯಾರಿಸುತ್ತಿದ್ದೇವೆ. ಆದರೆ, ಪಿಂಗಾಣಿ ಹಾವಳಿಯಿಂದಾಗಿ ನಾವು ತಯಾರಿಸಿದ ಹಣತೆಗಳನ್ನು ಕೊಳ್ಳುವವರು ಇಲ್ಲದಾಗಿದೆ. ಸರ್ಕಾರ ನಮಗೆ ಪ್ರೋತ್ಸಾಹ ನೀಡುವಂತಹ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಹಾಗಾಗಿ, ನಾವು ಜೀವನ ನಡೆಸೋದೇ
ಕಷ್ಟವಾಗಿದೆ.
∙ನೀಲಮ್ಮ ಕುಂಬಾರ, ಹಾವೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
ಹಾವೇರಿ: ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ
ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ