ಶ್ರೀಷ್ಮಾ ಹೆಗಡೆಗೆ “ಭಾರತ ರಕ್ಷಾಮಂತ್ರಿ’ ಪದಕ ಪ್ರದಾನ
Team Udayavani, Jan 30, 2021, 3:53 PM IST
ರಾಣಿಬೆನ್ನೂರು: ತಾಲೂಕಿನ ಕುಮಾರಪಟ್ಟಣ ಆದಿತ್ಯ ಬಿರ್ಲಾ ವಿದ್ಯಾಲಯದ ವಿದ್ಯಾರ್ಥಿನಿ ಶ್ರೀಷ್ಮಾ ಹೆಗಡೆ ಅವರಿಗೆ “ಭಾರತ ರಕ್ಷಾ ಮಂತ್ರಿ’ ಪದಕವನ್ನು ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಅವರು ಗಣರಾಜ್ಯೋತ್ಸವ ಅಂಗವಾಗಿ ಜ.21ರಂದು ನವದೆಹಲಿಯ ಜನರಲ್ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿದರು.
ಕಳೆದ ಬಾರಿ ಶ್ರೀಷ್ಮಾ ಹೆಗಡೆ ಸೀನಿಯರ್ ಅಂಡರ್ ಆಫಿಸರ್, ಕರ್ನಾಟಕ ಗೋವಾ ರೆಜಿಮೆಂಟಿನ ದಾವಣಗೆರೆಯ 33ನೇ ಕರ್ನಾಟಕ ಬೆಟಾಲಿಯನ್ ಯುನಿಟ್ನಿಂದ ದೇಹಲಿಯಲ್ಲಿ ನಡೆದ ಎನ್ಸಿಸಿ ತಂಡದ ನಾಯಕಿಯಾಗಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಶ್ರೀಷ್ಮಾ ಅವರಿಗೆ “ಭಾರತದ ರಕ್ಷಾ ಮಂತ್ರಿ’ ಪದಕ ನೀಡಿ ಗೌರವಿಸಿದರು.
ಇದನ್ನೂ ಓದಿ:ಕಾಲಮಿತಿಯಲ್ಲಿ ಸೇವೆ ಒದಗಿಸಿ