ಲಂಬಾಣಿಗರ ಜೀವನದ ವಿವರ ರಾಜ್ಯ ದಾಖಲೆ ಭಂಡಾರಕ್ಕೆ


Team Udayavani, Oct 8, 2018, 6:20 AM IST

lambani-community.jpg

ಹಾವೇರಿ: ಬಹುವೈಶಿಷ್ಟ್ಯತೆಗಳಿಂದ ಕೂಡಿದ ಲಂಬಾಣಿ ಸಮುದಾಯದ ಭಾಷೆ, ಸಾಹಿತ್ಯ, ಸಂಪ್ರದಾಯ, ಆಚರಣೆ ಸೇರಿ ಸಮುದಾಯದ ಜೀವನದ ಸಮಗ್ರ ವಿವರ ದಾಖಲೀಕರಿಸುವ ಕಾರ್ಯ ನಡೆದಿದ್ದು, ಶೀಘ್ರವೇ ಇದು ರಾಜ್ಯದ ದಾಖಲೆ ಭಂಡಾರ ಸೇರಲಿದೆ.

ಲಂಬಾಣಿಗರ ಸಮಗ್ರ ಆಚರಣೆ, ಸಂಪ್ರದಾಯ, ಹಬ್ಬದಾಚರಣೆ, ವೇಷಭೂಷಣ, ಮೌಖೀಕ ಸಾಹಿತ್ಯವನ್ನು ಅ ಧಿಕೃತವಾಗಿ ದಾಖಲೀಕರಿಸುವ ಕಾರ್ಯ ಈವರೆಗೆ ಆಗಿರಲಿಲ್ಲ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ಲಂಬಾಣಿ ಸಮುದಾಯದ ಸಮಗ್ರ ವಿವರವನ್ನು ಆಡಿಯೋ, ವಿಡಿಯೋ ಹಾಗೂ ಲೇಖೀ ಮೂಲಕ ದಾಖಲಿಸಲು ಮುಂದಾಗಿದೆ. ದಾಖಲೀಕರಣ ಕಾರ್ಯವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ನಿರ್ವಹಿಸುತ್ತಿದೆ.

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು “ಲಂಬಾಣಿ ಜನಪದ ಸಾಹಿತ್ಯ ಸಂಗ್ರಹ ಹಾಗೂ ಬಹುಮುಖೀ ದಾಖಲೀಕರಣ ಯೋಜನೆ’ಯಡಿ ಮೂರು ಕೋಟಿ ರೂ.ವೆಚ್ಚ ಮಾಡುತ್ತಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಎರಡು ವರ್ಷಗಳಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕ್ಷೇತ್ರ ಪ್ರತಿನಿಧಿ ಗಳು, ವಿಶೇಷ ತಂಡಗಳ ಮೂಲಕ ಲಂಬಾಣಿಗರ ಸಮಗ್ರ ಅಧ್ಯಯನ ನಡೆಸಿದೆ. ಈಗ ಮಾಹಿತಿ ದಾಖಲಿಸಿ ಅವುಗಳನ್ನು ಪ್ರತ್ಯೇಕ ಕೃತಿಗಳಾಗಿ ಸಿದ್ಧಪಡಿಸುವ ಕಾರ್ಯ ನಡೆದಿದೆ.

ಏನೆಲ್ಲ ದಾಖಲೆಯಾಗುತ್ತಿದೆ?:
ಲಂಬಾಣಿ ಗಾದೆಗಳು (ಕನ್ನಡ ಅರ್ಥಸಹಿತ), ಲಂಬಾಣಿಗರ ಒಗಟುಗಳು, ಭೀಮಾಸತಿ ಖಂಡ ಕಾವ್ಯ, ಹೂನಾಸತಿ ಖಂಡಕಾವ್ಯ, ಸಿತಾಸತಿ ಖಂಡಕಾವ್ಯ, ಸೇವಾಲಾಲರ ಮಹಾಕಾವ್ಯ, ಸೇವಾಲಾಲ್‌ ಬಯಲಾಟ, ಸಾಮಕಮಾತಾ ಬಯಲಾಟ ಕೃತಿಗಳು ಪ್ರಕಟಣೆಗೆ ಸಿದ್ಧಗೊಂಡಿವೆ.

ರಥನ ಗೀತೆಗಳು, ಸೇವಾಲಾಲರ ಕುರಿತ ಹಾಡುಗಳು, ಲಂಬಾಣಿ ಮಹಿಳೆಯರ ನೃತ್ಯದ ಹಾಡುಗಳು, ಲಂಬಾಣಿಗರ ವಿಶಿಷ್ಟ ಹೋಳಿ ಹಾಡುಗಳು, ಪ್ರಕೃತಿ ಕುರಿತ ಹಾಡುಗಳು, ಮೋಜಿನ ಹಾಗೂ ಇತರ ಹಾಡುಗಳು, ಲಂಬಾಣಿ ಕಥೆಗಳು ಪ್ರಕಟಣೆಗೆ ಸಿದ್ಧಗೊಳ್ಳುತ್ತಿವೆ. ಇವುಗಳ ಜತೆಗೆ ಲಂಬಾಣಿಗರ ವಿಶಿಷ್ಟ ದೀಪಾವಳಿ ಆಚರಣೆ, ಶಿತಳಾ (ಶಿತ್ಲಾ) ಹಬ್ಬ ಆಚರಣೆಗಳ ಸಾಕ್ಷ Âಚಿತ್ರಗಳು ಈಗಾಗಲೇ ಸಿದ್ಧಗೊಂಡಿವೆ. ಲಂಬಾಣಿಗರ ಶೈಲಿಯಲ್ಲಿನ ರಾಮಾಯಣ ಹಾಗೂ ಮಹಾಭಾರತ, ಲಂಬಾಣಿಗರ ವಿಶಿಷ್ಯ ತೀಜ್‌ ಆಚರಣೆಗಳ ಸಾಕ್ಷ ಚಿತ್ರಗಳು ಸಿದ್ಧಗೊಳ್ಳುತ್ತಿವೆ. ಲಂಬಾಣಿ ಸಮುದಾಯದ ಸಮಗ್ರ ಜನಪದ ಸಾಹಿತ್ಯ ಹಾಗೂ ಬಹುಮುಖೀ ದಾಖಲೀಕರಣ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಇದು ಮುಂದೆ ರಾಜ್ಯದಲ್ಲಿ ಲಂಬಾಣಿಗರ ಜೀವನದ ಮೇಲೆ ಬೆಳಕು ಚೆಲ್ಲುವ ಅ ಧಿಕೃತ ದಾಖಲೆಯಾಗಿ ಮಾರ್ಪಾಡಾಗಲಿದೆ.

ಲಂಬಾಣಿ ಜನಪದ ಸಾಹಿತ್ಯ ಸಂಗ್ರಹ ಹಾಗೂ ಬಹುಮುಖೀ ದಾಖಲೀಕರಣ ಕಾರ್ಯ ಅಂತಿಮ ಹಂತದಲ್ಲಿದೆ. ಇನ್ನು ಎರಡೂ¾ರು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸಮಗ್ರ ಸಂಪುಟಕ್ಕೆ ಬದಲಾಗಿ ವೈಶಿಷ್ಟÂತೆಗೆ ತಕ್ಕಂತೆ ಪ್ರತ್ಯೇಕ ಕೃತಿಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಇದು ಮುಂದೆ ಲಂಬಾಣಿಗರ ಸಮಗ್ರ ಜೀವನದ ಅ ಧಿಕೃತ ದಾಖಲೆಯಾಗಲಿದೆ.
– ಡಿ.ಬಿ.ನಾಯಕ, ಕುಲಪತಿಗಳು, ಕಜಾವಿವಿ.

– ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.