ಮೀಸಲಾತಿ ಉಳಿವಿಗೆ ಹೋರಾಟ
Team Udayavani, Jun 11, 2020, 7:01 AM IST
ಗುತ್ತಲ: ಬಂಜಾರಾ ಸಮಾಜದ ಮೀಸಲಾತಿ ಉಳಿವಿಗಾಗಿ ಕರ್ನಾಟಕ ಪ್ರದೇಶ ಬಂಜಾರಾ ಅಭಿವೃದ್ಧಿ ಸಂಘ ಗುತ್ತಲ ಘಟಕದಿಂದ ಮೀಸಲಾತಿ ನಮ್ಮ ಜನ್ಮ ಸಿದ್ಧ ಹಕ್ಕು ನಮ್ಮ ಹಕ್ಕನ್ನು ನಮಗೆ ಕೊಡಿ ಎಂದು ಮುಖ್ಯಮಂತ್ರಿಗೆ ಪತ್ರಗಳನ್ನು ಬರೆಯುವ ಮೂಲಕ ಪತ್ರ ಚಳವಳಿ ನಡೆಸಿದರು.
ಜಿಲ್ಲಾ ಬಂಜಾರ ಸಮಾಜದ ಅಧ್ಯಕ್ಷ ಈರಪ್ಪ ಲಮಾಣಿ ಮಾತನಾಡಿ ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಿಂದ ಲಂಬಾಣಿ, ಭೋವಿ, ಕೋರಮ, ಕೊರಚಾ ಜಾತಿಗಳನ್ನು ಕೈ ಬಿಡುವಂತೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸುಪ್ರೀಂ ಕೋರ್ಟ್ ರಾಷ್ಟ್ರೀಯ ಎಸ್.ಸಿ ಆಯೋಗಕ್ಕೆ ಸೂಚಿಸಿದ್ದಾರೆ. ಆಯೋಗ ಈ ಕುರಿತು ಕರ್ನಾಟಕ ಸರ್ಕಾರದಿಂದ ವರದಿ ಕೇಳಿದೆ. ಲಂಬಾಣಿ ಸಮಾಜವು ಸಮಾಜದಲ್ಲಿ ತೀರಾ ಹಿಂದುಳಿದ ಜಾತಿಯಾಗಿದ್ದು ಅವಮಾನ, ಅಸಮಾನತೆ, ತಾರತಮ್ಯ, ಆರ್ಥಿಕವಾಗಿ ದುರ್ಬಲವಾದ ಸಮುದಾಯವಾಗಿದೆ. ಯಾವುದೇ ಕಾರಣಕ್ಕೂ ಮೀಸಲಾತಿ ತಗೆಯದೇ ಯಥಾಸ್ಥಿತಿಯಲ್ಲಿ ಮುಂದುವರೆಸುವಂತೆ ಸರ್ಕಾರವು ಆಯೋಗಕ್ಕೆ ಶಿಪಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.
ಪ.ಪಂ ಸದಸ್ಯ ಲಿಂಗರಾಜ ನಾಯಕ ಮಾತನಾಡಿ ಲಂಬಾಣಿ ಸಮಾಜವು ಹಿಂದುಳಿದ ಸಮುದಾಯವಾಗಿದ್ದು ಮಕ್ಕಳ ಶಿಕ್ಷಣ, ಮಹಿಳಾ ಶಿಕ್ಷಣ, ಉದ್ಯೋಗಗಲ್ಲಿ ಮೀಸಲಾತಿ ಪಡೆದಾಗ ಮಾತ್ರ ಮುಂದುವರೆಯಲು ಸಾಧ್ಯ ಎಂದರು. ನಂತರ ಮೀಸಲಾತಿ ಉಳಿಸುವ ಸಾವಿರಾರು ಪತ್ರಗಳನ್ನು ಗುತ್ತಲ ಅಂಚೆ ಕಚೇರಿ ಅಧಿಕಾರಿ ಮೂಲಕ ಮುಖ್ಯಮಂತ್ರಿಗೆ ಕಳುಹಿಸಲಾಯಿತು. ರಾಮಪ್ಪ ಲಮಾಣಿ, ಲಕ್ಷ್ಮಣ ಲಮಾಣಿ, ಬದ್ರಿನಾಥ ಲಮಾಣಿ, ಛಾಯಪ್ಪ ಲಮಾಣಿ, ಲಮಾಣಿ, ಆನಂದ ಲಮಾಣಿ, ರಮೇಶ ಲಮಾಣಿ, ವಿಜಯ ಹೊಸಮನಿ, ಮಂಜುನಾಥ ನಾಯಕ, ಶೇಖರ ಲಮಾಣಿ, ಪಾಂಡಪ್ಪ ಲಮಾಣಿ, ಪರಮೇಶ ಲಮಾಣಿ, ಚಂದ್ರಪ್ಪ ಲಮಾಣಿ, ಪಾರವ್ವ ಲಮಾಣಿ, ಶಾಂತಾಭಾಯಿ ಲಮಾಣಿ, ಪುಟ್ಟವ್ವ ಲಮಾಣಿ, ಹೇಮಾಬಾಯಿ ಲಮಾಣಿ ಸೇರಿದಂತೆ ಅನೇಕರಿದ್ದರು