ಗಣೇಶ ವಿಸರ್ಜನೆ ವೇಳೆ ಎರಡು ಕೋಮಿನ ಮಧ್ಯೆ ಹೊಡೆದಾಟ
Team Udayavani, Sep 19, 2018, 6:00 AM IST
ಹಾನಗಲ್ಲ: ಗಣೇಶ ವಿಸರ್ಜನೆ ಸಂದರ್ಭದಲ್ಲಿ ತಾಲೂಕಿನ ಹೀರೂರು ಗ್ರಾಮದಲ್ಲಿ ಎರಡು ಕೋಮಿನ ಮಧ್ಯೆ ನಡೆದ ವಾಗ್ವಾದ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಹೊಡೆದಾಟ ನಡೆಯಿತು. ಪರಿಣಾಮ ನಾಲ್ಕು ದ್ವಿಚಕ್ರವಾಹನ, ಒಂದು ಮ್ಯಾಕ್ಸಿಕ್ಯಾಬ್ ಜಖಂಗೊಂಡಿವೆ. ಅಲ್ಲದೆ, ದುಷ್ಕರ್ಮಿಗಳು 2 ಮೇವಿನ ಬಣವೆಗೆ ಬೆಂಕಿ ಹಚ್ಚಿದ್ದಾರೆ.
ಸೋಮವಾರ ತಡರಾತ್ರಿ ಸಾರ್ವಜನಿಕ ಗಣಪತಿ ವಿಸರ್ಜಿಸಲು ಕೊಂಡೊಯ್ಯುತ್ತಿ ರುವಾಗ ಮಸೀದಿ ಬಳಿ ಧ್ವನಿವರ್ಧಕ ಬಳಕೆ ವಿಷಯದಲ್ಲಿ ನಡೆದ ಮಾತಿನ ಚಕಮಕಿ ಘಟನೆಗೆ ಕಾರಣವಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸದ್ಯ ಶಾಂತಿಯ ವಾತಾವರಣವಿದೆ. ಕಲ್ಲು ತೂರಾಟ ಸಂದರ್ಭ ನಾಲ್ವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಎರಡೂ ಕೊಮಿನ 60 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.