ಉಚಿತ ಯೋಗ ತರಬೇತಿಗೆ ಹೆಸರಾದ ಪತಂಜಲಿ

ಕಳೆದ 13 ವರ್ಷಗಳಿಂದ ಪತಂಜಲಿ ಯೋಗ ಸಮಿತಿ ಸದ್ದಿಲ್ಲದೇ ನಡೆಸುತ್ತಿರುವ ಸಮಾಜಮುಖೀ ಕಾರ್ಯ-ಎಲ್ಲೆಡೆ ಶ್ಲಾಘನೆ

Team Udayavani, Jun 20, 2022, 5:21 PM IST

19

ರಾಣಿಬೆನ್ನೂರ: ಶ್ರೀಸಾಮಾನ್ಯರಲ್ಲಿ ಯೋಗದ ಅರಿವಿನ ಜೊತೆಗೆ ಕಳೆದ 13 ವರ್ಷಗಳಿಂದ ಸ್ಥಳೀಯ ಜಿಲ್ಲಾ ಪತಂಜಲಿ ಯೋಗ ಸಮಿತಿ ಹಾಗೂ ಜಿಲ್ಲಾ ಭಾರತ್‌ ಸ್ವಾಭಿಮಾನ ಟ್ರಸ್‌ rನವರು ನಿಸ್ವಾರ್ಥ ಸೇವೆಯೊಂದಿಗೆ ಸಹಸ್ರಾರು ಜನರಿಗೆ ನಿರಂತರವಾಗಿ ಉಚಿತ ಯೋಗ ತರಬೇತಿ ಶಿಬಿರ, ಆರೋಗ್ಯ ತಪಾಸಣೆ ಶಬಿರಗಳನ್ನು ನಡೆಸುವ ಮೂಲಕ ಸದ್ದಿಲ್ಲದೇ ಮಾಡುತ್ತಿರುವ ಸಮಾಜಮುಖೀ ಕಾರ್ಯಗಳಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

2009ರಿಂದ ಯೋಗ ಶಿಬಿರ: ಯೋಗದಿಂದ ಸರ್ವ ರೋಗಗಳು ನಿವಾರಣೆಯಾಗುತ್ತವೆ ಎಂಬ ಯೋಗ ಗುರು ಬಾಬಾ ರಾಮದೇವ ಅವರ ನುಡಿಯನ್ನು ಮೆಚ್ಚಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಹಾಗೂ ಜಿಲ್ಲಾ ಭಾರತ್‌ ಸ್ವಾಭಿಮಾನ ಟ್ರಸ್ಟ್‌ನವರು ನಗರದ ಆದಿಶಕ್ತಿ ದೇವಸ್ಥಾನದ ಧ್ಯಾನಮಂದಿರದಲ್ಲಿ ಆರಂಭಿಸಿರುವ ಯೋಗ ಶಿಬಿರ ಇಂದು ತಾಲೂಕಿನಾದ್ಯಂತ 40 ಮತ್ತು ಜಿಲ್ಲೆಯ ತಾಲೂಕುಗಳೂ ಸೇರಿದಂತೆ 60ಕ್ಕೂ ಅಧಿ ಕ ಕಡೆಗಳಲ್ಲಿ ಶಿಬಿರಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ. ರೋಗಿಗಳ ಉಚಿತ ತಪಾಸಣೆ: ಯೋಗ ಶಿಬಿರಗಳನ್ನು ಮಾಡುವುದರ ಜೊತೆಗೆ ಹಲವಾರು ಜಾಗೃತಿ ಜಾಥಾದಂತಹ ಜನೋಪಯೋಗಿ ಕಾರ್ಯಗಳನ್ನು ಪತಂಜಲಿ ಸಮಿತಿ ಮಾಡುತ್ತಿದೆ. ಪತಂಜಲಿ ಉತ್ಪನ್ನಗಳ ಮಾರಾಟದೊಂದಿಗೆ ಪ್ರತಿದಿನ ಆಗಮಿಸುವ ಅನೇಕರಿಗೆ ಇಲ್ಲಿನ ಪಿಬಿ ರಸ್ತೆಯಲ್ಲಿರುವ ಪತಂಜಲಿ ಮೇಘಾ ಸ್ಟೋರ್‌ನಲ್ಲಿಯೇ ನುರಿತ ವೈದ್ಯರಿಂದ ಪ್ರತಿ ದಿನ ಉಚಿತವಾಗಿ ತಪಾಸಣೆ, ಸಲಹೆಗಳನ್ನು ನೀಡಲಾಗುತ್ತದೆ.

ನುರಿತ ಯೋಗ ಶಿಕ್ಷಕರ ಬಳಕೆ: ಸರ್ವ ರೋಗಕ್ಕೂ ಯೋಗವೇ ಮದ್ದು ಎಂದರಿತ ಜಿಲ್ಲಾ ಪತಂಜಲಿ ಸಮಿತಿ ಅಧ್ಯಕ್ಷ ರವಿ ಬಿಜಾಪೂರ ಅವರು ಆಪ್ತರು, ನಾಗರಿಕರು, ಯೋಗ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ಆರಂಭಿಸಿದ ಶಿಬಿರಗಳು ಈಗಲೂ ಅಡ್ಡಿ ಆತಂಕಗಳಿಲ್ಲದೇ ನಿರಂತರವಾಗಿ ಮುನ್ನಡೆಯುತ್ತಿವೆ. ಜಿಲ್ಲಾದ್ಯಂತ ಪ್ರತಿದಿನ ಸುಮಾರು 1000ಕ್ಕೂ ಅಧಿ ಕ ಜನರು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದು, 100ಕ್ಕೂ ಅಧಿಕ ನುರಿತ ಯೋಗ ಶಿಕ್ಷಕರು ಉಚಿತವಾಗಿ ಶಿಬಿರ ಮುನ್ನಡೆಸಿಕೊಡುತ್ತಿದ್ದಾರೆ.

ಯೋಗ ಎಲ್ಲ ರೋಗಗಳಿಗೂ ರಾಮಬಾಣವಾಗಿದೆ. ಯೋಗದ ಬಗ್ಗೆ ಮೊದಲಿನಿಂದಲೂ ಹೆಚ್ಚಿನ ಆಸಕ್ತಿಯಿತ್ತು. ಕಳೆದ ದಶಕಗಳಿಂದೀಚೆಗೆ ನಗರದಾದ್ಯಂತ ಯೋಗ ಶಿಬಿರಗಳನ್ನು ತೆರೆದಾಗ ಅಷ್ಟೊಂದು ಪ್ರಮಾಣದಲ್ಲಿ ಜನರಲ್ಲಿ ಅಭಿರುಚಿ ಇರಲಿಲ್ಲ. ಆದರೀಗ ಜನರಲ್ಲಿ ಬಹಳಷ್ಟು ಜಾಗೃತಿ ಮೂಡಿದೆ. ವೈದ್ಯರ ಸಹಾಯವಿಲ್ಲದೇ ಯೋಗ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬುದು ಸರ್ವರಿಗೂ ಅರ್ಥವಾಗಿದೆ. –ಎಸ್‌.ಡಿ ಹಾವನೂರ, ಯೋಗ ಶಿಕ್ಷಕ

ಜಿಲ್ಲಾದ್ಯಂತ ಕಳೆದ 13 ವರ್ಷಗಳಿಂದ ಶಿಬಿರಗಳನ್ನು ನಿರಂತರವಾಗಿ ಯಶಸ್ವಿಯಾಗಿ ಮುನ್ನಡೆಸಲು ಸಮಿತಿ ಹಾಗೂ ಟ್ರಸ್ಟ್‌ನ ಸರ್ವರ ಸಹಕಾರ, ನಾಗರಿಕರ ಪ್ರೋತ್ಸಾಹವೇ ಕಾರಣವಾಗಿದೆ. ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೋವಿಡ್‌ ಪರಿಣಾಮದಿಂದ ನಾಗರಿಕರು ಶಿಬಿರಕ್ಕೆ ಬರಲು ಹಿಂದೇಟು ಹಾಕಿದ್ದು, ಇದೀಗ ಮತ್ತೆ ಎಂದಿನಂತೆ ಯೋಗಾಸಕ್ತರು ಆಗಮಿಸುತ್ತಿದ್ದಾರೆ. ನಗರದ ಪ್ರತಿಯೊಂದು ವಾರ್ಡ್ನಲ್ಲೂ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿಯೂ ಯೋಗದ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಶಿಬಿರಗಳನ್ನು ಏರ್ಪಡಿಸಲು ಯೋಜನೆಯಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅವಶ್ಯಕವಾಗಿದೆ. –ರವೀಂದ್ರ ಬಿಜಾಪೂರ, ಪತಂಜಲಿ ಸಮಿತಿಯ ಅಧ್ಯಕ್ಷ   

-ಮಂಜುನಾಥ ಎಚ್‌. ಕುಂಬಳೂರ

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.