15 ವರ್ಷದಲ್ಲಿ ಅಂತರ್ಜಲ ಭಾರಿ ಕುಸಿತ

•ಒಂದೂವರೆ ದಶಕದಲ್ಲಿ ಈ ಬಾರಿ ಪಾತಾಳ ಕಂಡ ಜೀವಜಲ•500 ಅಡಿ ಕೊರೆದರೂ ಸಿಗದ ಜಲ

Team Udayavani, May 28, 2019, 12:34 PM IST

haveri-tdy-1..

ಹಾವೇರಿ: ನೀರಿಲ್ಲದೇ ಒಣಗಿರುವ ಹಾವೇರಿಯ ಹೆಗ್ಗೇರಿ ಕೆರೆ ಅಂಗಳ.

ಹಾವೇರಿ: ಸತತ ಕಳೆದ ನಾಲ್ಕೈದು ವರ್ಷಗಳಿಂದ ಸಮರ್ಪಕ ಮಳೆ ಇಲ್ಲದೇ ಜಿಲ್ಲೆಯ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದಿದ್ದು ಕಳೆದ ಒಂದೂವರೆ ದಶಕದ ಅಂತರ್ಜಲಮಟ್ಟ ಗಮನಿಸಿದರೆ ಈ ವರ್ಷ ಅಂತರ್ಜಲ ಅತಿಹೆಚ್ಚು ಕುಸಿದಿದೆ.

ಸಮರ್ಪಕ ಮಳೆ ಇಲ್ಲದೇ ತುಂಗಭದ್ರಾ, ವರದಾ ನದಿಗಳು ಸಂಪೂರ್ಣ ಬತ್ತಿದ್ದು ಅಂತರ್ಜಲ ಭಾರಿ ಕುಸಿತ ಕಂಡಿದೆ. ಕೆರೆ, ಹಳ್ಳ, ನದಿ, ನಾಲೆಗಳೆಲ್ಲ ಈ ಬಾರಿ ಬತ್ತಿದ್ದು, ಕೊಳವೆ ಬಾವಿಗಳಲ್ಲಿ ನೀರು ಪ್ರತಿದಿನವೂ ಒಂದಡಿಯಷ್ಟು ಆಳಕ್ಕೆ ಹೋಗುತ್ತಿರುವುದು ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಜಿಲ್ಲೆಯಲ್ಲಿ ಕೈಗೊಂಡ ಸಮೀಕ್ಷೆಯಿಂದ ಖಚಿತ ಪಟ್ಟಿದೆ.

ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸರಾಸರಿ 200-250 ಅಡಿ ಆಳ ಕೊರೆದರೆ ನೀರು ಸಿಗುತ್ತಿತ್ತು. ಆದರೆ, ಸದ್ಯ 500 ಅಡಿಕೊರೆದರೂ ನೀರು ಸಿಗುತ್ತಿಲ್ಲ. ವಿಫಲಗೊಂಡ ಕೊಳವೆಬಾವಿಗಳೇ ಅಧಿಕವಾಗುತ್ತಿವೆ. ಸರ್ಕಾರದಿಂದ ಕೊರೆಸಿರುವ ಕೊಳವೆಬಾವಿಗಳನ್ನು ಮರು ಡ್ರಿಲ್ಲಿಂಗ್‌ ಮಾಡಿಸಲಾಗಿದ್ದು ಅಂಥ ಕೊಳವೆಬಾವಿಗಳೂ ಈ ಬಾರಿ ಬತ್ತಿವೆ.

ಅಂತರ್ಜಲ ಕುಸಿತ ಪ್ರಮಾಣ: 2004-05ರಿಂದ ಪ್ರಸಕ್ತ ಜನವರಿ ತಿಂಗಳವರೆಗಿನ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಈ ಸಲ ಅಂತರ್ಜಲ ಅತಿ ಕೆಳಗೆ ಹೋಗಿದೆ. ಜಿಲ್ಲೆಯಲ್ಲಿ 2004ರ ಈ ವೇಳೆಗೆ ಜಿಲ್ಲೆಯ ಸರಾಸರಿ ಅಂತರ್ಜಲಮಟ್ಟ 25.26 ಮೀಟರ್‌ ಇತ್ತು. 2005ರಲ್ಲಿ 22.35 ಮೀಟರ್‌ ಸರಾಸರಿ ಇತ್ತು. ಜನವರಿ ತಿಂಗಳಲ್ಲಿ ಸರಾಸರಿ ಸ್ಥಿರ ಜಲಮಟ್ಟವು 14 ಮೀಟರ್‌ಗೆ ಇರುತ್ತಿತ್ತು. ಆದರೆ, ಈ ವರ್ಷ ಜನವರಿಯಲ್ಲಿ ಅದು 17.71 ಮೀಟರ್‌ ಆಗಿದ್ದು, ಸುಮಾರು ಎರಡು ಅಡಿಯಷ್ಟು ನೀರು ಕೆಳಗೆ ಹೋಗಿದೆ. ಮೇ ತಿಂಗಳಲ್ಲಿ ಇದು 20 ಮೀ. ದಾಟಿದೆ.

2006ರಲ್ಲಿ 20.84 ಮೀಟರ್‌ಗೆ ಕುಸಿತ ಕಂಡಿದ್ದರೆ, 2007ರಲ್ಲಿ 17.06, 2008ರಲ್ಲಿ 16.52, 2009ರಲ್ಲಿ 18.50 ಮೀಟರ್‌ ಆಗಿತ್ತು. ಹೀಗೆ ನಿರಂತರವಾಗಿ ನೀರಿನ ಮಟ್ಟ ಏರಿದ್ದನ್ನು ಅಂಕಿಸಂಖ್ಯೆಗಳಿಂದ ಕಂಡುಬರುತ್ತದೆ. 20015ರಲ್ಲಿ 15.82 ಮೀಟರ್‌ ಇದ್ದ ಅಂತರ್ಜಲ ಮಟ್ಟವು ಈ ಬಾರಿ ಡಿಸೆಂಬರ್‌ ಅಂತ್ಯದಲ್ಲೇ 20.96 ಮೀಟರ್‌ಗೆ ಕುಸಿದಿದೆ. ಅಂದರೆ ಕಳೆದ ವರ್ಷಕ್ಕಿಂತ ಸುಮಾರು 5 ಮೀಟರ್‌ನಷ್ಟು ಕುಸಿದಿದೆ. ಮಾರ್ಚ್‌ ಹಾಗೂ ಏಪ್ರಿಲ್, ಮೇ ಈ ಮೂರು ತಿಂಗಳಲ್ಲಂತೂ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಎಲ್ಲ ಕೊಳವೆಬಾವಿಗಳಲ್ಲಿ ಸದ್ಯ ಸರಾಸರಿ ಐದು ಮೀಟರ್‌ ನೀರು ಇಳಿಕೆಯಾಗಿದೆ. ಇನ್ನು ಕೆಲವು ಕೊಳವೆಬಾವಿಗಳಲ್ಲಿ ದಿನವೂ ಅರ್ಧ ಅಡಿಯಷ್ಟು ನೀರು ತಳಕ್ಕೆ ಹೋಗುತ್ತಿದೆ.

ಖಾಲಿಯಾಗುವ ಆತಂಕ: ಮಳೆ ಈ ವಾರದಲ್ಲಿಯೂ ಬರದೇ ಇದ್ದರೆ ಅಂತರ್ಜಲ ಮಟ್ಟ ಇನ್ನಷ್ಟು ಕುಸಿದು ಬಹುತೇಕ ಎಲ್ಲ ಕೊಳವೆ ಬಾವಿಗಳು ನೀರಿಲ್ಲದೇ ಒಣಗುವ ಸಾಧ್ಯತೆ ಇದೆ. ಈಗಾಗಲೇ ಕೆಲವು ಕೊಳವೆಬಾವಿಗಳಲ್ಲಿ ನೀರು ಪಾತಾಳ ಕಂಡಿದ್ದು, ಅಲ್ಪಸ್ವಲ್ಪ ಸವಳು ನೀರು ಬರುತ್ತಿದೆ. ಆದ್ದರಿಂದ ತೀರಾ ಪಾತಾಳ ಕಂಡ ಕೊಳವೆಬಾವಿ ನೀರು ಕುಡಿಯಲು ಆಗದ ಪರಿಸ್ಥಿತಿ ಇದೆ.

ಒಟ್ಟಾರೆ ಈ ಬಾರಿ ಬರದಿಂದಾಗಿ ಅಂತರ್ಜಲಮಟ್ಟ ಭಾರೀ ಪ್ರಮಣದಲ್ಲಿ ಕುಸಿದಿದ್ದು, ಜೂನ್‌ ತಿಂಗಳಲ್ಲಿಯೂ ಬವಣೆ ಎದುರಿಸುವ ಮೊದಲು ಸಾಕಷ್ಟು ಮಳೆಯಾಗಿ ಭೂಮಿ ತಂಪಾದರೆ ಸಾಕು ಎಂಬ ಅಪೇಕ್ಷೆ ಎಲ್ಲರದ್ದಾಗಿದೆ.

•ಎಚ್.ಕೆ. ನಟರಾಜ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.