ಶಾಮಿಯಾನಾ ಉದ್ಯೋಗಸ್ಥರಿಗೆ ನೆರವಾಗಿ
Team Udayavani, May 20, 2020, 5:19 AM IST
ಅಕ್ಕಿಆಲೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಶಾಮಿಯಾನಾ ಸಪ್ಲೈಯರ್, ಲೈಟಿಂಗ್, ಹೂವಿನ ಅಲಂಕಾರ, ಧ್ವನಿವರ್ಧಕ ವೃತ್ತಿಯಲ್ಲಿ ನಿರತ ಮಾಲಕರು ಮತ್ತು ಕಾರ್ಮಿಕರಿಗೆ ನೆರವು ನೀಡುವಂತೆ ಒತ್ತಾಯಿಸಿ ತಾಲೂಕು ಪೆಂಡಾಲ್ ಶಾಮಿಯಾನಾ ಸಪ್ಲೈಯರ್ ಅಸೋಸಿಯೇಷನ್ ವತಿಯಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ಪೆಂಡಾಲ್ ಶಾಮಿಯಾನಾ ಉದ್ಯೋಗ ಅವಲಂಬಿಸಿರುವ ನೂರಾರು ಕುಟುಂಬಗಳು ಇಂದು ಬೀದಿಗೆ ಬಿದ್ದಿವೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಮದುವೆ, ಗೃಹಪ್ರವೇಶ ಸೇರಿದಂತೆ ಯಾವುದೇ ಶುಭ ಸಮಾರಂಭಗಳು ನಡೆಯುತ್ತಿಲ್ಲ.ಹೀಗಾಗಿ ಈ ಉದ್ಯೋಗದಲ್ಲಿ ತೊಡಗಿರುವರಿಗೆ ಕೆಲಸವಿಲ್ಲದೇ ಆರ್ಥಿಕ ಸಮಸ್ಯೆ ಉದ್ಭವವಾಗಿದೆ. ಕಳೆದ ಮೂರು ತಿಂಗಳಿಂದ ಕಾರ್ಮಿಕರು ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಮನವಿಯಲ್ಲಿ ಅಳಲು ತೋಡಿಕೊಳ್ಳಲಾಗಿದೆ.
ಈ ಉದ್ಯಮಕ್ಕಾಗಿ ಬ್ಯಾಂಕ್, ಸಂಘ-ಸಂಸ್ಥೆ ಸೇರಿದಂತೆ ಸಾಲ ಪಡೆಯಲಾಗಿದ್ದು, ಇಡೀ ಉದ್ಯಮಕ್ಕೆ ಗರ ಬಡಿದಂತಾಗಿದೆ. ಕೂಡಲೇ ಸರಕಾರ ನೆರವಿಗೆ ಧಾವಿಸಬೇಕು ಎಂದು ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಡೇದವರ, ತಾಲೂಕಾಧ್ಯಕ್ಷ ಅಬ್ದುಲ್ಖಾದರ್ ಮುಲ್ಲಾ ಒತ್ತಾಯಿಸಿದ್ದಾರೆ.