ಮಠದ ವಿಚಾರದಲ್ಲಿ ಕೈ ಹಾಕಲ್ಲ: ಲಮಾಣಿ
Team Udayavani, Jan 27, 2018, 6:45 AM IST
ಹಾವೇರಿ: ಮಠಗಳ ವಿಚಾರದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಕೈ ಹಾಕುವುದಿಲ್ಲ. ಮಠಗಳಲ್ಲಿ ವಿವಾದ ಉಂಟಾದರೆ, ಮಠ ಯಾರಿಗೆ ಸೇರಿದ್ದು ಎಂಬ ಗೊಂದಲ ಏರ್ಪಟ್ಟರೆ ಅಂಥಲ್ಲಿ ಮಠದ ನಿರ್ವಹಣೆಗಾಗಿ ಆಡಳಿತಾಧಿಕಾರಿಗಳನ್ನು ನೇಮಿಸುವುದನ್ನು ಬಿಟ್ಟರೆ ಮಠದ ಬೇರೆ ಯಾವ ವಿಚಾರದಲ್ಲೂ ಸರ್ಕಾರ ಹಸ್ತಕ್ಷೇಪ
ಮಾಡುವುದಿಲ್ಲ ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಪುನರುಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕೆಲವು ಮಠಗಳನ್ನೂ ದೇವಸ್ಥಾನಗಳೆಂದು ನೋಟಿμಕೇಶನ್ ಮಾಡಲಾಗಿದೆ. ಈಗ ದೇವಸ್ಥಾನಗಳ ಆಸ್ತಿ ಸಮೀಕ್ಷೆ ಮಾಡಿಸಿದಾಗ ಈ ವಿಚಾರ ಬಹಿರಂಗಗೊಂಡಿದೆ. ಇದನ್ನೇ
ಬಿಜೆಪಿಯವರು ಮಠಾಧೀಶರನ್ನು, ಭಕ್ತರನ್ನು ದಾರಿತಪ್ಪಿಸಿ ವಿವಾದ ಸೃಷ್ಟಿಸಿದರು. ಅನುವಂಶಿಕವಾಗಿ ಪೂಜೆ ಮಾಡಿಕೊಂಡು ಬಂದ ಒಂದೇ ಕುಟುಂಬದ, ಒಂದೇ ಜಾತಿಯವರಿಗೆ ಸೇರಿದ ದೇವಸ್ಥಾನಗಳಿಗೆ ಸಂಬಂಧಿಸಿದ 50ರಿಂದ 60 ಪ್ರಕರಣಗಳು ಇಲಾಖೆಯ ಮುಂದಿದ್ದು, ಅವುಗಳನ್ನು ಜ.31 ಇಲ್ಲವೇ ಫೆಬ್ರವರಿ 1ರಂದು ಸಭೆ ನಡೆಸಿ ಡಿನೋಟಿಫೈ ಮಾಡಿ ಅವರ ದೇವಸ್ಥಾನ ಅವರಿಗೆ ಕೊಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ