ಬಿದನೂರು ಅರಸರ ಸಮಾಧಿ ಸ್ಥಳ ಅಭಿವೃದ್ಧಿ

ಹಿಂದೆ ಎರಡು ಬಾರಿ ನಿಧಿ ಚೋರರಿಂದ ಧ್ವಂಸಗೊಂಡಿದ್ದ ಸಮಾಧಿಗಳ ಅಭಿವೃದ್ಧಿಗೆ ಪುರಾತತ್ವ ಇಲಾಖೆ ಕ್ರಮ

Team Udayavani, Sep 25, 2019, 12:41 PM IST

25-Spectember-10

„ಕುಮುದಾ ನಗರ
ಹೊಸನಗರ: ಐತಿಹಾಸಿಕವಾಗಿ ತನ್ನದೇ ಮಹತ್ವ ದಾಖಲಿಸಿರುವ ತಾಲೂಕಿನ ಬಿದನೂರು ನಗರದಲ್ಲಿರುವ ಕೆಳದಿ ಅರಸರ ಸಮಾಧಿ ಸ್ಥಳದ ಬಗ್ಗೆ ಪುರಾತತ್ವ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ.

ಅಭದ್ರತೆ ಮತ್ತು ಹಾಳುಕೊಂಪೆಯಂತಾಗಿದ್ದ ಹೊಸನಗರ ತಾಲೂಕಿನ ನಗರ- ಚಿಕ್ಕಪೇಟೆಯಿಂದ ಕೊಲ್ಲೂರಿಗೆ ಹೋಗುವ ಹೆದ್ದಾರಿ ಪಕ್ಕದಲ್ಲೆ ಕಾಣಸಿಗುವ ಶ್ರೀಧರಪುರದ ಬಿದನೂರು ಅರಸರ ಸಮಾಧಿ  ಸ್ಥಳದ ಅಭಿವೃದ್ಧಿಗೆ ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆ ಮುಂದಾಗಿದೆ.

ರೂ.50 ಲಕ್ಷ ವೆಚ್ಚದ ಅಭಿವೃದ್ಧಿಯ ನೀಲನಕ್ಷೆ!: ಎರಡು ತಿಂಗಳ ಹಿಂದೆ ನಿ ಧಿ ಚೋರರ ಅಟ್ಟಹಾಸಕ್ಕೆ ಧ್ವಂಸಗೊಂಡಿದ್ದ ಅರಸರ ಸಮಾಧಿ  ಸ್ಥಳಕ್ಕೆ ಮೈಸೂರಿನ ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ, ಭದ್ರತೆ ಮತ್ತು
ಅಭಿವೃದ್ಧಿ ಸಂಬಂಧ ಮಾಹಿತಿ ಕಲೆಹಾಕಿದೆ. ಅಲ್ಲದೆ ಅಂದಾಜು ರೂ. 50 ಲಕ್ಷ ವೆಚ್ಚದಲ್ಲಿ ಸಮಾಧಿ ಸ್ಥಳವನ್ನು ವಾಯುವಿಹಾರಕ್ಕೆ ಪೂರಕವಾಗಿ, ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲು ನೀಲನಕ್ಷೆ ನಕ್ಷೆ ತಯಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ನಿಧಿಚೋರರ ಅಟ್ಟಹಾಸಕ್ಕೆ ನಲುಗಿದ ಸಮಾಧಿ !: ಮೂರು ದಶಕಗಳ ಹಿಂದೆ ಇತಿಹಾಸ ಸಂಶೋಧಕ ದಿ| ಶಂಕರನಾರಾಯಣ ರಾವ್‌ ಬೆಳಕಿಗೆ ತಂದಿದ್ದ ಈ ಅರಸರ ಸಮಾಧಿ  ಸ್ಥಳವನ್ನು ಪುರಾತತ್ವ ಇಲಾಖೆ ಕೂಡ ಗುರುತಿಸಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಸುತ್ತಲೂ
ತಂತಿ ಬೇಲಿ ಅಳವಡಿಸಿತ್ತು. ನಂತರ ನಿರ್ಲಕ್ಷ್ಯಕ್ಕೆ ಒಳಗಾದ ಸಮಾಧಿ  ಸ್ಥಳ ನಿಧಿಚೋರರ ಅಟ್ಟಹಾಸಕ್ಕೆ ನಲುಗಿತ್ತು. ಈಗಾಗಲೇ ಎರಡು ಬಾರಿ ನಿಧಿಯಾಸೆಗಾಗಿ ಸಮಾಧಿಗಳನ್ನು ಧ್ವಂಸಗೊಳಿಸಲಾಗಿತ್ತು. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತೀಚಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಸಮಾಧಿ ಮೇಲೆ ನಿರಂತರ ದಾಳಿಯಾಗುತ್ತಿರುವ ಕಾರಣ ರಾಜ್ಯ ಪುರಾತತ್ವ ಇಲಾಖೆ ಎಚ್ಚೆತ್ತುಕೊಂಡು ಮೂವರು ಭದ್ರತಾ ಸಿಬ್ಬಂದಿಗಳನ್ನು ನೇಮಿಸಲು ಕೂಡ ಮುಂದಾಗಿದೆ.

ಸುಂದರವಾಗಿ ಅಭಿವೃದ್ಧಿ: ಅಧಿಕಾರಿಗಳು ತಯಾರಿಸಲು ನಿರ್ಧರಿಸಿರುವ ಅಂದಾಜು 50 ಲಕ್ಷ ರೂ. ಅಭಿವೃದ್ಧಿಯ ನೀಲಿನಕ್ಷೆಯಲ್ಲಿ ಸುಂದರವಾದ ಸ್ವಾಗತ ಕಮಾನು, ನೆಲಹಾಸು, ಸುಮಾರು 2 ಎಕರೆಗಿಂತಲೂ ಹೆಚ್ಚಿರುವ ಪ್ರದೇಶದ ಸುತ್ತ ಬೇಲಿ ನಿರ್ಮಾಣ, ಸಮಾಧಿಗಳ ಬಗ್ಗೆ ಮಾಹಿತಿ ಫಲಕ, ಸಮಾ ಧಿ ಸ್ಥಳದ ರಸ್ತೆ, ಚಿಕ್ಕಪೇಟೆ ಸರ್ಕಲ್‌ ಮತ್ತು ಕೋಟೆ  ಭಾಗದಲ್ಲಿ
ಮಾರ್ಗಸೂಚಿ ಫಲಕ, ಮತ್ತು 10 ಹೆಚ್ಚು ಸಮಾಧಿಗಳನ್ನು ಹಳೆಯ ಮಾದರಿಯಲ್ಲೇ ಹೊರಭಾಗದ ಪುನರ್ನಿರ್ಮಾಣ ಸೇರಿದಂತೆ ಅಂಶಗಳು ಸೇರಿವೆ. ಸಂಜೆಯ ವಾಯುವಿಹಾರಕ್ಕೆ ಪೂರಕವಾಗಿ ನೆಲಹಾಸು ಮತ್ತು 15 ಕಲ್ಲುಮಂಚ ಅಳವಡಿಸಲು ಕೂಡ ನೀಲನಕ್ಷೆಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ.

ಒಟ್ಟಾರೆ ಕೆಳದಿ ಅರಸರ ಸಮಾಧಿಗಳು ಎಂದು ಕರೆಯಲ್ಪಡುವ ಶ್ರೀಧರಪುರ ಸಮಾಧಿಗಳ ಅಭಿವೃದ್ಧಿ ಬಗ್ಗೆ ಸಾಕಷ್ಟು ವರ್ಷಗಳ ಬೇಡಿಕೆ ಇತ್ತು. ಈ ನಡುವೆ ಸಮಾಧಿಗಳ ಧ್ವಂಸ ಪ್ರಕರಣಗಳು ಕೂಡ ಸ್ಥಳೀಯರು ಮತ್ತು ಇತಿಹಾಸ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತು. ಪುರಾತತ್ವ ಇಲಾಖೆ ತಡವಾಗಿಯಾದರೂ ಎಚ್ಚೆತ್ತು ಅಭಿವೃದ್ಧಿಗೆ ಮುಂದಾಗಿರುವುದನ್ನು ಸ್ಥಳೀಯರು ಸ್ವಾಗತಿಸಿದ್ದಾರೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.