ಬದಲಾಗಿವೆ ರಸ್ತೆಗಳ ಮೂಲ ಹೆಸರು!

ತಿರುಚಲಾಗುತ್ತಿದೆಯೇ ಇತಿಹಾಸ?•ಹುಮನಾಬಾದ ರಸ್ತೆಗಳಿಗೆ ಮಹಾತ್ಮರ ಹೆಸರು ಮರುನಾಮಕರಣವಾಗಲಿ

Team Udayavani, Sep 11, 2019, 12:06 PM IST

11-Sepctember-5

ಹುಮನಾಬಾದ: ಪಟ್ಟಣದ ಮಲ್ಲಿಕಾರ್ಜುನ ರಸ್ತೆಗೆ ಮುರಗಿಮಠ ರಸ್ತೆ ಎಂದು ಬದಲಾಯಿಸಿರುವುದು.

ಶಶಿಕಂತ ಕೆ.ಭಗೋಜಿ
ಹುಮನಾಬಾದ:
ಪಟ್ಟಣದ ಪ್ರಮುಖ ಹಾಗೂ ಉಪರಸ್ತೆಗಳಿಗೆ 6 ದಶಕಗಳ ಹಿಂದೆ ಅಳವಡಿಸಲಾಗಿದ್ದ ಬಹುತೇಕ ಹೆಸರುಗಳ ಸ್ಥಳದಲ್ಲಿ ಇದೀಗ ಹೊಸ ನಾಮಫಲಕಗಳು ರಾರಾಜಿಸುತ್ತಿದ್ದು, ಮೂಲ ಹೆಸರು ಬದಲಾವಣೆ ಮಾಡುವ ಮೂಲಕ ಇತಿಹಾಸ ತಿರುಚಲಾಗುತ್ತಿಯೇ ಎನ್ನುವ ವಿಚಾರ ಸಾರ್ವಜನಿಕರನ್ನು ಕಾಡುತ್ತಿದೆ.

ಊರು, ರಸ್ತೆ, ಉಪರಸ್ತೆಗಳಿಗೆ ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮರು, ಸಮಾಜಕ್ಕೆ ಆದರ್ಶರಾದ ಮಹಾತ್ಮರ ಹೆಸರುಗಳನ್ನು ಸ್ಮರಿಸಿ, ಅವರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಲಿ ಎಂಬ ಉದ್ದೇಶದಿಂದ ಇಡಲಾಗುತ್ತದೆ. ಅದೇ ಉದ್ದೇಶದಿಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಆರ್ಯ ಸಮಾಜದವರಾಗಿದ್ದ ಮತ್ತು 1959ನೇ ಸಾಲಿನಲ್ಲಿ ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ಶಂಕ್ರೆಪ್ಪ ಚಿದ್ರಿ ಅವರ ಅವಯಲ್ಲಿ ನಾಮಫಲಕ ಅಳವಡಿಸುವ ಮಹತ್ವದ ಕೆಲಸ ನಡೆದಿತ್ತು.

ಹೀಗಿದ್ದವು ರಸ್ತೆಗಳ ಹೆಸರು: ಜೇರಪೇಟೆಯ ಈಗಿರುವ ಮೌನೇಶ್ವರ ಶಾಲೆ ಪಕ್ಕದ ರಸ್ತೆ ಹೆಸರು- ದ‌ಯಾನಂದ ರಸ್ತೆ, ನರೇಂದ್ರ ರಸ್ತೆ, ಎಂ.ಡಿ.ಕಿದ್ವಾಯಿ ರಸ್ತೆ, ಶಿವಚಂದ್ರ ರಸ್ತೆ, ಆಜಾದ್‌ ರಸ್ತೆ, ತ್ಯಾಗರಾಜ ರಸ್ತೆ, ವಿಜಯಲಕ್ಷ್ಮೀ ರಸ್ತೆ, ವಿವೇಕಾನಂದ ರಸ್ತೆ, ಹರಳಯ್ಯ ರಸ್ತೆ, ಸುಭಾಷ ರಸ್ತೆ, ಮಲ್ಲಿಕಾರ್ಜುನ ರಸ್ತೆ, ಜವಾಹರ ರಸ್ತೆ, ಬಸವೇಶ್ವರ ರಸ್ತೆ, ಚಾಂದಬೀಬೀ ರಸ್ತೆ, ಸೇಯೋಬುಲ್ಲಾ ರಸ್ತೆ, ಅಕ್ಕಮಹಾದೇವಿ ರಸ್ತೆ, ರಾವಜಿರಾವ್‌ ರಸ್ತೆ, ವೀರಭದ್ರೇಶ್ವರ ರಸ್ತೆ, ಸಂಭಾಜಿ ರಸ್ತೆ, ಉಗ್ರಪ್ಪ ಬಪ್ಪಣ್ಣ ಸೇರಿದಂತೆ ಅನೇಕ ಮಹಾನ್‌ ಕಲಾವಿದರು, ಶರಣರು, ಸಂತರು, ಸ್ವಾತಂತ್ರ್ಯ ಹೋರಾಟಗಾರರ ಹೆಸರಿಟ್ಟು ಪ್ರತೀ ಓಣಿಗಳಿಗೆ ಆ ಹೆಸರಿನ ನಾಮಫಲಕ ಅಳವಡಿಕೆ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಆ ಪೈಕಿ ಈಗ ಉಳಿದವುಗಳೆಂದರೆ ಸಂಭಾಜಿ ರಸ್ತೆ, ಅಕ್ಕಮಹಾದೇವಿ ರಸ್ತೆ ಸೇರಿ ಮೂರ್‍ನಾಲ್ಕು ಮಾತ್ರ.

ಬದಲಾದ ಹಸರೇನು?: ಶಿವಪುರ ಹನುಮಾನ ದೇವಸ್ಥಾನ ಮುಂಭಾಗದಿಂದ ತೆರಳುವ ರಸ್ತೆ ಹೆಸರು ಖ್ಯಾತ ವೈದ್ಯ ಹಾಗೂ ದಾನಿಯೂ ಆಗಿದ್ದ ಎಂ.ಡಿ.ಕಿದ್ವಾಯಿ ಎಂಬುದಾಗಿತ್ತು. ಈಗ ಅಲ್ಲಿ ನಾಮಫಲಕವೇ ಇಲ್ಲ. ಸರ್ದಾರ್‌ ವಲ್ಲಭಭಾಯಿ ಪಟೇಲ ವೃತ್ತದಿಂದ ಕೋಳಿವಾಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ನರೇಂದ್ರ ಎಂಬುದಾಗಿತ್ತು. ಬಾಲಾಜಿ ದೇವಸ್ಥಾನದಿಂದ ಕೆಳಗೆ ಹೋಗುವ ರಸ್ತೆಗೆ ವೀರಭದ್ರೇಶ್ವರ ರಸ್ತೆ ಎಂದಾಗಿದ್ದ ಹೆಸರೀಗ ಧುಮ್ಮನಸೂರ ರಸ್ತೆ ಎಂದು ಬದಲಾಗಿದೆ.

ಈಗಿನ ಶಿವಾಜಿ ವೃತ್ತಕ್ಕೆ ಹೊಂದಿಕೊಂಡಿರುವ ರಸ್ತೆ ಮಲ್ಲಿಕಾರ್ಜುನ ರಸ್ತೆ ಎಂಬುದಾಗಿತ್ತು-ಅದೀಗ ಮುರಗಿಮಠ ಎಂದು ಬದಲಾಗಿದೆ. ಅಂಬೇಡ್ಕರ್‌ ವೃತ್ತದಿಂದ ನಗರ ಪ್ರವೇಶಿಸುವ ರಸ್ತೆ ಆಜಾದ್‌ ರಸ್ತೆ ಎಂಬುದಾಗಿತ್ತು. ಬಾಲಾಜಿ ದೇವಸ್ತಾನಕ್ಕೆ ಹೊಂದಿಕೊಂಡಿರುವ ಸೀಗಿ ಓಣಿಗೆ ಖ್ಯಾತ ಸಂಗೀತ ಕಲಾವಿದರಾಗಿದ್ದ ತ್ಯಾಗರಾಜ ರಸ್ತೆ ಎಂಬ ಹೆಸರಿತ್ತು. ವಿಜಯಲಕ್ಷ್ಮೀ, ವಿವೇಕಾನಂದ, ಹೈ.ಕ. ಮುಕ್ತಿ ಸಂಗ್ರಾಮಕ್ಕಾಗೆ ಪ್ರಾಣತೆತ್ತ ಶಿವಚಂದ್ರ ನೆಲ್ಲೋಗಿ ಸೇರಿದಂತೆ ಇನ್ನೂ ಅನೇಕ ಪ್ರಮುಖ ರಸ್ತೆಗಳ ನಾಮಫಲಕಗಳೀಗ ಸಂಪೂರ್ಣ ಕಣ್ಮರೆ ಆಗಿರುವುದು ಇತಿಹಾಸ ಪ್ರಿಯರಲ್ಲಿ ಅಘಾತ ಉಂಟು ಮಾಡಿದೆ.

ನಾಮಫಲಕ ಅಳವಡಿಸಲಿ: ಜವಾಬ್ದಾರಿ ಸ್ಥಾನದಲ್ಲಿ ಇರುವ ವ್ಯಕ್ತಿಗಳು, ಅಧಿಕಾರಿಗಳು, ಬದಲಾದ ರಸ್ತೆಗಳ ಹೆಸರಿನ ವಿಷಯವನ್ನು ಗಂಭೀರ ಪರಿಗಣಿಸಿ, ತಿರುಚಲಾದ ಮೂಲ ಹೆಸರಿನ ಸ್ಥಳದಲ್ಲಿ ಹಳೆಯ ಹೆಸರಿನ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.

ಟಾಪ್ ನ್ಯೂಸ್

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.