ಗುರುವಂದನೆ-ಪರಿಸರ ಜಾಗೃತಿ ಅಭಿಯಾನ
Team Udayavani, Sep 25, 2022, 9:25 AM IST
ಸೇಡಂ: ತಾಲೂಕಿನ ಕೋಡ್ಲಾದಲ್ಲಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ ವಿಜ್ಞಾನ-ಪರಿಸರ ಜಾಗೃತಿ ಅಭಿಯಾನ ಆಯೋಜಿಸಲಾಗಿತ್ತು. ಇದೆ ವೇಳೆ 800 ಮೀಟರ್ ಓಟದ ಸ್ಪರ್ಧೆಗೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಕಾವೇರಿಯನ್ನು ವಿಶೇಷವಾಗಿ ಸತ್ಕರಿಸಲಾಯಿತು.
ಕಂಚಾಳಕುಂಟಿ ನಂದೀಶ್ವರ ಮಠದ ಪೂಜ್ಯ ಕರುಣೇಶ್ವರ ಸ್ವಾಮೀಜಿ, ಶ್ರೀ ಶಂಭುಲಿಗೆಶ್ವರ ದೇವಸ್ಥಾನದ ಪೂಜ್ಯ ರವಿಕುಮಾರ ಸ್ವಾಮೀಜಿ, ಬೆನಕನಹಳ್ಳಿಯ ಪೂಜ್ಯ ಅಭಿನವ ಕೇದಾರಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಅವಂಟಿ, ಬಿಜೆಪಿ ತಾಲೂಕಾಧ್ಯಕ್ಷ ಪರ್ವತರೆಡ್ಡಿ ಪಾಟೀಲ ನಾಮವಾರ, ಸಾಹಿತಿ ಮುಡಬಿ ಗುಂಡೇರಾವ್, ಉರಗ ತಜ್ಞರಾದ ನಾಗರಾಜ, ಜಗದಿಶ ಸ್ವಾಮಿ, ಸಿಆರ್ಪಿ ರಾಧಾಕೃಷ್ಣ, ಕೃಷಿಕ ಸೋಮನಾಥರೆಡ್ಡಿ ಪೂರ್ಮಾ, ನಾಗರೆಡ್ಡಿ ಧರ್ಮನೂರ, ಪ್ರಭುಸಾಹು ತಂಬಾಕೆ, ಗುರುನಾಥ, ಅಮಿನರೆಡ್ಡಿ ಮದ್ನಿ, ಚಂದ್ರಶೇಖರ ಗಚ್ಚಿನಮಠ, ಅನಪೂರ್ಣ ಬಾನರ, ದೇವದಾಸರೆಡ್ಡಿ, ಜ್ಯೋತಿ, ಉಮಾದೇವಿ ಬಾಸೂತ್ಕರ್ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ