ಫಸಲ್ ಬಿಮಾ; 50 ಸಾವಿರ ನೋಂದಣಿ ಗುರಿ
Team Udayavani, Jul 22, 2022, 3:10 PM IST
ಆಳಂದ: ರಾಜ್ಯದಲ್ಲೇ ಮೊದಲ ಹಂತವಾಗಿ ಕಲಬುರಗಿ ವಿಭಾಗದ 10 ತಾಲೂಕಿನಲ್ಲಿ ಅಂಚೆ ಇಲಾಖೆ ಮೂಲಕ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 50 ಸಾವಿರ ರೈತರ ನೋಂದ ಣಿಯ ಗುರಿ ಹೊಂದಲಾಗಿದೆ ಎಂದು ಭಾರತೀಯ ಅಂಚೆ ಇಲಾಖೆಯ ಬೆಂಗಳೂರಿನ ದಕ್ಷಿಣ ವಲಯ ರಾಜ್ಯ ನಿರ್ದೇಶಕಿ ಕೆ. ಆರೂರಾ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಅಂಚೆ ಇಲಾಖೆಯಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ತಾಲೂಕಿನ ರೈತರಿಂದ ಬೆಳೆ ವಿಮೆ ಉಚಿತ ನೋಂದಣಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲು ಬಾರಿಗೆ ಫಸಲು ಭೀಮಾ ಬೆಳೆ ವಿಮೆ ನೋಂದಾಯಿಸಿಕೊಳ್ಳಲು ಪ್ರತಿ ತಾಲೂಕಿಗೆ ಐದು ಸಾವಿರ ಗುರಿಯಂತೆ ಒಟ್ಟು 50ಸಾವಿರ ರೈತರ ನೋಂದಣಿ ಅಭಿಯಾನದ ಲಾಭವನ್ನು ರೈತರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಬೆಳೆ ವಿಮೆ ಖಾಸಗಿ ಕಂಪನಿಗಿಂತಲೂ ಪ್ರಧಾನ ಮಂತ್ರಿ ಫಸಲು ಭೀಮಾ ಸರ್ಕಾರದ ಬೆಳೆ ವಿಮೆ ಯೋಜನೆಯಾಗಿದ್ದು, ಗ್ರಾಮೀಣ ರೈತರಲ್ಲಿ ಈ ವಿಮೆ ಕೈಗೊಳ್ಳಲು ಪರಸ್ಪರ ಮಾಹಿತಿ ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಳಂದ ತಾಲೂಕಿನಿಂದ ಮೊದಲ ದಿನದಲ್ಲೇ ಒಂದು ಸಾವಿರ ವಿಮೆ ಕೈಗೊಳ್ಳುವಂತೆ ಅರ್ಜಿ ಸಲ್ಲಿಕೆಯಾಗಿವೆ. ವಿಮೆ ಕೈಗೊಳ್ಳಲು ಜು.31 ಕೊನೆ ದಿನವಾಗಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಬೆಳೆ ವಿಮೆ ನೋಂದಾಯಿತ ರೈತರಿಗೆ ವಿಮಾ ಕಂತು ಪಾವತಿ ರಸೀದಿ ನೀಡಲಾಯಿತು. ಸ್ಥಳೀಯ ಅಂಚೆ ಪೋಸ್ಟ್ ಮಾಸ್ಟರ್ ಗುರುರಾಜ ಕುಲಕರ್ಣಿ ಮಾತನಾಡಿ, ಇಲಾಖೆ ವಹಿಸಿದ್ದ ಗುರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸಿಬ್ಬಂದಿ ಕಾರ್ಯಪ್ರವರ್ತರಾಗಬೇಕು ಎಂದು ಹೇಳಿದರು.
ಪಟ್ಟಣದಲ್ಲಿ ಅಂಚೆ ಕಚೇರಿ ಇಲ್ಲದೇ ಸಿಬ್ಬಂದಿಗೆ ಮತ್ತು ಗ್ರಾಹಕರಿಗೆ ತೊಂದರೆ ಎದುರಾಗಿದೆ. ಸ್ವಂತ ಕಟ್ಟಡ ನಿರ್ಮಾಣ ಕೈಗೊಳ್ಳಬೇಕು ಎಂದು ಮೇಲಧಿ ಕಾರಿಗಳಿಗೆ ಮನವಿ ಮಾಡಿದರು.
ಬೀದರ ಹಾಗೂ ಜಿಲ್ಲಾ ಅಂಚೆ ಅಧೀಕ್ಷಕ ಮಹ್ಮದ್ ಆಸೀಫ್ ಮಾತನಾಡಿ, ಜಿಲ್ಲೆಯ ಎಲ್ಲ ಅಂಚೆ ಕಚೇರಿಗಳಲ್ಲಿ ವಿಮಾ ನೋಂದಣಿ ನಡೆಯಲಿದೆ. ನಿಗದಿತ ಅವಧಿಯೊಳಗೆ ವಿಮೆ ಕೈಗೊಳ್ಳಬೇಕು ಎಂದು ರೈತರಿಗೆ ತಿಳಿಸಿದರು.
ತಾಲೂಕಿನಿಂದ ಬುಧವಾರದಿಂದ ಆರಂಭಗೊಂಡು ಶುಕ್ರವಾರದ ವರೆಗೆ ನೋಂದಣಿ ಅಭಿಯಾನ ನಡೆಸಿ ಉಚಿತವಾಗಿ ರೈತರ ಬೆಳೆವಿಮೆ ನೋಂದಣಿ ಬಳಕವೂ ಜು.31ರ ವರೆಗೆ ಅಂಚೆ ಕಚೇರಿಯಲ್ಲಿ ನೋಂದಣಿ ನಡೆಯಲಿದೆ ಎಂದರು.
ಸ್ಥಳೀಯ ಅಂಚಿ ಸಿಬ್ಬಂದಿ ಲಿಂಗರಾಜ ಬಿರಾದಾರ, ಗಂಜೆಂದ್ರ ಹೂಗಾರ, ರೇವಣಸಿದ್ಧ ಪೂಜಾರಿ, ಗುರುಬಾಯಿ ಸಂಗೋಳಗಿ, ಸಿದ್ಧಣ್ಣಾ ಪಾಟೀಲ, ಮಲ್ಲಿಕಾರ್ಜುನ ತಳವಾರ, ಸತೀಶ ಬಿರಾದಾರ, ಗೌರಿ ನಿಲೂರ, ಸುಶ್ಮಿತಾ ಹತ್ತಿ, ವಿಜಯಲಕ್ಷ್ಮೀ, ಸೌಮ್ಯಾ, ಸ್ನೇಹಾ, ಜಯಶ್ರೀ ಚಿಂಚನೂರ, ರೈತ ಪೀರಪ್ಪ ಜಮಾದಾರ, ಶರಣಬಸಪ್ಪ ನೆಲ್ಲೂರ ಹಾಗೂ ತಾಲೂಕಿನ ಎಲ್ಲ ಗ್ರಾಮದ ಅಂಚೆ ಪಾಲಕರು ಹಾಗೂ ಸುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು. ಸಿಬ್ಬಂದಿ ಲಕ್ಷ್ಮೀಕಾಂತ ಕೊಡ್ಲಿ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ