ಅನ್ನಛತ್ರ ಮಂಡಳದಿಂದ ದಿನಸಿ ಕಿಟ್ ವಿತರಣೆ
Team Udayavani, Jun 7, 2021, 4:36 PM IST
ಸೊಲ್ಲಾಪುರ: ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಸುಮಾರು ಐವತ್ತು ಗ್ರಾಮಗಳಲ್ಲಿರುವ ದಿವ್ಯಾಂಗರು, ಕಲಾವಿದರು, ಆಟಗಾರರು, ಕಡು ಬಡವರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ ನೊಂದ ಜೀವಗಳಿಗೆ ಆಶಾ ಕಿರಣವಾಗಿದೆ ಎಂದು ಶರಣಪ್ಪ ಫುಲಾರಿ ಹೇಳಿದರು.
ಅಕ್ಕಲಕೋಟ ಪಟ್ಟಣದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿ ಸಂಸ್ಥಾಪಕ ಅಧ್ಯಕ್ಷ ಜನ್ಮೆàಜಯರಾಜೆ ಭೋಸಲೆ ಮತ್ತು ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ ನೇತೃತ್ವದಲ್ಲಿ ತೋಳನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣೆ ಸಮಾರಂಭ ದಲ್ಲಿ ಅವರು ಮಾತನಾಡಿದರು.
ಜಗತ್ತು ಕೊರೊನಾ ಮಹಾಮಾರಿಯಲ್ಲಿ ಸಿಲುಕಿ ನರಳಾಡುತ್ತಿರುವಾಗ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳವು ಸಮಾಜದಲ್ಲಿಯ ನೊಂದ ಜೀವಗಳಿಗೆ ಆಶಾ ಕಿರಣವಾಗಿ ನಿಲ್ಲುವ ಮೂಲಕ ಅಕ್ಕಲಕೋಟ ತಾಲೂಕಿನ ಸುಮಾರು 50 ಗ್ರಾಮಗಳಲ್ಲಿರುವ ಕಡು ಬಡವರಿಗೆ ಧಾನ್ಯದ ಜೊತೆಗೆ ದಿನ ನಿತ್ಯದ ಜೀವನಾವಶ್ಯಕ ವಸ್ತುಗಳನ್ನು ವಿತರಣೆ ಮಾಡಿದೆ ಎಂದು ಹೇಳಿದರು.
ಮುಖಂಡ ಪ್ರಕಾಶ ಸುರವಸೆ ಮಾತನಾಡಿ, ಲಾಕ್ಡೌನ್ದಿಂದ ಆಹಾರ ಸಿಗದೇ ತೊಂದರೆಗೆ ಒಳಗಾಗಿರುವ ಸಾವಿರಾರು ಜನರಿಗೆ ಅನ್ನಛತ್ರ ಮಂಡಳಿ ದಿನಸಿ ಕಿಟ್ ನೀಡಿದ್ದು ಶ್ಲಾಘನೀಯ ಎಂದರು. ಅನ್ನಛತ್ರ ಮಂಡಳಿ ಉಪಾಧ್ಯಕ್ಷ ಅಭಯ ಖೋಬರೆ, ಕಾರ್ಯದರ್ಶಿ ಶಾಮರಾವ್ ಮೋರೆ, ಎನ್ಸಿಪಿ ಅಧ್ಯಕ್ಷ ಮನೋಜ ನಿಕ್ಕಂ, ಪ್ರವೀಣ ಘಾಡಗೆ, ಯೋಗೇಶ ಪವಾರ, ಸುಭಾಷ ಭೋಸಲೆ, ರಮೇಶ ಕೇತ್, ವೈಭವ ನವಲೆ, ಬಾಳಾಸಾಹೇಬ ಪೋಳ, ಗೋಟು ಮಾನೆ, ನಿಖೀಲ ಪಾಟೀಲ, ಸಿದ್ಧಪ್ಪ ರಬ್ಟಾ, ಚಿದಾನಂದ ಮುಗಳಿಮಠ, ಸೋಮನಾಥ ಸಂಭಾಳ, ದಸ್ತಗೀರ್ ನದಾಫ್, ಕಾಶಿನಾಥ ತಳವಾರ, ಶ್ರೀಶೈಲ ರಬ್ಟಾ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್ ಖರ್ಗೆ
Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್ ಏಕಾಂಗಿ ಫೈಟ್
DK Sivakumar: ಪ್ರಜ್ವಲ್ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ
Prajwal Revanna: ಪ್ರಜ್ವಲ್ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
UP: ಪತಿಯ ಕೈಕಾಲು ಕಟ್ಟಿ ಖಾಸಗಿ ಅಂಗವನ್ನು ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ: ಪತ್ನಿ ಬಂಧನ
Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ
Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗಾಗಿ ಮತದಾನ ಮಾಡಿದ ಪತ್ನಿ…
Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ
ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ