ಕಲಬುರಗಿಗೆ ವೈಜನಾಥ ಪಾಟೀಲರ ಪಾರ್ಥಿವ ಶರೀರ ಆಗಮನ
Team Udayavani, Nov 2, 2019, 6:39 PM IST
ಕಲಬುರಗಿ: ಮಾಜಿ ಸಚಿವ ವೈಜನಾಥ ಪಾಟೀಲರ ಪಾರ್ಥಿವ ಶರೀರವು ಬೆಂಗಳೂರಿಂದ ನಗರದ ಪೊಲೀಸ್ ಮೈದಾನದ ಹಲಿಪ್ಯಾಡ್ ಗೆ ಶನಿವಾರ ಸಂಜೆ ಆಗಮಿಸಿತು.
ಪಾರ್ಥಿವ ಶರೀರ ಬರುತ್ತಿದ್ದಂತೆ ಅಭಿಮಾನಿಗಳು, ಕುಟುಂಬ ವರ್ಗದವರ ಆಕ್ರಂದನ ಮುಗಿಲು ಮುಟ್ಟಿತು. ಕಣ್ಣೀರು ಸುರಿಸುತ್ತಾ ವೈಜನಾಥ ಪಾಟೀಲ ಅಮರ್ ಹೇ, ಅಮರ್ ಹೇ ಎಂದು ಘೋಷಣೆ ಕೂಗಿದರು.
ಜಿಲ್ಲಾಡಳಿತ ವತಿಯಿಂದ ಮತ್ತು ಗಣ್ಯರು ಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿ ಶರತ್ ಬಿ.,ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಎಸ್ಪಿ ವಿನಾಯಕ ಪಾಟೀಲ
ಜಿಲ್ಲಾಡಳಿತದ ಪರವಾಗಿ ಅಗಲಿದ ನಾಯಕನಿಗೆ ಹೂಗುಚ್ಛ ಅರ್ಪಿಸಿ ನಮನ ಸಲ್ಲಿಸಿದರು.
ಶಾಸಕ ಡಾ.ಅಜಯ ಸಿಂಗ್, ಮಾಜಿ ಶಾಸಕರಾದ ವಿಶ್ವನಾಥ ಹೆಬ್ಬಾಳ, ದೊಡ್ಡಪ್ಪ ಗೌಡ ಪಾಟೀಲರು ಸೇರಿದಂತೆ ಹಲವು ಗಣ್ಯರು ಗೌರವ ಸಲ್ಲಿಸಿದರು.
ಮುಖಂಡರಾದ ಬಸವರಾಜ ಇಂಗಿನ್, ಸುಭಾಷ್ ರಾಠೋಡ, ಶರಣುಮೋದಿ, ರವೀಂದ್ರ ಶಾಬಾದಿ, ಜಿಪಂ ಸದಸ್ಯರಾದ ಶಿವಾನಂದ ಪಾಟೀಲ, ಸಂತೋಷ ಪಾಟೀಲ ದಣ್ಣೂರ್, ಉಮಕಾಂತ ನಿಗ್ಗುಡಗಿ ಅನೇಕರು ಗೌರವ ಅರ್ಪಿಸಿದರು.
ಹಲಿಕ್ಯಾಪ್ಟರ್ ನಲ್ಲಿ ವೈಜನಾಥರ ಪತ್ನಿ ಜ್ಞಾನೇಶ್ವರಿ, ಪುತ್ರರಾದ ಡಾ.ವಿಕ್ರಮ ಪಾಟೀಲ, ಜಿಪಂ ಸದಸ್ಯ ಗೌತಮ ಪಾಟೀಲ ಬಂದರು. ಮತ್ತೊಬ್ಬ ಡಾ.ಬಸವೇಶ ಹಾಗೂ ಬಂಧುಗಳು ತಾಯಿಯನ್ನು ಅಪ್ಪಿಕೊಂಡು ಆಳುತ್ತಿದ್ದ ದೃಶ್ಯ ಪ್ರತಿಯೊಬ್ಬರ ಮನ ಕಲಕುತ್ತಿತ್ತು.
ನಂತರ ಹಲಿಪ್ಯಾಡ್ ನಿಂದ ನಂತರ ಶಾಂತಿನಗರದ ಗೃಹಕ್ಕೆ ಪಾರ್ಥಿವ ಶರೀರ ತೆಗೆದುಕೊಂದು ಹೋಗಲಾಯಿತು. ಆ ಮನೆಯು ವೈಜನಾಥ ಪಾಟೀಲರು ಭಾವನಾತ್ಮ ಸಂಬಂಧ ಹೊಂದಿದ್ದರು. ಹೀಗಾಗಿ ಅಲ್ಲಿ ಕೆಲ ಕಾಲ ಇಟ್ಟು ಧಾರ್ಮಿಕ ವಿಧಿ ವಿಧಾನಗಳು ಸಲ್ಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ