ಉತ್ತಮ ಬದುಕು ನಮ್ಮ ಕೈಯಲ್ಲಿದೆ
Team Udayavani, Jan 11, 2019, 5:40 AM IST
ಕಲಬುರಗಿ: ಜನನ ಮತ್ತು ಮರಣ ನಮ್ಮ ಕೈಯೊಳಗಿಲ್ಲ. ಆದರೆ ನಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಆದ್ದರಿಂದ ಘನವಾದ ಕಾರ್ಯಗಳನ್ನು ಮಾಡುತ್ತಾ ನಮ್ಮ ದೇಹ ಅಳಿದ ನಂತರವೂ ಶಾಶ್ವತವಾಗಿ ನೆನಪು ಉಳಿಯುವ ಕೆಲಸ ಮಾಡಬೇಕೆಂದು ಶನಿ ಧಾರಾವಾಹಿ ಖ್ಯಾತಿಯ ಹನುಮಂತನ ಪಾತ್ರಧಾರಿ ಬಾಲನಟ ಕನಿಷ್ಕಾ ಆರ್. ದೇಸಾಯಿ ತಿಳಿಸಿದರು.
ನಗರದ ಶಹಾಬಜಾರದಲ್ಲಿರುವ ಪರುಷ ಮಠದ ಚನ್ನಮಲ್ಲೇಶ್ವರ ಶಾಲಾ ಆವರಣದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ‘ವಿಶಿಷ್ಟ ಕಲೆ-ವಿವಿಧ ಫಲ’ ಎಂಬ ಕಲೆ ಜೀವನದ ನೆಲೆಬೆಲೆಯ ಚೆಲುವು ಎನ್ನುವ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಒಂದೊಂದು ಅದ್ಭುತ ಶಕ್ತಿಯಿರುತ್ತದೆ. ಅದು ಸದ್ವಿನಿಯೋಗವಾಗಬೇಕು. ಹುಡುಗಾಟ ಬಿಟ್ಟು ಹುಡುಕಾಟದ ಕಡೆಗೆ ಮತ್ತು ನಾನು ಎಂಬುದನ್ನು ತೊರೆದು ನಾವು ಎನ್ನುವತ್ತ ಹೆಜ್ಜೆಯಿಡಬೇಕೆಂದರು. ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸಿದ್ರಾಮಪ್ಪ ಉಕಲಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಏಷಿಯನ್ ಕರಾಟೆ ಚಾಂಪಿಯನ್ಗಳಾದ ಮನೋಹರಕುಮಾರ ಬೀರನೂರ, ಮಾಲಾಶ್ರೀ ರಾಜೇಂದ್ರ ಹರಳಯ್ಯ ಅವರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
MUST WATCH
ಹೊಸ ಸೇರ್ಪಡೆ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ