ಊರು ಬಿಟ್ಟವರತ್ತ ಗ್ರಾಪಂ ಅಭ್ಯರ್ಥಿಗಳ ಚಿತ್ತ
Team Udayavani, Dec 24, 2020, 3:39 PM IST
ಜೇವರ್ಗಿ: ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗು ದಿನದಿಂದ ದಿನಕ್ಕೆ ಏರುತ್ತಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ಅಭ್ಯರ್ಥಿಗಳು ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ.
ಏತನ್ಮಧ್ಯೆ ಊರು ಬಿಟ್ಟು ಕೆಲಸ ಅರಸಿ ಬೇರೆಡೆ ವಲಸೆ ಹೋಗಿರುವವರು, ಜಿಲ್ಲೆ ಹಾಗೂ ತಾಲೂಕುಕೇಂದ್ರಗಳಲ್ಲಿದ್ದು ಊರಲ್ಲಿಯೇ ಮತದಾನಉಳಿಸಿಕೊಂಡವವರತ್ತ ಗ್ರಾಮ ಪಂಚಾಯಿತಿಅಭ್ಯರ್ಥಿಗಳು ಚಿತ್ತ ಹರಿದಿದೆ. ಊರಿಂದ ದೂರಉಳಿದವರನ್ನು ಚುನಾವಣೆ ದಿನದಂದು ಕರೆಸಿಕೊಳ್ಳಲುಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ಅಖಾಡಶುರುವಾಗುತ್ತಿದ್ದಂತೆಯೇ ವಾರ್ಡ್ವಾರು ಮತದಾರರಪಟ್ಟಿ ಸಿದ್ಧ ಮಾಡಿಕೊಂಡಿರುವ ಅಭ್ಯರ್ಥಿಗಳುಗ್ರಾಮದಲ್ಲಿ ಇರುವವರು ಯಾರು? ವಲಸೆ ಹೋದವರು ಯಾರು? ಜಿಲ್ಲೆ ಹಾಗೂ ತಾಲೂಕುಕೇಂದ್ರಗಳಲ್ಲಿ ವಾಸ ಮಾಡುತ್ತಿರುವವರು ಯಾರು? ಎನ್ನುವ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೇ ಊರು ಬಿಟ್ಟ ಜನರ ಸಂಪರ್ಕ ಸಾಧಿಸುತ್ತಿದ್ದಾರೆ.
ಪಂಚಾಯಿತಿ ಚುನಾವಣೆಯಲ್ಲಿ ಒಂದೊಂದು ಮತವೂ ಸೋಲು-ಗೆಲುವಿಗೆ ನಿರ್ಣಯ ಆಗುವುದರಿಂದ ಅಭ್ಯರ್ಥಿಗಳಿಗೆ ಪ್ರತಿಯೊಂದು ಮತವೂ ಮಹತ್ವದ್ದಾಗಿದೆ. ಹೀಗಾಗಿ ಊರಲ್ಲಿನಮತದಾರರ ಜತೆಗೆ ಹೊರಗಡೆ ಇರುವವರತ್ತಲೂಗಮನ ಕೇಂದ್ರೀಕರಿಸಿ, ಚುನಾವಣೆ ದಿನ ಕರೆಸಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ತಾಲೂಕಿನಿಂದ ಮುಂಬೈ, ಪುಣೆ, ಬೆಂಗಳೂರು, ಹೈದ್ರಾಬಾದ, ಕರಡ್, ಮುಲ್ಕಿ (ಉಡುಪಿ) ಸೇರಿದಂತೆ ಬೇರೆ-ಬೇರೆ ನಗರಗಳಿಗೆ ದುಡಿಯಲು ಹೋದವರೇ ಹೆಚ್ಚು ಜನರಿದ್ದಾರೆ. ಅವರೆಲ್ಲರ ದೂರವಾಣಿ ಸಂಖ್ಯೆ ಸಂಗ್ರಹಿಸಿ ಸಂಪರ್ಕ ಸಾ ಧಿಸಿದ್ದಾರೆ. ಮತದಾನದ ದಿನದಂದು ರೈಲ್ವೆ, ಬಸ್ ಹಾಗೂ ಖಾಸಗಿ ವಾಹನಗಳ ವ್ಯವಸ್ಥೆ ಮಾಡುವ ಮೂಲಕ ಕರೆಸಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. ಪ್ರಮುಖವಾಗಿ ಸಾವಿರಾರು ಕೂಲಿ ಕಾರ್ಮಿಕರೆ ಕೆಲಸ ಅರಸಿ ಬೇರೆ ಊರುಗಳಿಗೆ ಹೋಗಿದ್ದಾರೆ. ಇವರಿಗೆ ವಾಹನದ ವ್ಯವಸ್ಥೆ ಜತೆ ಜತೆಗೆ ಗುಂಡು, ತುಂಡಿನ ಆಮೀಷ ಒಡ್ಡಲಾಗುತ್ತಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ