ಲಾಡ್ಲಾಪುರ ಗುಡ್ಡದ ಸುತ್ತ ಮಾಂಸ ತ್ಯಾಜ್ಯಗಳ ತಡಿಕೆ


Team Udayavani, Apr 24, 2017, 4:03 PM IST

gul2.jpg

ವಾಡಿ: ಲಾಡ್ಲಾಪುರ ಹಾಜಿ ಸರ್ವರ್‌ (ಹಾದಿ ಶರಣ) ಗುಡ್ಡದ ಜಾತ್ರೆ ಸಂಪನ್ನಗೊಂಡಿದ್ದು, ಬಾಡೂಟದ ತಾಣದಲ್ಲೀಗ ರೋಗಾಣುಗಳು ಹುಟ್ಟಿಕೊಂಡಿವೆ. ಗುಡ್ಡದ ಕೊನೆ ಜಾಗದಲ್ಲಿ ನೆಲೆಸಿರುವ ಹಾಜಿಸರ್ವರ್‌ ದೇವರು ಮಾಂಸ ನೈವೇದ್ಯವನ್ನು ಸ್ವೀಕರಿಸುವುದಿಲ್ಲ. ಆದರೂ ಜಾತ್ರೆಗೆ ಬಂದವರೆಲ್ಲ ಮಾಂಸದೂಟ ಸಿದ್ಧಪಡಿಸಿ ಹರಕೆ ತೀರಿಸುತ್ತಾರೆ.

ಮುಳ್ಳುಕಂಟಿಯಿಂದ ಆವರಿಸಿರುವ ಸುಮಾರು 600 ಮೀಟರ್‌ ಎತ್ತರದ ಗುಡ್ಡದ ಸುತ್ತಲ ಪ್ರದೇಶದಲ್ಲೀಗ ಮಾಂಸ ತ್ಯಾಜ್ಯಗಳ ತಡಿಕೆ ಹರಡಿಕೊಂಡಿದ್ದು, ಧಾರ್ಮಿಕ ಸ್ಥಳ ಎಂಬುದು ಅಸ್ವಚ್ಚತೆ ತಾಣವಾಗಿ ರೋಗಾಣುಗಳ ವಾಸಸ್ತಾನವಾಗಿ ಮಾರ್ಪಟ್ಟಿದೆ. ಲಂಬಾಣಿ ಸಮುದಾಯ ಮತ್ತು ಮುಸ್ಲಿಂ ಜನಾಂಗದವರ ಮಧ್ಯೆ ಅನ್ಯ ಸಮುದಾಯಕ್ಕೆ ಸೇರಿದ ಭಕ್ತರೂ ಗುಡ್ಡದೂರಿಗೆ ಬಂದು ಭಕ್ತಿ ಮೆರೆಯುವುದು ಇಲ್ಲಿನ ಭಾವೈಕ್ಯತೆಯ ಸಂಕೇತ.

ಆದರೆ ಹೀಗೆ ಬಂದು ದೇವರಿಗೆ ತೆಂಗಿನಕಾಯಿ ಒಡೆದು ಹೋಗುವವರು ವಿರಳ. ಬಂದವರೆಲ್ಲ ಗುಡ್ಡದ ಸುತ್ತ ಬಿಡಾರ ಹೂಡಿ ಕುರಿಗಳನ್ನು ಬಲಿಕೊಟ್ಟು, ಗುಡ್ಡದ ಕೆಳಗಿನ ಗದ್ದುಗೆಗೆ ಮಾಂಸದ ನೈವೇದ್ಯ ಅರ್ಪಿಸುವ ಸಂಪ್ರದಾಯವಿದೆ. ತಿಂದು ತೇಗಿದ ಮಾಂಸದೂಟದ ತ್ಯಾಜ್ಯಗಳನ್ನು ಭಕ್ತರು ಭಕ್ತಿ ಕೇಂದ್ರವಾದ ಹಾಜಿಸರ್ವರ್‌ ಗುಡ್ಡದ ಸುತ್ತ ಬೇಕಾಬಿಟ್ಟಿ ಎಸೆದು ಹೋಗಿದ್ದು, ದುರ್ವಾಸನೆ ಹರಡಲು ಕಾರಣವಾಗಿದೆ. 

ಧಾರ್ಮಿಕ ಸ್ಥಳದ ಸುತ್ತ ಸ್ವಚ್ಚತೆ ಮತ್ತು ಪಾವಿತ್ರ ಕಾಪಾಡಬೇಕಾದ ಭಕ್ತ ಸಮುದಾಯ, ಹರಕೆ ತೀರಿಸಿ ಪರಿಸರ ಹಾಳುಗೆಡವಿ ಹೋಗಿರುವುದು ಪ್ರಜ್ಞಾವಂತ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಜಾತ್ರೆ ಸಂಪನ್ನಗೊಂಡು ಐದಾರು ದಿನ ಕಳೆದರೂ ಸ್ಥಳೀಯ ಗ್ರಾಮ ಪಂಚಾಯತ ಆಡಳಿತ ಗುಡ್ಡದ ಸುತ್ತ ರಾಶಿ ರಾಶಿಗಟ್ಟಲೇ ಹರಡಿಕೊಂಡಿರುವ ಮಾಂಸ- ಮೂಳೆಗಳ ತ್ಯಾಜ್ಯ, ಅನ್ನ, ಬಿರಿಯಾನಿ, ನೀರಿನ ಬಾಟಲಿ, ಕಾಗದದ ತಟ್ಟೆಗಳ ವಿಲೇವಾರಿಗೆ ಮುಂದಾಗಿಲ್ಲ. 

ಗುಡ್ಡಕ್ಕೆ ಮುತ್ತಿಕೊಂಡಿರುವ ಮುಳ್ಳುಕಂಟಿ ಕತ್ತರಿಸುವಲ್ಲಿ ಕ್ರಮಕೈಗೊಂಡಿಲ್ಲ. ಆರೋಗ್ಯಯುಕ್ತ ವಾತಾವರಣ  ಕಲ್ಪಿಸಿಕೊಡಲು ವಿಶೇಷ ಗಮನ ಹರಿಸಬೇಕಿದ್ದ ಚಿತ್ತಾಪುರ ತಹಶೀಲ್ದಾರರು ಇತ್ತ ಹೊರಳಿಯೂ ನೋಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದ್ದ ಲಾಡ್ಲಾಪುರ ಗ್ರಾಪಂ ಆಡಳಿತ, ಗುಡ್ಡದ ಸುತ್ತ ಹರಡಿಕೊಂಡಿರುವ ಮಾಂಸ ಮೂಳೆಗಳ ತ್ಯಾಜ್ಯದ ವಿಲೇವಾರಿಗೆ ಮುಂದಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. 

* ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.