ಸಮಾಜದಲ್ಲಿ ಬಿರುಕು ಮೂಡಿಸುವುದು ಸರಿಯಲ್ಲ
Team Udayavani, Jul 8, 2022, 3:43 PM IST
ಚಿತ್ತಾಪುರ: ಬಂಜಾರಾ ಸಮುದಾಯ ಹಾಗೂ ದಲಿತ ಸಮುದಾಯಗಳ ಮಧ್ಯೆ ಬಿರುಕು ಮೂಡಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುವುದು ಸರಿಯಲ್ಲ ಎಂದು ತಾಪಂ ಮಾಜಿ ಸದಸ್ಯ ನಾಮದೇವ ರಾಠೊಡ ಹೇಳಿದರು.
ಬಂಜಾರಾ ಸಮಾಜ ಸಮನ್ವಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರಾ ಸಮಾಜದ ರಾಮತೀರ್ಥ ಗ್ರಾಪಂ ಸದಸ್ಯ ಅಯ್ಯಪ್ಪ ಪವಾರ ಎಂಬುವರು ಬಂಜಾರಾ ಸಮಾಜಕ್ಕೆ, ಬಂಜಾರಾ ಸಮಾಜದ ಮಹಿಳೆಯರಿಗೆ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಕುರಿತು ಮೊಬೈಲ್ ವಾಟ್ಸ್ಆ್ಯಪ್ ವೈಸ್ ರೆಕಾರ್ಡಿಂಗ್ ನಲ್ಲಿ ಅಶ್ಲೀಲ, ಅವಾಚ್ಯ ಪದ ಬಳಸಿ ನಿಂದಿಸಿ ಹಗುರವಾಗಿ ಮಾತನಾಡಿದ್ದಾರೆ. ಈ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಜಾತಿ, ಜಾತಿಗಳ ಮಧ್ಯೆ ಗಲಭೆ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಪ್ರಿಯಾಂಕ್ ಖರ್ಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸರ್ವ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಬಂಜಾರಾ ಸಮಾಜದ ಜನರಿಗೆ ಪುರಸಭೆ, ಎಪಿಎಂಸಿ, ತಾಪಂ, ಜಿಪಂ ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ ಗೆಲ್ಲಿಸಿದ್ದಾರೆ. ಬಾಲುನಾಯಕ ತಾಂಡಾದಲ್ಲಿ ಕೇವಲ 14 ಮತ ಪಡೆದರೂ ಕೂಡ ಕೋಟಿಗಟ್ಟಲೇ ಅನುದಾನ ತಂದು ಅಭಿವೃದ್ಧಿ ಪಡಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟ ಏಕೈಕ ನಾಯಕ ಪ್ರಿಯಾಂಕ್ ಖರ್ಗೆ ಆಗಿದ್ದಾರೆ ಎಂದು ಬಣ್ಣಿಸಿದರು.
ಮುಖಂಡ ಜಗದೀಶ ಚವ್ಹಾಣ ಮಾತನಾಡಿ, ಬಂಜಾರಾ ಸಮಾಜದವರು ಎಲ್ಲ ಪಕ್ಷದಲ್ಲೂ ಇದ್ದಾರೆ. ಬಂಜಾರಾ ಸಮಾಜವನ್ನು ದಿಕ್ಕು ತಪ್ಪಿಸುವಂತಹ ಕೆಲಸವನ್ನು ಯಾರೊಬ್ಬರು ಮಾಡಬಾರದು ಎಂದರು.
ಮುಖಂಡ ಚಂದು ಜಾಧವ ಮಾತನಾಡಿ, ಸಮಾಜಗಳ ನಡುವೆ ಅಶಾಂತಿ ಉಂಟು ಮಾಡುವುದಾದರೇ ಮಣಿಕಂಠ ರಾಠೊಡ ಅವರನ್ನು ಚಿತ್ತಾಪುರಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಮುಖಂಡರಾದ ರವಿ ರಾಠೊಡ, ಭೀಮಸಿಂಗ್ ಚವ್ಹಾಣ, ಹರಿನಾಥ ಚವ್ಹಾಣ, ಜೇಮಸಿಂಗ್ ರಾಠೊಡ, ದೇವಿದಾಸ ಚವ್ಹಾಣ, ನೀಲಕಂಠ ಪವಾರ್, ವಿಜಯ ಚವ್ಹಾಣ, ಪ್ರವೀಣ ಪವಾರ್, ಚಂದರ್ ಚವ್ಹಾಣ, ರಾಕೇಶ ಪವಾರ್, ತಿರುಪತಿ ಚವ್ಹಾಣ, ಕುಮಾರ ಚವ್ಹಾಣ, ಅಶೋಕ ಚವ್ಹಾಣ, ದೇವರಾಜ ರಾಠೊಡ, ಜಗದೀಶ ಪವಾರ್, ಭಾರತ್ ರಾಠೊಡ, ವಿಶಾಲ ನಾಯಕ್, ರವಿ ಜಾಧವ, ಸುಭಾಷ ಜಾಧವ, ಸಂತೋಷ ಚವ್ಹಾಣ, ಕುಮಾರ ಜಾಧವ, ರಾಮು ರಾಠೊಡ, ಅಂಬ್ರಿàಶ ಚವ್ಹಾಣ, ಹೀರಾಸಿಂಗ್ ಚವ್ಹಾಣ, ರವಿಂಚಂದ್ರ ರಾಠೊಡ, ಸಂಜಯ ರಾಠೊಡ, ಸಂತೋಷ ರಾಠೊಡ, ಕುಮಾರ್ ರಾಠೊಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
MUST WATCH
ಹೊಸ ಸೇರ್ಪಡೆ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’