18 ಸಾವಿರ ಜನರಿಗೆ ವಸತಿ ಸೌಕರ್ಯ

ಸ್ಥಳೀಯರಿಗಿಲ್ಲ ವಸತಿ ವ್ಯವಸ್ಥೆಪ್ರತಿನಿಧಿಗಳ ಮೊಬೈಲ್‌ಗೆ ಎಸ್‌ಎಂಎಸ್

Team Udayavani, Jan 31, 2020, 10:41 AM IST

31-Janauary-1

ಕಲಬುರಗಿ: ದಾಖಲೆ ಪ್ರಮಾಣದಲ್ಲಿ ಕಲಬುರಗಿಯ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೋಂದಣಿ ಮಾಡಿಕೊಂಡಿರುವ ನಾಡಿನ ಸಾಹಿತ್ಯಾಸಕ್ತರಿಗೆ ಸೂಕ್ತ ರೀತಿಯಲ್ಲಿ ವಸತಿ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನೋಂದಣಿ ಸಮಯದಲ್ಲಿ ಮೊಬೈಲ್‌ ಸಂಖ್ಯೆ ಕೊಟ್ಟವರಿಗೆ ಮೂರು ದಿನ ಮೊದಲೇ ತಮ್ಮ ಕೋಣೆ ಮಾಹಿತಿ ಸಿಗಲಿದೆ.

ಕಡಿಮೆ ಸಮಯ, ಹಲವು ಅಡೆ-ತಡೆಗಳ ನಡುವೆಯೂ ಫೆ.5ರಿಂದ ನಡೆಯುವ ಮೂರು ದಿನಗಳ ಅಕ್ಷರ ಜಾತ್ರೆಯನ್ನು ಅಚ್ಚುಕಟ್ಟಾಗಿ ಸಂಘಟಿಸಲು ಶ್ರಮಿಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ನುಡಿ ತೇರು ಎಳೆಯಲು ಆಗಮಿಸುವ ಕನ್ನಡಾಭಿಮಾನಿಗಳಿಗೆ ವಸತಿ ಹಾಗೂ ಸಮ್ಮೇಳನ ಸ್ಥಳಕ್ಕೆ ತೆರಳಲು ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ತೊಡಕು ಉಂಟಾಗದಂತೆ ನೋಡಿಕೊಳ್ಳಲು ಕ್ರಮ  ಹಿಸಲಾಗುತ್ತಿದೆ.

22252 ಜನ ನೋಂದಣಿ: ಈ ಹಿಂದಿನ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಹೋಲಿಕೆ ಮಾಡಿದರೆ, ಈ ಬಾರಿ ಸಮ್ಮೇಳನಕ್ಕೆ ದಾಖಲೆ ಪ್ರಮಾಣದಲ್ಲಿ ನೋಂದಣಿಯಾದ ಪ್ರತಿನಿಧಿಗಳು ಸಾಕ್ಷಿಯಾಗಲಿದ್ದಾರೆ. 21130 ಜನ ನೋಂದಣಿ ಮಾಡಿಸಿಕೊಂಡಿದ್ದಾರೆ. ರಾಯಚೂರು ಸಮ್ಮೇಳನಕ್ಕೆ 12400, ಮೈಸೂರು ಸಮ್ಮೇಳನಕ್ಕೆ 13000 ಹಾಗೂ ಧಾರವಾಡದ ಸಮ್ಮೇಳನಕ್ಕೆ 13500 ಜನ ನೋಂದಣಿ ಮಾಡಿಸಿಕೊಂಡಿದ್ದರು.

21130 ಜನ ನೋಂದಣಿ ಪ್ರತಿನಿಧಿಗಳೊಂದಿಗೆ 550 ಜನ
ರಾಜ್ಯದ ವಿವಿಧ ಜಿಲ್ಲಾ ಕಸಾಪ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಪ್ರತಿನಿಧಿಗಳು, 72 ಜನ ಕಲಬುರಗಿ ಜಿಲ್ಲಾ ಕಸಾಪ ಘಟಕ ಮತ್ತು ತಾಲೂಕುಗಳ ಪ್ರತಿನಿಧಿಗಳು, 500 ಪತ್ರಕರ್ತರು ಸೇರಿ 22252 ಜನ ನೋಂದಣಿ ಪ್ರತಿನಿಧಿಗಳೆಂದು ಪರಿಣಿಸಲಾಗಿದೆ. ಎಲ್ಲರಿಗೂ ಸಮ್ಮೇಳನದ ನೆನಪಿನಲ್ಲಿ ಪೆನ್‌, ಬ್ಯಾಡ್ಜ್ ಮತ್ತು ನೋಟ್‌ಬುಕ್‌ ಒಳಗೊಂಡ ಗುಣಮಟ್ಟದ ಬ್ಯಾಗ್‌ ವಿತರಿಸಲಾಗುವುದು ಎಂದು ಎಂದು ನೋಂದಣಿ ಸಮಿತಿ ಕಾರ್ಯಾಧ್ಯಕ್ಷರಾದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಸಂಗಾ ತಿಳಿಸಿದ್ದಾರೆ.

18 ಸಾವಿರ ಜನರಿಗೆ ವಸತಿ: ಅಕ್ಷರ ಜಾತ್ರೆಗಾಗಿ ನೃಪತುಂಗನ ನಾಡಿನ ರಾಜ್ಯದ ಭಾಗಗಳಿಂದ ಆಗಮಿಸುವ ಒಟ್ಟು 18000 ಜನ ಸಾಹಿತ್ಯಾಸಕ್ತರಿಗೆ ವಾಸ್ತವ್ಯ ಹಾಗೂ ಸಾರಿಗೆ ಸೌಕರ್ಯ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಸರ್ಕಾರಿ ಅತಿಥಿ ಗೃಹಗಳು ಮತ್ತು ಖಾಸಗಿ ಲಾಡ್ಜ್ಗಳ 600 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಸರ್ಕಾರಿ, ಖಾಸಗಿಯ 17 ಶಾಲಾ-ಕಾಲೇಜುಗಳ ಕೊಠಡಿಗಳು, ಲೋಕೋಪಯೋಗಿ ಮತ್ತು ಐಎಸ್‌ಐ ಆಸ್ಪತ್ರೆ ಸಿಬ್ಬಂದಿಯ ವಸತಿ ಗೃಹಗಳು ಸೇರಿಂದಂತೆ ಸರ್ಕಾರಿ-ಅರೆ ಸರ್ಕಾರಿ ಸಂಸ್ಥೆಗಳ ಖಾಲಿ ವಸತಿ ಗೃಹಗಳು ಹಾಗೂ 8 ಕಲ್ಯಾಣ ಮಂಟಪಗಳು ಕಲಬುರಗಿ ಅತಿಥಿಗಳಿಗಾಗಿ ಸಿದ್ಧ ಮಾಡಿಕೊಳ್ಳಲಾಗಿದೆ.

ಅತಿಥಿಗಳು ಉಳಿದುಕೊಳ್ಳುವ ಎಲ್ಲ ಕಡೆಗಳಲ್ಲಿ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶಾಲೆ-ಕಾಲೇಜುಗಳ ಕೊಠಡಿಗಳಲ್ಲಿ 6000 ಜನ, ಕಲ್ಯಾಣ ಮಂಪಟಗಳಲ್ಲಿ 5000 ಮಂದಿ ಹಾಗೂ ವಸತಿ ಗೃಹಗಳಲ್ಲಿ 2000 ಜನರು ಉಳಿದುಕೊಳ್ಳಲು ಅವಕಾಶ ಇದೆ. ಎಲ್ಲ ವಾಸ್ತವ್ಯ ಸ್ಥಳಗಳಲ್ಲಿ ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದು ಸಮ್ಮೇಳನದ ವಸತಿ ಹಾಗೂ ಸಾರಿಗೆ ಸಮಿತಿಯ ಕಾರ್ಯಾಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ರಾಜಾ ಪಿ. ಮಾಹಿತಿ ನೀಡಿದ್ದಾರೆ.

270 ವಾಹನಗಳು: ಸಮ್ಮೇಳನಕ್ಕೆ ಬರುವ ಅತಿಥಿಗಳಿಗಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಒಟ್ಟಾರೆ 270 ವಿವಿಧ ವಾಹನಗಳನ್ನು ನಿಗದಿ ಮಾಡಲಾಗಿದೆ. 200 ಶಾಲಾ ಬಸ್‌ಗಳು, 150 ಟ್ಯಾಕ್ಸಿ ಕಾರುಗಳು ಹಾಗೂ 20 ಸಾರಿಗೆ ಬಸ್‌ಗಳು ಸೇವೆ ಕಲ್ಪಿಸಲಿವೆ. ಸಮ್ಮೇಳನಕ್ಕಾಗಿ ಟ್ಯಾಕ್ಸಿಯವರು ಕಡಿಮೆ ದರದಲ್ಲಿ ಕಾರುಗಳ ಒದಗಿಸಲು ಒಪ್ಪಿಕೊಂಡಿದ್ದರೆ, ಶಾಲಾ ಬಸ್‌ಗಳನ್ನು ಉಚಿತವಾಗಿ ಶಾಲಾ ಮಂಡಳಿಯವರು ನೀಡಿದ್ದು, ಸಮಿತಿ ವತಿಯಿಂದ ಡೀಸೆಲ್‌ ಹಾಕಲಾಗುವುದು ಎಂದು ಸಿಇಒ ಡಾ| ರಾಜಾ ಪಿ. ತಿಳಿಸಿದರು.

„ರಂಗಪ್ಪ ಗಧಾರ

ಟಾಪ್ ನ್ಯೂಸ್

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.