ಸ್ವಸ್ಥ ಸಮಾಜಕ್ಕೆ ಮಹಾಂತಶ್ರೀ ಕೊಡುಗೆ ಅನನ್ಯ
Team Udayavani, May 20, 2018, 10:59 AM IST
ಕಲಬುರಗಿ: ಮದ್ಯಪಾನ, ಧೂಮಪಾನ, ಗುಟಕಾ ಸೇವನೆಯಂತಹ ಮುಂತಾದ ಕೆಟ್ಟ ಚಟಗಳಿಗೆ ದಾಸರಾಗಿ ತಾವು ಹಾಳಾಗುವ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದ ಅಸಂಖ್ಯಾತ ಯುವ ಜನತೆಯ ಚಟ ಬಿಡಿಸಿ, ಅವರ ಬಾಳನ್ನು ಸುಂದರವಾಗಿಸುವ ಜೊತೆಗೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ ಇಲಕಲ್ನ ಪೂಜ್ಯ ಡಾ| ಮಹಾಂತ ಶಿವಯೋಗಿಗಳನ್ನು ಸಮಾಜ ಮರೆಯುವಂತಿಲ್ಲವೆಂದು ಎಚ್.ಬಿ. ಪಾಟೀಲ ಹೇಳಿದರು.
ಚಿತ್ತರಗಿಯ ವಿಜಯಮಹಾಂತೇಶ್ವರ ಸಂಸ್ಥಾನ ಮಠ ಇಲಕಲ್ನ ಪೀಠಾಧಿಪತಿಗಳಾಗಿದ್ದ ಡಾ| ಮಹಾಂತ
ಶಿವಯೋಗಿಗಳು ಲಿಂಗೈಕ್ಯರಾದ ನಿಮಿತ್ತ ಜಗಜ್ಯೋತಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಜೆಆರ್
ನಗರದ ಬಳಗದ ಗ್ರಂಥಾಲಯದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಗುರು ನಮನ ಸಭೆಯಲ್ಲಿ ಅವರು
ಮಾತನಾಡಿದರು.
ಶ್ರೀಗಳು ಬಸವ ತತ್ವವನ್ನು ಎಲ್ಲೆಡೆ ಪ್ರಸರಿಸಲು ಸಾಕಷ್ಟು ಶ್ರಮಿಸಿದ್ದಾರೆ. ಸರಳ, ಸಜ್ಜನಿಕೆಯ ಮೂರ್ತಿಯಾಗಿದ್ದ
ಅವರು ಒಬ್ಬ ಆದರ್ಶ ಗುರುಗಳು ಹೇಗೆ ಇರಬೇಕೆಂದು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಬಳಗದ ಗೌರವಾಧ್ಯಕ್ಷ ಶಾಂತಪ್ಪ ನರೋಣಾ, ರಾಜಶೇಖರ ಮರಡಿ, ಉಮೇಶ ಪಾಟೀಲ, ಸೂರ್ಯಕಾಂತ ಕೋಬಾಳ, ಅಮಿತ ಕುಲಕರ್ಣಿ, ಸಚಿನ್ ಬತಗುಣಕಿ, ಬಾಬುರಾವ ಪೂಜಾರಿ, ರಮೇಶ ಪಾಟೀಲ, ಶರಣಬಸಪ್ಪ ಮದರಿ, ಶಿವಲಿಂಗಪ್ಪ ಶಿವಣಗಿ, ರಾಮಚಂದ್ರ ಭಜಂತ್ರಿ, ಬಸವರಾಜ ಜಮಾದಾರ, ಮಲ್ಲಿಕಾರ್ಜುನ ಹೊಡಲ್ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ