ಬೇರೆ ಇಲಾಖೆಯವರ ನೇಮಕ ವಿರೋಧಿಸಿ ಮನವಿ
Team Udayavani, Sep 3, 2022, 3:42 PM IST
ಸಿಂಧನೂರು: ಅನ್ಯ ಇಲಾಖೆಯವರನ್ನು ತಾಪಂ ಇಒ ಆಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಆರ್ಡಿಪಿಆರ್ ಅಧಿಕಾರಿಗಳ ಮತ್ತು ನೌಕರರ ಸಂಘದಿಂದ ಶುಕ್ರವಾರ ರಾಜ್ಯ ಸರಕಾರಕ್ಕೆ ತಾಪಂ ಇಒ ಮೂಲಕ ಮನವಿ ರವಾನಿಸಲಾಯಿತು.
ಸಂಘದ ಪದಾಧಿಕಾರಿಗಳು ಮಾತನಾಡಿ, ತಾಪಂ ಇಒ ಹುದ್ದೆಯು ಉಪವಿಭಾಗಾಧಿಕಾರಿ ದರ್ಜೆಯ ಜವಾಬ್ದಾರಿಯಾಗಿದೆ. 32 ಇಲಾಖೆಗಳ ಮೇಲ್ವಿಚಾರಣೆ, ಎಲ್ಲ ಇಲಾಖೆಯ ಬಿಲ್ಗಳಿಗೆ ಮೇಲು ರುಜು ಮಾಡುವ ಅಧಿಕಾರವನ್ನು ಹೊಂದಿದೆ. ನರೇಗಾ, ಈ ಸ್ವತ್ತು, ಸುವರ್ಣ ಗ್ರಾಮ, 15ನೇ ಹಣಕಾಸು, ಮುಖ್ಯಮಂತ್ರಿ ಗ್ರಾಮ ವಿಕಾಸ ಸೇರಿದಂತೆ ಅನೇಕ ಯೋಜನೆಗಳ ಮೇಲ್ವಿಚಾರಣೆ ತಾಪಂ ವ್ಯಾಪ್ತಿಯಲ್ಲಿದೆ. ಗ್ರಾಮೀಣಾಭಿವೃದ್ಧಿಯ ಮಹತ್ವದ ಕೆಲಸವನ್ನು ತಾಲೂಕು ಪಂಚಾಯತ್ ನಿರ್ವಹಿಸುತ್ತಿದ್ದು, ಗ್ರಾಪಂಗಳ ಪಾತ್ರ ಪ್ರಮುಖವಿದೆ. ಬೇರೆ ಇಲಾಖೆಗಳ ನೌಕರರನ್ನು ತಾಪಂಗೆ ನೇಮಕ ಮಾಡಿದರೆ, ಇಲಾಖೆಯ ಬಗ್ಗೆ ತಿಳಿದುಕೊಳ್ಳಲು 6 ತಿಂಗಳು ಬೇಕಾಗುತ್ತದೆ. ಗುತ್ತಿಗೆ ಒಪ್ಪಂದ ಮೂಲಕ ಪ್ರಕಾಶ್ ಎನ್ನುವವರನ್ನು ನೇಮಕ ಮಾಡಿದ್ದು, ಅದನ್ನು ರದ್ದುಗೊಳಿಸಬೇಕು. ಆರ್ಡಿಪಿಆರ್ ಅಧಿಕಾರಿಗಳ, ನೌಕರರ ಸಂಘದ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ತಾಪಂ ಇಒ ಲಕ್ಷ್ಮೀದೇವಿ ಅವರು ಮನವಿ ಸರಕಾರಕ್ಕೆ ರವಾನಿಸಿದರು. ತಾಪಂ ಗ್ರಾಮೀಣಾಭಿವೃದ್ಧಿ ಎಡಿಎ ಅಮರಗುಂಡಪ್ಪ, ನರೇಗಾ ಸಹಾಯಕ ನಿರ್ದೇಶಕ ಮನೋಹರ್, ಪಿಡಿಒಗಳಾದ ಯಂಕಪ್ಪ ಕುರುಕುಂದಾ, ಸಿ.ಎಚ್. ಮುದುಕಪ್ಪ, ಹನೀಫ್, ದೀಪಾ ಅರಳಿಕಟ್ಟಿ, ಪೂರ್ಣಿಮಾ, ಸರೋಜಮ್ಮ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ