ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡಿ
Team Udayavani, Mar 3, 2018, 10:38 AM IST
ಕಲಬುರಗಿ: ಅನ್ನಕ್ಕಿಂತ ವಿದ್ಯಾದಾನ ಶ್ರೇಷ್ಠ. ಮಕ್ಕಳಿಗೆ ಶಿಕ್ಷಣದ ಮೂಲಕ ತಮ್ಮ ಬದುಕು ರೂಪಿಸಿಕೊಳ್ಳುವ ಸಂಸ್ಕಾರ ನೀಡಬೇಕು ಎಂದು ಮಾಹಾಗಾಂವ ಕಳ್ಳಿ ಮಠದ ಗುರುಲಿಂಗ ಶಿವಾಚಾರ್ಯರು ಹೇಳಿದರು.
ತಾಲೂಕಿನ ನಾವದಗಿಯ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಶಾಲೆ ವಾರ್ಷಿಕೊತ್ಸವ ಹಾಗೂ ಸಂಸ್ಕಾರ ಪ್ರಶಸ್ತಿ
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನ ಅತ್ಯಂತ ಅತ್ಯಮೂಲ್ಯವಾದುದ್ದು. ಅಲ್ಲದೆ ಶಿಕ್ಷಕರು ಹೇಳಿಕೊಡುವ ಪಾಠ ಗಮನವಿಟ್ಟು ಆಲಿಸಬೇಕು ಎಂದು ಹೇಳಿದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ಪಿ. ಎಂ. ಮಣ್ಣೂರ ಮಾತನಾಡಿ, ವಿದ್ಯಾರ್ಥಿಗಳು ಕಂಠ ಪಾಠ
ಮಾಡಬಾರದು. ಓದಿ ಜ್ಞಾನ ಪಡಿಯಬೇಕು. ಪ್ರತಿಯೊಂದು ಮಗುವಿನಲ್ಲಿ ಪ್ರತಿಭೆ ಅಡಗಿರುತ್ತದೆ. ಶಾಲೆಯಲ್ಲಿ ಸ್ವತಂತ್ರವಾದ ಕಲಿಕಾ ವಾತಾವರಣ ರೂಪಿಸಿದಾಗ ಅವರ ಸಾಮರ್ಥ್ಯ ಹೆಚ್ಚುತ್ತದೆ ಎಂದು ಹೇಳಿದರು.
ಡಾ| ಎಸ್.ಎಸ್. ಗುಬ್ಬಿ, ಮಕ್ಕಳು ಶಿಸ್ತು, ವಿನಯ, ಸ್ವತ್ಛತೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಡಾ| ಎಸ್.ಎಸ್. ಪಾಟೀಲ ಮಾತನಾಡಿ, ಆರೋಗ್ಯದ ಕಡೆ ಗಮನ ಕೊಟ್ಟು ಒಳ್ಳೆಯ ಶುದ್ಧ ಮತ್ತು ತಾಜಾ ಆಹಾರ ಸೇವನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ
ಸಲಹೆ ನೀಡಿದರು.
ಡಾ| ಎಸ್.ಎಸ್. ಗುಬ್ಬಿ, ಡಾ| ಎಸ್. ಎಸ್. ಪಾಟೀಲ ಅವರಿಗೆ ಸಂಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರಾಮದ ಪ್ರಮುಖರಾದ ವೀರಣಗೌಡ ಪಾಟೀಲ, ಪ್ರಾಧ್ಯಾಪಕ ಸಿದ್ರಾಮಯ್ಯ ಮಠ, ಯುವ ಸಾಹಿತಿ ಬಿ.ಎಚ್. ನಿರಗುಡಿ, ಶಿಕ್ಷಣಾಧಿಕಾರಿ ಚಂದ್ರಶೇಖರ ಪಾಟೀಲ ಹಾಗೂ ಸಂಸ್ಥೆ ಅಧ್ಯಕ್ಷೆ ವಾಣಿ ಯರನಾಳೆ ಇದ್ದರು.
ಸಂಗಯ್ಯ ಹಳ್ಳದಮಠ ಪ್ರಾರ್ಥನಾ ಗೀತೆ ಹಾಡಿದರು. ಡಾ| ರಾಜೇಂದ್ರ ಯರನಾಳೆ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ