ಜಾನಪದ ಸಾಹಿತ್ಯದ ಅಗತ್ಯ ಈಗಲೇ ಹೆಚ್ಚು


Team Udayavani, Feb 7, 2020, 12:14 PM IST

7-February-7

ಕಲಬುರ್ಗಿ: ಮೌಲ್ಯಗಳು ಅಪಮೌಲ್ಯಗಳಾಗುತ್ತಿರುವ ಸಂದರ್ಭದಲ್ಲಿ ಜನಪದ ಸಾಹಿತ್ಯ ಎಂದಿಗಿಂತ ಹೆಚ್ಚು ಅವಶ್ಯಕವಾಗಿದೆ ಎಂದು ಡಾ. ಶೈಲಜಾ ಬಾಗೇವಾಡಿ ಹೇಳಿದರು.

ಸಮ್ಮೇಳನದ ದ್ವಿತೀಯದಿನ ನಡೆದ ಜಾನಪದ ಜಗತ್ತು ಗೋಷ್ಠಿಯಲ್ಲಿ  ಜಾನಪದ ಸಾಹಿತ್ಯದ ವಿಷಯದ ಕುರಿತು ಮಾತನಾಡಿದರು. ಜಾಗತೀಕರಣದ ಯುಗದಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಮಾನವೀಯ ಮೌಲ್ಯಗಳು, ಜೀವನ ಪದ್ಧತಿ, ರೀತಿ-ನೀತಿ ಪ್ರತಿಪಾದಿಸುವ ಜಾನಪದ ಸಾಹಿತ್ಯ ಹೆಚ್ಚು ಅವಶ್ಯಕವೆನಿಸುತ್ತದೆ ಎಂದರು. ಜಾನಪದ ಸಾಹಿತ್ಯದಲ್ಲಿನ
ಜೀವನಮೌಲ್ಯ ಶಿಷ್ಟ ಸಾಹಿತ್ಯದಲ್ಲಿ ಸಿಗಲಾರದು.

ಅನುಭವಾಮೃತವೇ ಇದಕ್ಕೆ ಕಾರಣವಾಗಿದೆ. ಜಾನಪದ ಸಾಹಿತ್ಯದಲ್ಲಿ ವೈಯಕ್ತಿಕ ಮೌಲ್ಯಕ್ಕಿಂತ, ಸಾಮಾಜಿಕ ಮೌಲ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಜಾನಪದವು ಹೃದಯದಿಂದ ಹೃದಯಕ್ಕೆ ಹರಿಯುವ ಜೀವದ್ರವ್ಯವಾಗಿದೆ. ಬದುಕಿನ ರಸಾನುಭವ ಇದರಲ್ಲಿದೆ. ಅದರೂ ಕೆಲವರು ಜಾನಪದ ಸಾಹಿತ್ಯವನ್ನು ಲಘುವಾಗಿ ಪರಿಗಣಿಸುತ್ತಿರುವುದು ದುರ್ದೈವದ ಸಂಗತಿ. ಜನವಾಣಿ ಬೇರು, ಕವಿವಾಣಿ ಹೂವು ಎಂದು ಹಿರಿಯ ಕವಿಗಳೇ ಹೇಳಿದ್ದನ್ನು ಸ್ಮರಿಸಿಕೊಳ್ಳುವುದು ಸೂಕ್ತವಾಗಿದೆ ಎಂದರು. ಡಾ.ರಾಜಶ್ರೀ ಜಾನಪದ ಹಾಗೂ ಸಮಕಾಲೀನತೆ ಕುರಿತು ಮಾತನಾಡಿ, ಪ್ರಸ್ತುತ ಜಾನಪದ ಲಿಖೀತ ರೂಪದಲ್ಲಿ ಮಾತ್ರವಲ್ಲ, ಆದು ನಾಗರಿಕ ಹಾಗೂ ಜಾಗತಿಕ ನೆಲೆಯಲ್ಲಿ ವಿಸ್ತರಿತಗೊಂಡಿದೆ.

ಜಾನಪದವನ್ನು ಅಧ್ಯಯನ ಶಿಸ್ತಾಗಿ ಬೆಳೆಸಲಾಗುತ್ತಿದೆ. ಇದು ಪರಿಶೀಲನೆಯ ಹೊಸ ವಿಷಯವಾಗಿ ರೂಪಗೊಂಡಿದೆ ಎಂದರು. ಡಾ.ಹಣಮಂತರಾವ ದೊಡ್ಡಮನಿ ಜಾನಪದ ಕಲೆಗಳು ಕುರಿತು ಮಾತನಾಡಿ, ಬಾಯಿಯಿಂದ ಕಿವಿಗೆ ಕಂಠಸ್ಥವಾಗಿ ಬಂದ ಸಾಹಿತ್ಯವೇ ಜಾನಪದ. ಮಾನವರಲ್ಲಿ ಮಾನವೀಯ ಮೌಲ್ಯಗಳು ಅರಂಭಗೊಂಡಂದಿನಿಂದ ಜಾನಪದ ಅರಂಭಗೊಂಡಿದೆ. ಜಾಗತೀಕರಣದ ಯುಗದಲ್ಲಿ ಯಂತ್ರಗಳಿಂದಾಗಿ ಜಾನಪದ ಹಾಡುಗಳು ಮಾಯವಾಗುತ್ತಿವೆ. 10-15 ದಿನಗಳ ಕಾಲ ನಡೆಯುತ್ತಿದ್ದ ಮದುವೆಗಳು ಕೆಲ ಗಂಟೆಗಳಿಗೆ ಸೀಮಿತಗೊಳ್ಳುತ್ತಿರುವುದರಿಂದ ಜಾನಪದಕ್ಕೆ ಆಚರಣೆಗಳಲ್ಲಿ ಸ್ಥಾನ ಇಲ್ಲವಾಗಿದೆ.

ಶಿಶುನಾಳ ಶರೀಫ‌, ಕಡಕೋಳ ಮಡಿವಾಳಪ್ಪ ತತ್ವಪದಗಳಿಂದ ಜಾನಪದವನ್ನು ಜನರಿಗೆ ಮುಟ್ಟಿಸುವ ಪ್ರಮುಖ ಕಾರ್ಯ ಮಾಡಿದರು ಎಂದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಬಿ.ಆರ್‌. ಪೊಲೀಸ್‌ ಪಾಟೀಲ, ಬಯಲಾಟ ಹಾಗೂ ಯಕ್ಷಗಾನ ಕುರಿತು ಮಾತನಾಡಿ, ಮಕ್ಕಳ ಕೈಗೆ ಮೊಬೈಲ್‌ ಬದಲಿಗೆ ಜಾನಪದ ಸಾಹಿತ್ಯವನ್ನು ನೀಡುವ ಅವಶ್ಯಕತೆಯಿದೆ. ಇದೇ ಸಂದರ್ಭದಲ್ಲಿ ಅಪ್ಪಟ ಜಾನಪದ ಹಾಡುಗಳನ್ನು ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಹೆಚ್ಚು ಜನರಿಗೆ ಮುಟ್ಟಿಸಬೇಕು. ಜಾನಪದ ಸಾಹಿತ್ಯವನ್ನು ಓದಿದರೆ ಸಾಲದು, ಅದನ್ನು ಅನ್ವಯಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ, ಉತ್ತರ ಕನ್ನಡದವರು ಯಕ್ಷಗಾನ ಬೆಳೆಸಿದಂತೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದವರು ದೊಡ್ಡಾಟ, ಸಣ್ಣಾಟ ಬೆಳೆಸಬೇಕು. ನಮ್ಮ ಕಲೆಗಳನ್ನು ಪೋತ್ಸಾಹಿಸಬೇಕು ಎಂದರು.

ವಿಶ್ವನಾಥ ಕೋಟಿ

ಟಾಪ್ ನ್ಯೂಸ್

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.