150 ವರ್ಷಗಳಿಗೊಮ್ಮೆ ನಡೆಯುವ ನಭ ವಿಸ್ಮಯ


Team Udayavani, Jan 28, 2018, 10:45 AM IST

gul-3.jpg

ಕಲಬುರಗಿ: ಈ ಶತಮಾನದ ಸುಂದರ ಚಂದ್ರಗ್ರಹಣ ಅಥವಾ ಆಕಾಶ ಕೌತುಕ ಮತ್ತು ನೀಲಿ ಚಂದ್ರ ಆಕಾಶದಲ್ಲಿ ಗೋಚರಿಸಲಿದ್ದು, ಅದು ವಿಶಿಷ್ಟ ಚಂದ್ರಗ್ರಹಣವಾಗಿ ಏರ್ಪಡಲಿದೆ. ಇದನ್ನು ನೋಡಲು ನಗರದ ಶರಣಬಸವೇಶ್ವರ ಶಾಲೆ ಮೈದಾನದಲ್ಲಿ ಬ್ರೆಕ್‌ ಥ್ರೂ ಸೈನ್ಸ್‌ ಸೊಸೈಟಿ ವ್ಯವಸ್ಥೆ
ಮಾಡಿದೆ ಎಂದು ಗುವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ| ರಮೇಶ ಲಂಡನಕರ್‌ ಹಾಗೂ ಸೊಸೈಟಿ ಜಿಲ್ಲಾಧ್ಯಕ್ಷ  ಅಭಯಾ ದಿವಾಕರ್‌ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಪ್ರತಿ 150 ವರ್ಷಗಳಿಗೊಮ್ಮೆ ನಡೆಯುವ ನಭ ವಿಸ್ಮಯವಾಗಿದೆ. ಈ ಹಿಂದೆ 1866ರ ಮಾರ್ಚ್‌ 31ರಂದು ನಡೆದಿತ್ತು. ಈ ವೇಳೆ ನೀಲಿ ಚಂದ್ರ, ದೈತ್ಯ ಚಂದ್ರ ಮತ್ತು ತಾಮ್ರ ಚಂದ್ರ ಏಕಕಾಲಕ್ಕೆ ನೋಡಬಹುದಾದಂತಹ ವಿಶಿಷ್ಟ ಗ್ರಹಣವಿದು. ಇದನ್ನು ನೋಡುವುದು ತುಂಬಾ ಖುಷಿ ಕೊಡುತ್ತದೆ ಎಂದು ಹೇಳಿದರು.

ಗ್ರಹಣ ಒಂದು ಸಾಮನ್ಯ ಕ್ರಿಯೆಯಾಗಿದೆ. ಇದರಿಂದ ಯಾವುದೇ ಅಶುಭ ಮತ್ತು ಶುಭ ಫಲಗಳು ಇರುವುದಿಲ್ಲ. ಗ್ರಹಣದ ವೇಳೆ ನೀರು ಕುಡಿಯಬಾರದು, ಊಟ ಮಾಡಬಾರದು, ಗ್ರಹಣದ ಬಳಿಕ ಸ್ನಾನ ಸೇರಿದಂತೆ ಇತರೆ ಚಟುವಟಿಕೆಗಳನ್ನು ಮಾಡಬೇಕು. ರಾತ್ರಿಯಾದರೂ ಸರಿ ಪೂಜೆ ಮಾಡಿ ಊಟ ಮಾಡಬೇಕು. ಗರ್ಭಿಣಿಯರು ಹೊರ ಬರಬಾರದು, ಕೆಲಸ ಮಾಡಬಾರದು ಎನ್ನುವುದನ್ನು ನಾವೇ ಸೃಷ್ಟಿ ಮಾಡಿಕೊಂಡ ಭಯಾನಕ ಮೌಡ್ಯಗಳು ಎಂದರು.

ಎಲ್ಲಾ ಮೌಡ್ಯ ಮತ್ತು ಮೂಢನಂಬಿಕೆಯಿಂದ ಜನರು ಹೊರಬಂದು ನಗರದ ಶರಣಬಸವೇಶ್ವರ ಶಾಲೆ  ದಾನದಲ್ಲಿ ಸೊಸೈಟಿ ಅಳವಡಿಸುವ ಟೆಲಿಸ್ಕೋಪ್‌ ಮುಖಾಂತರ ಗ್ರಹಣ ವೀಕ್ಷಿಸಿ ಎಂದು ಮನವಿ ಮಾಡಿದರು.

ಈ ಚಂದ್ರಗ್ರಹಣವು ನೀಲಿ ಚಂದ್ರ (ಒಂದೇ ತಿಂಗಳಲ್ಲಿ ಬರುವ ಎರಡು ಹುಣ್ಣಿಮೆ) ಎಂದು ಕರೆಸಿಕೊಂಡಿದ್ದು, ದೈತ್ಯ ಚಂದ್ರ ಮತ್ತು ತಾಮ್ರ ಚಂದ್ರನಂತೆ ಅಂದು ಚಂದ್ರನ ನಿಸರ್ಗ ವಿಸ್ಮಯ ದೃಶ್ಯಾವಳಿ ಗೋಚರಿಸಲಿದೆ. ಅಂದು ವೀಕ್ಷಣೆಗೆ ಒಂದು ಟೆಲಿಸ್ಕೋಪ್‌ ವ್ಯವಸ್ಥೆ  ಮಾಡಲಾಗುವುದು. ಅಂದು ಸಂಜೆ 6:10 ರಿಂದ 9:38ರ ವರೆಗೆ ಗ್ರಹಣವಿರುತ್ತದೆ.

ಎರಡು ದಿನಗಳ ಮಂಚೆ ಮುಕ್ತವಾಗಿ ನೋಡಲು ಸ್ಥಳ ಗುರುತಿಸಿಕೊಂಡು ಕುಟುಂಬ ಸಮೇತ ಎಲ್ಲರೂ ಚಂದ್ರಗ್ರಹಣ ವೀಕ್ಷಿಸಬಹುದು. ನಗರದ ಶಾಲೆ ಕಾಲೇಜುಗಳ ಮೈದಾನದಲ್ಲಿಯೂ ವಿದ್ಯಾರ್ಥಿಗಳಿಗೆ ಚಂದ್ರಗ್ರಹಣ ನೋಡಲು ಅವಕಾಶ ಮಾಡಬೇಕೆಂದು ಕೋರಿದರು.
ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ 8951824630ಕ್ಕೆ ಸಂಪರ್ಕಿಸಬಹುದು ಎಂದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.