ಹೆದ್ದಾರಿ ಮಾರ್ಗ ಫಲಕದಲ್ಲಿ”ಅಕ್ಷರ ದೋಷ’ 


Team Udayavani, Dec 28, 2021, 1:15 PM IST

Untitled-1

ಜೇವರ್ಗಿ: ಹುಮ್ನಾಬಾದದಿಂದ ಕಲಬುರಗಿ ನಗರ ಹಾಗೂ ಜೇವರ್ಗಿ ಪಟ್ಟಣದ ಮೂಲಕ ವಿಜಯಪುರನಗರಕ್ಕೆ ಹಾಯ್ದು ಹೋಗಿರುವ ರಾಷ್ಟ್ರೀಯಹೆದ್ದಾರಿ-50ರಲ್ಲಿ ಕನ್ನಡದ ಕಗ್ಗೊಲೆಯಾಗಿದೆ.ಪರಿಣಾಮ ಊರುಗಳ ನೈಜ ಹೆಸರು ಅರಿಯಲುಪ್ರಯಾಣಿಕರು ಹೆಣಗಾಡಬೇಕಿದೆ.

ರಾಜ್ಯದ ರಾಜಧಾನಿ ಬೆಂಗಳೂರು “ಬ್ ಂಗಳೂರು’, ಹೊಸಪೇಟೆಗೆ”ಹೂಸಪೇಟ’, ಕೋಟ ನೂರಗೆ ಕೋಟ್ನೂರ್‌, ಸಿರನೂರಗೆ “ಸಿರ್ನೂರ’, ರೇವನೂರಗೆ “ರಾವನೂರ’, ಆಳಂದಗೆ “ಅಳಂದ ಎಂದು ನಗರದ ಮತ್ತು ಊರುಗಳ ಹೆಸರನ್ನು ತಪ್ಪು ತಪ್ಪಾಗಿ ಬರೆದು ಆಭಾಸವುಂಟು ಮಾಡಲಾಗಿದೆ.

ಹೆದ್ದಾರಿ ಪ್ರಾಧಿಕಾರದವರು ಮಾಡಿರುವ ಯಡವಟ್ಟಿನಿಂದಸಾಕಷ್ಟು ಜನರಿಗೆ ನಿತ್ಯ ತೊಂದರೆಯಾಗುತ್ತಿದೆ. ಕೂಡಲೇ ಅಕ್ಷರ ದೋಷ ಸರಿಪಡಿಸಲು ಪ್ರಯತ್ನಿಸಬೇಕು.  ಗುರುಲಿಂಗಯ್ಯಸ್ವಾಮಿ ಯನಗುಂಟಿ, ಸ್ಥಳೀಯರು.

ಜೇವರ್ಗಿ ಪಟ್ಟಣ ಮೂಲಕ ಹಾಯ್ದು ಹೋಗಿರುವ ಹೆದ್ದಾರಿ-50ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೆಲ ಗ್ರಾಮಗಳ, ನಗರಗಳ ಹೆಸರು ಬರೆದು ಅಳವಡಿಸಿರುವ ನಾಮಫಲಕಗಳಲ್ಲಿ ಆಗಿರುವ ಕನ್ನಡ ಭಾಷೆಯ ಕಗ್ಗೊಲೆಯಾಗಿರುವ ಪರಿ ಇದು.

ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಊರುಗಳ ಸಮೀಪ ಪ್ರಯಾಣಿಕರಿಗೆ, ದೂರದ ಊರುಗಳಿಂದಬರುವವರಿಗೆ, ಸ್ನೇಹಿತರಿಗೆ ಗ್ರಾಮಗಳ ಹೆಸರುಸುಲಭವಾಗಿ ಗುರುತು ಸಿಗುವಂತೆ ಮಾಡುವಉದ್ದೇಶದಿಂದ ಸಹಜವಾಗಿ ಗ್ರಾಮಗಳ ಬಸ್‌ನಿಲ್ದಾಣ ಹಾಗೂ ತಂಗುದಾಣಗಳ ಬಳಿ ಊರುಗಳಹೆಸರು ಬರೆದು ನಾಮಫಲಕ ಹಾಕುವುದು ಸಾಮಾನ್ಯ.

ಆದರೆ ಅದೇ ಊರುಗಳ ಹೆಸರುಗಳನ್ನು ಹೆದ್ದಾರಿ ಪ್ರಾಧಿಕಾರವೀಗ ಮಾಡಿರುವ ಎಡವಟ್ಟಿನಿಂದ ಪ್ರಯಾಣಿಕರ ಹಾಗೂ ಗ್ರಾಮಸ್ಥರಿಂದ ನಿತ್ಯ ಅಪಹಾಸ್ಯಕ್ಕೀಡಾಗುತ್ತಿರುವುದು ಒಂದೆಡೆಯಾದರೆಮತ್ತೂಂದೆಡೆ ಕನ್ನಡ ಭಾಷೆ ಕಗ್ಗೊಲೆಯಾಗಿ ಕನ್ನಡಿಗರಆಕ್ರೋಶಕ್ಕೆ ಕಾರಣವಾಗಿದೆ. ಬಹಳಷ್ಟು ಗ್ರಾಮಗಳ ಹೆಸರು ನಾಮಫಲಕಗಳಲ್ಲಿ ಕಾಗುಣಿತ ದೋಷದಿಂದ ಗ್ರಾಮಗಳಿಗೆ ಬರುವ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಗೊಂದಲ ಉಂಟಾಗುತ್ತಿದೆ. ಬಹಳಷ್ಟುಕಡೆ ಕಾಗುಣಿತ ತಪ್ಪಿನಿಂದ ಈ ರೀತಿಯ ಆವಾಂತರ ನಾಮಫಲಕಗಳಲ್ಲಾಗಿದ್ದು, ಸರಿಪಡಿಸುವ ಗೋಜಿಗೆ ಯಾರೂ ಮುಂದಾಗಿಲ್ಲ.

ಕಲಬುರಗಿಯಿಂದ ಜೇವರ್ಗಿ ಮಾರ್ಗವಾಗಿ ಸಿಂದಗಿಗೆ ತೆರಳುವ ಮಾರ್ಗದುದ್ದಕ್ಕೂ ಬಹಳಷ್ಟು ಗ್ರಾಮಗಳ ಹೆಸರು ತಪ್ಪಾಗಿ ನಾಮಫಲಕಗಳಲ್ಲಿಅಳವಡಿಸಲಾಗಿದೆ. ಆದರೆ ಯಾರೂ ಕೂಡ ಈಬಗ್ಗೆ ಧ್ವನಿ ಮೊಳಗಿಸಿ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸಕ್ಕೆ ಮುಂದಾಗಿಲ್ಲ. ಈ ಮಾರ್ಗದ ಮೂಲಕ ರಾಜ್ಯದ ಮಂತ್ರಿಗಳು, ಶಾಸಕರು, ಜಿಲ್ಲಾ-ರಾಜ್ಯಮಟ್ಟದ ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಈ ಬಗ್ಗೆ ಯಾರೂ ಗಮನ ಹರಿಸದಿರುವುದು ಬೇಸರದ ಸಂಗತಿ.

ಅಕ್ಷರ ದೋಷದಿಂದ ಊರಿನ ನಿಜವಾದ ಹೆಸರೇನು ಎಂದು ಅರಿಯಲು ಅವರಿವರ ಸಹಾಯ ಪಡೆಯುವಂತಾಗಿದೆ. ಇದರಿಂದ ವಾಹನಚಾಲಕರಿಗೆ ಗೊಂದಲ ಸೃಷ್ಟಿಯಾಗಿದೆ. ಕನ್ನಡಪರ ಸಂಘಟನೆ ಕಾರ್ಯಕರ್ತರು ನಿತ್ಯ ಇದೇ ರಸ್ತೆ ಮೇಲೆ ಸಂಚರಿಸಿದರೂ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ.

ಹೆದ್ದಾರಿ ಪ್ರಾಧಿಕಾರದವರು ಮಾಡಿರುವ ಯಡವಟ್ಟಿನಿಂದ ಸಾಕಷ್ಟು ಜನರಿಗೆ ನಿತ್ಯ ತೊಂದರೆಯಾಗುತ್ತಿದೆ. ಕೂಡಲೇ ಅಕ್ಷರ ದೋಷಸರಿಪಡಿಸಲು ಪ್ರಯತ್ನಿಸಬೇಕು.-ಗುರುಲಿಂಗಯ್ಯಸ್ವಾಮಿ ಯನಗುಂಟಿ, ಸ್ಥಳೀಯರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದು ಕೂಡಲೇ ಅಕ್ಷರ ದೋಷ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. -ವಿನಯಕುಮಾರ ಪಾಟೀಲ, ತಹಶೀಲ್ದಾರ್‌, ಜೇವರ್ಗಿ

-ವಿಜಯಕುಮಾರ ಎಸ್‌.ಕಲ್ಲಾ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.