ಕುಂಚಾವರಂನಲ್ಲಿ ಮಕ್ಕಳ ಮಾರಾಟ-ಖಂಡನೆ
Team Udayavani, Mar 17, 2018, 1:05 PM IST
ಸೇಡಂ: ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ಹೆಣ್ಣು ಮಕ್ಕಳ ಮಾರಾಟ ನಡೆಯುತ್ತಿದ್ದು, ರಾಜ್ಯ ಸರ್ಕಾರ ಗಮನಹರಿಸಬೇಕು ಎಂದು ಕರವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಆಗ್ರಹಿಸಿದರು.
ಕುಂಚಾವರಂನ ಮಕ್ಕಳ ಮಾರಾಟ ಘಟನೆ ಖಂಡಿಸಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಿದ ಅವರು, ಮಕ್ಕಳ ಮಾರಾಟದ ಹಿಂದಿರುವ ಮರ್ಮ ಅರಿಯಬೇಕು. ಅಲ್ಲಿನ ಜನತೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿ, ಬಡತನದಿಂದ ಮುಕ್ತಿ ಕೊಡಿಸಬೇಕು ಎಂದು ಒತ್ತಾಯಿಸಿದರು.
ಮಕ್ಕಳ ಮಾರಾಟದಂತಹ ಕೀಳು ಮಟ್ಟದ ಸ್ಥಿತಿಗೆ ಜನ ತಲುಪಿರುವುದು ಇಡೀ ರಾಜ್ಯಕ್ಕೆ ಆದ ಅವಮಾನ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕುಂಚಾವರಂ ಭಾಗದ ಬಡ ಕುಟುಂಬಗಳಿಗೆ ವಿಶೇಷ ಯೋಜನೆಗಳನ್ನು ಘೋಷಿಸಬೇಕು. ಸೇಡಂನ ಕಲಬುರಗಿ ವೃತ್ತಕ್ಕೆ ಬಸವೇಶ್ವರ ಹೆಸರನ್ನಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕಾರ್ಯದರ್ಶಿ ವಿದ್ಯಾಸಾಗರ ದುದ್ದೇಲಿ, ಮಹೇಶ ಪಾಟೀಲ, ಶ್ರೀನಿವಾಸರೆಡ್ಡಿ, ದೇವು ನಾಟೀಕಾರ, ಮಹೇಶ ಇಮಡಾಪುರ, ಸುಭಾಶ ಇಮಡಾಪುರ, ರವಿ ಮದರಿ, ರವಿಸಿಂಗ ಇಮಡಾಪುರ, ಮಹಿಪಾಲ, ಭಗವಂತ ನಾಟೀಕಾರ, ಭೀಮಾಶಂಕರ, ಕಾಶಿನಾಥ ಮದರಿ, ಶಶಿ ಪಾಟೀಲ ಮುಗನೂರ, ಭೀಮರೆಡ್ಡಿ ಮಲ್ಕಾಪಲ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ