ಸರಸ್ವತಿ ದೇಗುಲ-ಕಲ್ಯಾಣಿ ಜೀರ್ಣೋದ್ಧಾರಕ್ಕೆ ಭರವಸೆ
Team Udayavani, Jun 1, 2018, 10:56 AM IST
ಕಾಳಗಿ: ಪಟ್ಟಣದ ಸರಸ್ವತಿ ಕಲ್ಯಾಣಿ ಮರುಜೀವ ಪಡೆದುಕೊಂಡಿದ್ದು, ಗುರುವಾರ ತಾಪಂ ಕಾರ್ಯನಿರ್ವಾಹಕ
ಅಧಿಕಾರಿ ಅಬ್ದುಲ್ ನಬಿ ಯಲಗಾರ ಭೇಟಿ ನೀಡಿ ಕಲ್ಯಾಣಿ ಮೆಟ್ಟಿಲು, ಗೋಡೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ಮಂಗಳವಾರ “ಉದಯವಾಣಿ’ಯಲ್ಲಿ “ರಾಷ್ಟ್ರಕೂಟರ ಕಾಲದ ಸರಸ್ವತಿ ಕಲ್ಯಾಣಿಗೆ ಮರುಜೀವ’ ಎನ್ನುವ ತಲೆ ಬರಹದಡಿ ಪ್ರಕಟವಾದ ವರದಿಗೆ ಸ್ಪಂದಿಸಿ ಗುರುವಾರ ಕಲ್ಯಾಣಿಗೆ ಭೇಟಿ ನೀಡಿ, ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ ಹಾಗೂ ಬಾವಿಯನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು. ಇದಕ್ಕೆ ಗ್ರಾಮಸ್ಥರ ಸಹಾಕಾರ ಅವಶ್ಯವಾಗಿದೆ ಎಂದರು.
ಸರಸ್ವತಿ ಕಲ್ಯಾಣಿ ಸ್ವಚ್ಚತೆ ಕಾರ್ಯ ಪ್ರಾರಂಭಿಸಿದ ಯುವಕರ ಕಾರ್ಯಕ್ಕೆ ಶ್ಲಾಘಿಸಿದ ಅವರು ಕಲ್ಯಾಣಿಯಲ್ಲಿ ನೀರಿನ ಹರಿವು ಹೆಚ್ಚುತ್ತಿರುವುದು ಸಂತಸದಾಯಕ ಆಗಿದೆ ಎಂದರು.
ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಲ್ಯಾಣಿಯಲ್ಲಿನ ಸಂಪೂರ್ಣ ಹೂಳು ತೆಗೆಸಲಾಗುವುದು. ಗೋಡೆ ಹಾಗೂ ಮೆಟ್ಟಿಲುಗಳನ್ನು ಸರಿಪಡಿಸಿ ನಿರ್ಮಿಸಲಾಗುವುದು. ಸರಸ್ವತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಪುರಾತತ್ವ ಇಲಾಖೆಯಡಿ ಅಭಿವೃದ್ಧಿ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.
ಪಂಚಾಯತ ಅಭಿವೃದ್ಧಿ ಅಧಿಕಾರಿ ಸಿದ್ದಣ್ಣ ಬರಗಾಲಿ, ಲೆಕ್ಕಾಧಿಕಾರಿ ಶಾಂತಗೌಡ ಪಾಟೀಲ, ಬಿಲ್ ಕಲೆಕ್ಟರ್ ದತ್ತು
ಕಲಾಲ್, ಪಿಇಎ ಹಣಮಂತರೆಡ್ಡಿ, ಬಿಎಸ್ಸಿ ಕಾಳಪ್ಪ ಕಡಬೂರ, ಗ್ರಾಪಂ ಸದಸ್ಯ ಜಗನ್ನಾಥ ಚಂದಕೇರಿ, ಸರಸ್ವತಿ ದೇವಸ್ಥಾನ ಸಮಿತಿ ಅಧ್ಯಕ್ಷ ರವಿದಾಸ ಪತಂಗೆ, ಬಸವರಾಜ ಸಿಂಗಶೆಟ್ಟಿ, ಉದಯಕುಮಾರ ಸಿಂಗಶೆಟ್ಟಿ, ಮುನೀರ ಬಿಜಾಪುರ, ಕೂಲಿ ಕಾರ್ಮಿಕರಾದ ರಂಗಾ ಒಡೆಯರಾಜ, ಸಂತೋಷ ಒಡೆಯರಾಜ, ಅನಿಲ ಒಡೆಯರಾಜ, ತಿಪ್ಪ ಒಡೆಯರಾಜ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
MUST WATCH
ಹೊಸ ಸೇರ್ಪಡೆ
ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ
Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು