ಬೆಲೆ ಏರಿಕೆ ನಡುವೆ ಬೆಳಕಿನ ಹಬ್ಬಆಚರಿಸಲು ಜನತೆ ಸಜ್ಜು
ಮಾಸ್ತಿ ಸೇರಿ ಹೋಬಳಿಯಾದ್ಯಂತ ಅಗತ್ಯ ವಸ್ತುಗಳಲ್ಲಿ ಖರೀದಿಯಲ್ಲಿ ತೊಡಗಿದ ಜನತೆ ಬೆಲೆ ದುಪ್ಪಟ್ಟಾದರೂ ಭರ್ಜರಿ ವ್ಯಾಪಾರ
Team Udayavani, Nov 4, 2021, 2:26 PM IST
ಮಾಸ್ತಿ: ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲು ಮಾಸ್ತಿ ಸೇರಿದಂತೆ ಹೋಬಳಿಯಾದ್ಯಂತ ಜನತೆ ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಮಾಸ್ತಿಯಲ್ಲಿ ಬುಧವಾರ ಹಣತೆ, ನೋಮುದಾರ ಹಾಗೂ ಪಟಾಕಿ ಸೇರಿದಂತೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ಮುಗಿಬಿದ್ದ ಗ್ರಾಹಕರು: ಮಾಸ್ತಿ ಗ್ರಾಮದ ಬಸ್ ನಿಲ್ದಾಣ ಸೇರಿ ಪ್ರಮುಖ ರಸ್ತೆಯಲ್ಲಿ ಹಣತೆ, ನೋಮುದಾರ, ಹೂ, ಹಣ್ಣು ಹಂಪಲು, ಮೊರ, ದೀಪಾವಳಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ವ್ಯಾಪಾರದ ವಹಿವಾಟು ನಡೆದಿದ್ದು, ಬುಧವಾರ ಬೆಳಗ್ಗೆಯಿಂದಲೇ ಗ್ರಾಹಕರು ಮುಗಿಬಿದ್ದಿದ್ದರು. ಬೆಲೆ ಏರಿಕೆ ಲೆಕ್ಕಿಸದೆ ಹಬ್ಬಕ್ಕೆ ಅಗತ್ಯ ವಸ್ತು ಖರೀದಿಸಲು ಬುಧವಾರ ಮಾಸ್ತಿಯಲ್ಲಿ ಜನತೆ ಜಾತ್ರೆಯಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಬಸ್ ನಿಲ್ದಾಣದ ಅಂಗಡಿ ಮುಂಗಟ್ಟುಗಳಿಗೆ ಮುಗಿ ಬಿದ್ದಿದ್ದರು.
ಪಟಾಕಿ ವ್ಯಾಪಾರ ಕಡಿಮೆ: ಮಾಸ್ತಿಯಲ್ಲಿ ಕಳೆದ 2-3 ವರ್ಷಗಳ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಪಟಾಕಿ ವ್ಯಾಪಾರ ನಡೆದಿಲ್ಲ. ಪ್ರತಿ ವರ್ಷ ಎಲ್ಲೆಂದರಲ್ಲಿ ಪಟಾಕಿ ಅಂಗಡಿಗಳು ತಲೆ ಎತ್ತಿರುತ್ತಿದ್ದವು. ಆದರೆ ಈ ಬಾರಿ ಒಂದೆರೆಡು ಪಟಾಕಿ ಅಂಗಡಿ ಬಿಟ್ಟರೆ ಪಟಾಕಿ ಅಂಗಡಿಗಳೇ ಕಾಣ ಸಿಕ್ಕಿಲ್ಲ. ಪಟಾಕಿ ಚೀಟಿಗಳ ಹಾವಳಿ ಹೆಚ್ಚಾಗಿರುವ ಕಾರಣ ಅಂಗಡಿಗಳು ಕಡಿಮೆಯಾಗಿವೆ.
ಅಂಗಡಿಗಳಲ್ಲಿ ಖರೀದಿ ಇಲ್ಲ:ಪಟಾಕಿ ಚೀಟಿ ನಡೆಸುವ ಮಾಲಿಕರು ಪ್ರತಿ ತಿಂಗಳಿನಂತೆ ಒಂದು ವರ್ಷ ಕಂತು ಕಟ್ಟಿಸಿಕೊಂಡು ಯಾವುದಾದರೂ ಗೃಹೋಪಯೋಗಿ ವಸ್ತು ಅಥವಾ ದಿನಸಿ ಜತೆಗೆ ಪಟಾಕಿ ಬಾಕ್ಸ್ ನೀಡುವುದರಿಂದ ಜನತೆ ಅಂಗಡಿಗಳಲ್ಲಿ ಪಟಾಕಿ ಕೊಳ್ಳುವುದು ಕಡಿಮೆಯಾಗಿದೆ.
ಮಣ್ಣಿನ ಮಡಿಕೆಗಳ ವ್ಯಾಪಾರ ಕುಸಿತ: ಈ ಹಿಂದೆ ಮಣ್ಣಿನ ಮಡಿಕೆಗಳನ್ನು ಹಬ್ಬಕ್ಕೆ ಹೆಚ್ಚಾಗಿ ಬಳಸಿ ಕೊಳ್ಳುತ್ತಿದ್ದರು. ಆದರೆ, ಆಧುನಿಕತೆ ಹೆಚ್ಚಾದಂತೆಲ್ಲಾ ಮಣ್ಣಿನ ಮಡಿಕೆಗಳ ಬಳಕೆ ಕಡಿಮೆಯಾಗುತ್ತಿದ್ದು ಬೇಡಿಕೆಯೂ ಕುಸಿದಿದೆ. ಬೆಳಕಿನ ಹಬ್ಬಕ್ಕೆ ಸಿದ್ದತೆ: ಹಾಗೆಯೇ ಗ್ರಾಮೀಣ ಭಾಗದಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರು ಮನೆಗಳಿಗೆ ಈಗಾಗಲೇ ಸುಣ್ಣ ಬಣ್ಣ ಬಳಿದು ಶುಭ್ರಗೊಳಿಸಿ ಸಮೀಪದ ಮಾರುಕಟ್ಟೆಗಳಿಗೆ ತೆರಳಿ ಪೂಜಾ ಸಾಮಗ್ರಿ ಖರೀದಿಸಿ ತರುವ ಮೂಲಕ ದೀಪಾವಳಿಗೆ ತಯಾರಿ ನಡೆಸುತ್ತಿದ್ದಾರೆ.
“ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಿ. ಮಕ್ಕಳು ಪಟಾಕಿ ಹಚ್ಚುವುದನ್ನು ಬಿಟ್ಟು ಹಣತೆಗಳಿಂದ ದೀಪ ಹಚ್ಚಿ. ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯದ ಪ್ರಮಾಣದ ಹೆಚ್ಚಳದಿಂದ ಪರಿಸರಕ್ಕೆ ಹಾನಿ ಆಗುತ್ತದೆ.”- ಎಂ.ಪಿ.ಸತೀಶ್ ಆರಾಧ್ಯ, ಮಾಲೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷರು.
– ಮಾಸ್ತಿ ಎಂ.ಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್