ಚಳಿಗಾಳಿ ತಾಳಲಾರದೇ ನಿಲ್ದಾಣದಲ್ಲಿ ಭಿಕ್ಷುಕ ಸಾವು ..!
Team Udayavani, Nov 29, 2021, 2:45 PM IST
ಶ್ರೀನಿವಾಸಪುರ: ಭಿಕ್ಷುಕನೊಬ್ಬ ಚಳಿ ತಡೆಯಲಾರದೇ ಬಸ್ ನಿಲ್ದಾಣದಲ್ಲಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳ ಬದಿಯಲ್ಲಿ ಮಲಗಿದ್ದ 45 ವರ್ಷದ ವ್ಯಕ್ತಿ ಮೃತಪಟ್ಟಿದ್ದು,
ಇತ್ತೀಚಿಗೆ ಸುರಿದ ಮಳೆ, ಕೊರೆಯುವ ಚಳಿಯಲ್ಲಿ ಬೆಡ್ಶೀಟ್ ಕೂಡ ಇಲ್ಲದೆ ಮಲಗಿದ್ದು, ಚಳಿ ತಡೆಯಲಾರದೇ ಮೃತಪಟ್ಟಿದ್ದಾನೆ. ಬಸ್ ನಿಲ್ದಾಣದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಮೃತನು ಪಟ್ಟಣದ ನಿವಾಸಿಯೋ, ಅಥವಾ ಆಂಧ್ರ ಪ್ರದೇಶದವನೋ ತಿಳಿಯುತ್ತಿಲ್ಲ. ತಾಲೂಕಿನ ಲೋಚೆರವುಪಲ್ಲಿಯಲ್ಲಿ ಮದುವೆಯಾಗಿದ್ದಾನೆಂಬ ಮಾಹಿತಿಗಳು ಲಭ್ಯವಾದರೂ ನಿಖರವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮೃತನ ವಾರಸುದಾರರು ಬರುತ್ತಾರೆಂಬ ವಿಷಯ ಮಾತ್ರ ಪೊಲೀಸ್ ಠಾಣೆಯಿಂದ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್