ಡಿಸಿಸಿ ಬ್ಯಾಂಕ್ ತಂಡಕ್ಕೆ ಅಹವಾಲು ಸಲ್ಲಿಸಿ : ಅಧ್ಯಕ್ಷರ ಸೂಚನೆ
Team Udayavani, Dec 30, 2021, 3:39 PM IST
ಕೋಲಾರ : ತಾಲೂಕಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಸಮಗ್ರ ಪರಿಶೀಲನೆಗೆ ಡಿ.30 ರಂದು ಡಿಸಿಸಿ ಬ್ಯಾಂಕ್ ನಿರ್ದೇಶಕರ ತಂಡ ಹೊರಟಿದ್ದು, ಆಯಾ ಸಹಕಾರ ಸಂಘಗಳ
ವ್ಯಾಪ್ತಿಯಲ್ಲಿನ ರೈತರು, ಮಹಿಳೆಯರು ಸಾಲ ನೀಡಿಕೆಯಲ್ಲಿ ವಿಳಂಬ, ಸಾಲ ಸಿಗದಿರುವುದು ಮತ್ತಿತರ ಸಮಸ್ಯೆಗಳ ಕುರಿತು ಗಮನಕ್ಕೆ ತರುವಂತೆ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ
ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಯಾವ ಸೊಸೈಟಿಗೆ ಯಾವತ್ತು ಬರುತ್ತೇವೆ ಎಂಬ ಮಾಹಿತಿ ಹಂಚಿಕೊಂಡು, ಈ ಭಾಗದ ರೈತರು, ತಾಯಂದಿರು ಬ್ಯಾಂಕಿಂಗ್ ವಹಿವಾಟು, ಸಾಲ ವಿತರಣೆಯಲ್ಲಿ ಯಾವುದೇ ಲೋಪವಿದ್ದರೂ ತಮ್ಮ ಗಮನಕ್ಕೆ ತರಲು ಮನವಿ ಮಾಡಿದರು. ಅಹವಾಲು ಸಲ್ಲಿಸಿ: ಸಹಕಾರ ರಂಗವನ್ನು ಸಮಾಜದ ಕಟ್ಟಕಡೆ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ ನಡೆಸಿದ್ದು, ಸಹಕಾರ ಸಂಘದಿಂದ ಸೌಲಭ್ಯ ಸಿಗದೇ ವಂಚಿತರಾದ ರೈತರು, ತಾಯಂದಿರು ತಮ್ಮ ಅಹವಾಲು ಸಲ್ಲಿಸಬಹುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣದ ಪ್ರಗತಿ ಪರಿಶೀಲನೆ, ಠೇವಣಿ ಸಂಗ್ರಹಣೆ, ಸದಸ್ಯರಿಂದ ಸಂಘಕ್ಕೆ ಸಾಲ ವಸೂಲಾತಿ ಪ್ರಗತಿ ಪರಿಶೀಲನೆ, ಸಹಕಾರ ಸಂಘಗಳ ಆಡಳಿತ ಮಂಡಳಿಯೊಂದಿಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.
ಪರಿಶೀಲನೆ: ಈ ಸಂದರ್ಭದಲ್ಲಿ ಸೊಸೈಟಿಗಳ ಆಡಳಿತ ಮಂಡಳಿ ಅಧ್ಯಕ್ಷರು, ನಿರ್ದೇಶಕರು ಹಾಜರಿದ್ದು, ಪ್ಯಾಕ್ಸ್ನ ಪ್ರಗತಿ ಪರಿಶೀಲನೆಗೆ ಸಹಕಾರ ನೀಡುವಂತೆ ಕೋರಿದರು. ಅಲ್ಲದೇ,
ತಮ್ಮ ನೇತೃತ್ವದಲ್ಲಿ ಬ್ಯಾಂಕಿನ ಕೋಲಾರ ತಾಲೂಕು ನಿರ್ದೇಶಕರಾದ ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ಕುಮಾರ್, ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಯಲವಾರ
ಸೊಣ್ಣೇಗೌಡ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿರುವ ತಂಡ ಪ್ಯಾಕ್ಸ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದರು.
ಇದನ್ನೂ ಓದಿ : ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 23 ಕೂಲಿ ಕಾರ್ಮಿಕರಲ್ಲಿ ಕೋವಿಡ್ ಸೋಂಕು
ದೇಶದಲ್ಲೇ ಮೊದಲು: ಸಹಕಾರ ಸಂಘಗಳ ಗಣಕೀಕರಣದ ಮೂಲಕ ಪಾರದರ್ಶಕತೆಗೆ ಅವಕಾಶ ಕಲ್ಪಿಸಿ, ರೈತರು, ಮಹಿಳೆಯರ ನಂಬಿಕೆ ಗಟ್ಟಿಗೊಳಿಸುವ ಪ್ರಯತ್ನ ದೇಶದಲ್ಲೇ ಮೊದಲು
ಎನ್ನುವಂತೆ ಕೈಗೊಂಡಿದ್ದೇವೆ. ಆದರೆ ಪ್ಯಾಕ್ಸ್ಗಳು ಇದರ ಅಳವಡಿಕೆಗೆ ತೋರುತ್ತಿರುವ ಉತ್ಸಾಹ ತೃಪ್ತಿದಾಯಕವಾಗಿಸಲು ಈ ಭೇಟಿ ಎಂದು ಸ್ಪಷ್ಟಪಡಿಸಿದರು.
ಗಣಕೀಕರಣ, ಇ-ಶಕ್ತಿ ಅನುಷ್ಠಾನ, ವಿವಿಧೋದ್ದೇಶ ಸೇವಾ ಕೇಂದ್ರಗಳ ಸ್ಥಾಪನೆಗೆ ಆಡಳಿತ ಮಂಡಳಿಗೆ ಸಲಹೆ ನೀಡುವುದು ಮತ್ತಿತರ ಅಂಶಗಳ ಕುರಿತು ಚರ್ಚಿಸಿ ಸಹಕಾರ ರಂಗದಲ್ಲಿ ಸಮಾಜದ ಕಟ್ಟಕಡೆ ವ್ಯಕ್ತಿಯೂ ಭಾಗಿಯಾಗುವಂತೆ ಮಾಡುವ ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ