ಎಪಿಎಂಸಿ ಖಾಸಗೀಕರಣದಲ್ಲೂ ರೈತರ ಹಿತ ಖಚಿತ: ಶಾಸಕ ಮುನವಳ್ಳಿ ಮನವಿಗೆ ಬಿಎಸ್ ವೈ ಸ್ಪಂದನೆ
Team Udayavani, May 11, 2020, 3:30 PM IST
ಗಂಗಾವತಿ: ರಾಜ್ಯದ ಎಪಿಎಂಸಿಗಳನ್ನು ಖಾಸಗೀಕರಣ ಮಾಡುವ ವಿಶೇಷ ಕಾಯ್ದೆ ಜಾರಿ ತಯಾರಿ ಮಧ್ಯೆ ರೈತರು, ಹಮಾಲಿ ಕಾರ್ಮಿಕರು, ವರ್ತಕರು ಆತಂಕ ಕುರಿತು ಶಾಸಕ ಪರಣ್ಣ ಮುನವಳ್ಳಿ ಮಾಡಿದ ಮನವಿಗೆ ಸಿಎಂ ಯಡಿಯೂರಪ್ಪ ಸ್ಪಂದಿಸಿದ್ದಾರೆ.
ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಕರೆ ಮಾಡಿ ಮಾತನಾಡಿದ ಸಿಎಂ ಬಿಎಸ್ ವೈ, ಎಪಿಎಂಸಿ ನೂತನ ಕಾಯ್ದೆಯಲ್ಲಿ ಕೃಷಿಕರು ಹಮಾಲಿ ಕಾರ್ಮಿಕರು ಮತ್ತು ಗಂಜ್ ಹಮಾಲಿಕಾರ್ಮಿಕರ ಹಿತ ಕಾಪಾಡಲಾಗಿದೆ. ರೈತರು ಬೆಳೆದ ಬೆಳೆಗೆ ಅಧಿಕ ದರ ಸಿಗಲಿದ್ದು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್-19 ಸಂದರ್ಭದಲ್ಲಿ ರೈತರ ಬೆಳೆ ಬೆಲೆ ಇಲ್ಲದ ಸಂದರ್ಭದಲ್ಲಿ ನೂತನ ಮಾದರಿ ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದು ಹೊಸ ಕಾಯ್ದೆಯಿಂದ ಎಪಿಎಂಸಿ ಅವಲಂಬಿತರು ಶೋಷಣೆಗೆ ಒಳಗಾಗುವುದಿಲ್ಲ ಎಂದು ಸಿಎಂ ಮನವರಿಕೆ ಮಾಡಿದ್ದಾರೆ.
ಎಪಿಎಂಸಿ ಖಾಸಗೀಕರಣ ಕುರಿತು ಶಾಸಕ ಪರಣ್ಣ ಮುನವಳ್ಳಿ ಎಪಿಎಂಸಿ ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದ್ದ ಆತಂಕದ ಹೇಳಿಕೆಯನ್ನು ಉದಯವಾಣಿ ವೆಬ್ ಸೈಟ್ ಸುದ್ದಿ ಮಾಡಿದ್ದು, ವ್ಯಾಪಕ ಪ್ರಚಾರ ಪಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್ ತಂಗಡಗಿ
Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…
Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ
Koppal Lok Sabha Constituency: ಹಿಟ್ನಾಳ್ಗೆ ಹೊಸ ಮುಖ ಡಾ| ಕ್ಯಾವಟರ್ ಸವಾಲು
Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ