ದೋಟಿಹಾಳ: ಸೂಕ್ತ ಕಟ್ಟಡದ ಕೊರತೆ; ಶಾಲಾ ವರಾಂಡದಲ್ಲಿ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರು
Team Udayavani, Dec 16, 2021, 4:58 PM IST
ದೋಟಿಹಾಳ: ಶಾಲಾ ಮಕ್ಕಳು ಸಾಮಾನ್ಯವಾಗಿ ಕೊಠಡಿಗಳಲ್ಲಿ ಶಾಲಾ ಮಕ್ಕಳು ಕುಳಿತು ವಿದ್ಯಾಭ್ಯಾಸ ಮಾಡುವುದು ನೋಡಿದ್ದೇವೆ. ಆದರೆ ಈ ಶಾಲಾ ಮಕ್ಕಳಿಗೆ ಕೊಠಡಿಯ ಒಳಗೆ ಕುಳಿತು ವಿದ್ಯಾಭ್ಯಾಸ ಮಾಡುವ ಅದೃಷ್ಟ ಇಲ್ಲ.
ಇದು ತಾಲೂಕು ಕೇಂದ್ರದಿಂದ ಕೇವಲ 6 ಕಿ.ಮೀ ದೂರದಲ್ಲಿ ಇರುವು ಬಿಜಕಲ್ ಗ್ರಾಮದ ಜನತಾ ಬಡವಾಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸ್ಥಿತಿ. ಕಳೆದ 2-3 ವರ್ಷಗಳಿಂದ ಶಾಲಾ ಮಕ್ಕಳು ಸೂಕ್ತ ಕಟ್ಟಡವೂ ಇಲ್ಲದೆ ಮಕ್ಕಳು ಪರದಾಡುವಂತಾಗಿದೆ.
ಈ ಶಾಲೆ 1ರಿಂದ 5ನೇ ತರಗತಿಯ ವರಗೆ ಸುಮಾರು 104 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಶಾಲೆಯಲ್ಲಿ ಒಟ್ಟು ನಾಲ್ಕು ಕೊಠಡಿಗಳು ಇದು. ಇದರಲ್ಲಿ ಒಂದು ಕೊಠಡಿಯನ್ನು ಕಾರ್ಯಲಯ ಮಾಡಿಮಾಡಿಕೊಂಡಿದ್ದಾರೆ. ಉಳಿದ ಮೂರು ಕೊಠಡಿಗಳಲ್ಲಿ ಎರಡು ಕೊಠಡಿಗಳು ಶಾಲಾ ಕಾಂಪೌಂಡ್ ಮತ್ತು ಬಿಸಿಯೂಟದ ಕೊಠಡಿಯ ಕಾಮಗಾರಿಗಳ ಸಾಮಗ್ರಿಗಳು ಇಟ್ಟಿರುವುದರಿಂದ ಕೇವಲ ಒಂದು ಕೊಠಡಿಯಲ್ಲಿ ಮಾತ್ರ 1 ಮತ್ತು 2ನೇ ತರಗತಿಯ ಮಕ್ಕಳಿಗೆ ಪಾಠ ನಡೆಯುತ್ತಿದೆ. ಉಳಿದ 3,4 ಮತ್ತು 5ನೇ ತರಗತಿಯ ಮಕ್ಕಳಿಗೆ ಕೊಠಡಿಯ ಕೊರತೆಯಿಂದ ಮಕ್ಕಳು ಬಿಸಿಲು, ಗಾಳಿ, ಚಳಿಯಲ್ಲಿ ಶಾಲಾ ವರಾಂಡದಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ತಲೆದೋರಿದೆ.
ಪೂರ್ಣಗೊಳ್ಳದ ಕಟ್ಟಡ: ಈ ಶಾಲೆಯಲ್ಲಿ ಸುಮಾರು 6-7 ವರ್ಷಗಳಿಂದ ನಿರ್ಮಾಣ ಹಂತಲ್ಲಿರುವ ಕಟ್ಟಡವೂ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದೆ. ಇದರಿಂದಾಗಿ ಶಾಲಾ ಮಕ್ಕಳಿಗೆ ಕೊಠಡಿಗಳ ಕೊರತೆ ಕಾಣುತ್ತದೆ ಜೊತಗೆ ಇದ ಎರಡು ಕೊಠಡಿಗಳಲ್ಲಿ ಕಾಮಗಾರಿಗಳ ನೆಪದಲ್ಲಿ ಕಾಮಗಾರಿಯ ಸಾಮಗ್ರಿಗಳು ಶಾಲೆಯ ಕೊಠಡಿಗಳಲ್ಲಿ ಇಟ್ಟುರುವುದು ಸದ್ಯ ಮಕ್ಕಳಿಗೆ ಕೊಠಡಿಯಲ್ಲಿ ಕೊರತೆಗೆ ಕಾರಣವಾಗಿದೆ.
ಮೂಲ ಸೌಲಭ್ಯವಿಲ್ಲ: ಶಾಲೆ ಸ್ಥಾಪನೆಯಾಗಿ ದಶಕಗಳೇ ಗತಿಸಿದರೂ, ಮೂಲ ಸೌಲಭ್ಯ ಕೊರತೆ ಕಾಣುತ್ತಿದೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರೂ, ಶಾಲಾ ಮಕ್ಕಳಿಗೆ ಶೌಚಾಲಯದ, ಸರಿಯಾದ ಆಟದ ಮೈದಾನ. ಬಿಸಿಯೂಟದ ಕೊಠಡಿ ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳ ಕೊರತೆ ಕಾಣುತ್ತಿದೆ.
ಶಾಲೆಗೆ ಹೆಚ್ಚುವರಿ ಕೊಠಡಿ ನೀಡಿದರೆ ಮಕ್ಕಳನ್ನು ಪ್ರತ್ಯೆಕ ತರಗತಿಗಳನ್ನಾಗಿ ಮಾಡಿದರೆ ಕಲಿಯಲು ಇನ್ನೂ ಉತ್ಸಾಹ ಮೂಡುತ್ತದೆ ಎಂಬುದು ಶಿಕ್ಷಕರ ಬೇಡಿಕೆ. ಹಾಗೂ ಶಾಲಾ ಕಾಂಪೌಂಡ್ ಮತ್ತು ಬಿಸಿಯೂಟದ ಕೊಠಡಿಯ ಕಾಮಗಾರಿಗಳ ಸಾಮಗ್ರಿಗಳು ಕೊಠಡಿಗಳಲ್ಲಿ ಇಟ್ಟಿರುವುದರಿಂದ ಮಕ್ಕಳಿಗೆ ಕೊಠಡಿಯ ಕೊರತೆಯಾಗಿದೆ. ಕಾಮಗಾರಿ ಕೆಲಸ ಮಾಡುವರಿಗೆ 3-4 ಬಾರಿ ಕೊಠಡಿಗಳಲ್ಲಿ ಇರುವ ಸಾಮಗ್ರಿಗಳನ್ನು ಖಾಲಿ ಮಾಡಿ ಎಂದು ಹೇಳಿದರು ಇನ್ನೂ ಮಾಡಿಲ್ಲ- ರುದ್ರಮ್ಮ, ಗುತ್ತೂರು ಶಾಲಾ ಮುಖ್ಯಶಿಕ್ಷಕಿ.
ಬಿಜಕಲ್ ಜನತಾ ಬಡಾವಣೆಯ ಶಾಲೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲಾ ಕಾಂಪೌಂಡ್ ಮತ್ತು ಬಿಸಿಯೂಟದ ಕೊಠಡಿಯ ಕಾಮಗಾರಿಗಳು ನಡೆದ್ದಿದೆ ಹಾಗೂ ಒಂದು ಶೌಚಾಲಯವನ್ನು ನಿರ್ಮಾಣ ಮಾಡುತ್ತೇವೆ.–ಆನಂದರಾವ್ ಕುಲಕರ್ಣಿ, ಗ್ರಾಪಂ ಪಿಡಿಒ ಬಿಜಕಲ್
-ಮಲ್ಲಿಕಾರ್ಜುನ ಮೆದಿಕೇರಿ