ನಕಲಿ ದಾಖಲೆ ನೀಡಿ ಅಂಗನವಾಡಿಗೆ ನೇಮಕ

•ವಿಧವೆ ಮೀಸಲಾತಿಯಡಿ ಕೆಲಸ ಗಿಟ್ಟಿಸಿಕೊಂಡ ಯುವತಿ•ಬಿಇಡಿ ವ್ಯಾಸಂಗ ಮಾಡುತ್ತಿರುವ ಹನುಮಕ್ಕ

Team Udayavani, Jul 23, 2019, 10:40 AM IST

kopala-tdy-1

ಕುಷ್ಟಗಿ: ಅವಿವಾಹಿತೆಯೊಬ್ಬರು ವಿಧವೆಯರ ಮೀಸಲಾತಿಯಡಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೇಮಕಗೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗುಮಗೇರಾ ಗ್ರಾಮದ ಹನುಮಕ್ಕ 2016ರಲ್ಲಿ 1ನೇ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆಯಲ್ಲಿದ್ದು, ಸದ್ಯ 2017-18ರಲ್ಲಿ ಇಲ್ಲಿನ ವಿಜಯ ಚಂದ್ರಶೇಖರ ಬಿಇಡಿ ಕಾಲೇಜಿನಲ್ಲಿ ಕಾಯಂ ಪ್ರಶಿಕ್ಷಣಾರ್ಥಿಯಾಗಿದ್ದಾರೆ. ಎರಡರಲ್ಲೂ ಹಾಜರಾತಿ ಪಡೆದಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿ ವೇತನ ಪಡೆದಿರುವ ವೇತನ ದಾಖಲೆಗಳು ಹಾಗೂ ವಿಜಯ ಚಂದ್ರಶೇಖರ ಬಿಇಡಿ ಕಾಲೇಜಿನಲ್ಲಿ 3ನೇ ಸೆಮಿಸ್ಟರ್‌ನಲ್ಲಿ 76 ಕರ್ತವ್ಯದ ದಿನಗಳಲ್ಲಿ 45 ದಿನ ತರಗತಿಗೆ ಹಾಜರಾಗಿದ್ದಾರೆ. ಈ ವಿಷಯ ಕುರಿತು ಜನಹಿತ ವೇದಿಕೆ ಅಧ್ಯಕ್ಷ ಎಚ್.ಕೆ. ದೋಟಿಹಾಳ ಅವರು, ಅಗತ್ಯ ದಾಖಲೆಗಳ ಸಮೇತ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸೇರಿದಂತೆ ಜಿಪಂಗೆ ಅಗತ್ಯ ಕ್ರಮಕ್ಕೆ ದೂರು ಸಲ್ಲಿಸಿದ್ದಾರೆ.

ದಾಖಲೆಯಲ್ಲಿ ತಂದೆ ಹೆಸರು: ಈ ಹಿನ್ನೆಲೆಯಲ್ಲಿ ದಾಖಲೆಗಳ ಪರಿಶೀಲನೆಯಲ್ಲಿ ಹನುಮಕ್ಕ ಅವರ ಅಂಗನವಾಡಿ ಕಾರ್ಯಕರ್ತೆಯಾಗಿರುವುದು ಖೊಟ್ಟಿ ಎನ್ನುವುದು ಗೊತ್ತಾಗಿದೆ. ಹನುಮಕ್ಕ ವಿಧವಾ ಮೀಸಲಾತಿಯಡಿ ಕಾರ್ಯಕರ್ತೆಯಾಗಿದ್ದು, ಹನುಮಕ್ಕ ಗಂಡ ಚಂದ್ರಪ್ಪ ಕಂಬಳಿ ಎಂಬುವರಿಗೆ ಶಿಶು ಅಭಿವೃದ್ಧಿ ಇಲಾಖೆ 2016, ಸೆ.20ರಂದು ನೇಮಕಾತಿ ಆದೇಶ ಪತ್ರ ನೀಡಿದೆ. ವಾಸ್ತವದಲ್ಲಿ ಇವರು ಮದುವೆಯಾಗಿಲ್ಲ. ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲೆಗಳಲ್ಲಿ ಹನುಮಕ್ಕ ಅವರ ತಂದೆ ಮುತ್ತಪ್ಪ ಬ್ಯಾಲಿಹಾಳ ಎನ್ನುವ ಹೆಸರಿದೆ.

ಹನುಮಕ್ಕ ಅವರ ಆಧಾರ ಕಾರ್ಡ್‌, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆದಾಯ ಹಾಗೂ ವಾಸಸ್ಥಳ ಪ್ರಮಾಣ ಪತ್ರಗಳಲ್ಲಿ 371 ಕಲಂ (ಜೆ) ಅನ್ವಯ ಉಪ ವಿಭಾಗಾಧಿಕಾರಿ ಹೈಕ ನಿವಾಸಿ ಎನ್ನುವ ಪ್ರಮಾಣ ಪತ್ರದಲ್ಲೂ ತಂದೆ ಮುತ್ತಪ್ಪ ಹೆಸರು ಮಾತ್ರ ಇದೆ.

ಮರಣ ಪ್ರಮಾಣಪತ್ರ: ತಾಲೂಕಿನ ಟಕ್ಕಳಕಿ ಗ್ರಾಮದ ನಿವಾಸಿ ಚಂದ್ರಪ್ಪ ಬಸಪ್ಪ ಕಂಬಳಿ ಎನ್ನುವ ಹೆಸರಿನಲ್ಲಿರುವ ಮರಣ ಪತ್ರ ಲಗತ್ತಿಸಲಾಗಿದೆ. ಆದರೆ ಮೃತ ಚಂದ್ರಪ್ಪ ಅವರೇ ತಮ್ಮ ಪತಿ ಎಂದು ನಿರೂಪಿಸುವ ಯಾವುದೇ ದಾಖಲೆಗಳಿಲ್ಲ. ಅದೇ ರೀತಿ ಸಾರ್ವಜನಿಕರಿಗೆ ಟಕ್ಕಳಕಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ನೀಡಿರುವ ಸ್ಥಾನಿಕ ಲಿಖೀತ ಮಾಹಿತಿ ಪ್ರಕಾರ ಟಕ್ಕಳಕಿ ಗ್ರಾಮದ ನಿವಾಸಿಯಾಗಿರುವ ಚಂದ್ರಪ್ಪ ಕಂಬಳಿ ಎಂಬುವರಿಗೆ ಶರಣಮ್ಮ ಎಂಬುವರೊಂದಿಗೆ ಮದುವೆಯಾಗಿದೆ. ಇವರಿಗೆ ಕೀರ್ತಿ ಎನ್ನುವ ಮಗಳಿದ್ದು, ಮಗಳೊಂದಿಗೆ ಅವರು ವಾಸವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಅದರಲ್ಲಿ ಹನುಮಕ್ಕ ಎನ್ನುವ ಹೆಸರಿನ ಉಲ್ಲೇಖವಿಲ್ಲ.

ಗ್ರಾಮಸ್ಥರ ಅನುಮಾನ: ಈ ಮದ್ಯೆ ವಿಧವೆ ಮೀಸಲಾತಿಯಡಿ ಕಾರ್ಯಕರ್ತೆ ಹುದ್ದೆಗೆ ನೇಮಕಾತಿ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಲ್ಲ. ಮದುವೆಯಾಗಿರುವುದು ಹಾಗೂ ಪತಿ ಎಂಬುದನ್ನು ಪ್ರಾಮಾಣೀಕರಿಸುವ ಯಾವುದೇ ದಾಖಲೆ ಇಲ್ಲದಿದ್ದರೂ, ನೇಮಕಾತಿ ಆದೇಶ ನೀಡಿರುವ ಶಿಶು ಅಭಿವೃದ್ಧಿ ಅಧಿಕಾರಿ ಕ್ರಮಕ್ಕೆ ಟಕ್ಕಳಕಿ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.