ಜನತಾ ಕರ್ಫ್ಯೂ: ಗಂಗಾವತಿಯಲ್ಲಿ ಜನ ಸಂಚಾರ, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತ
Team Udayavani, Mar 22, 2020, 1:33 PM IST
ಗಂಗಾವತಿ: ಕೋವಿಡ್-19 ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟಿರುವ ಜನತಾ ಕರ್ಫ್ಯೂಗೆ ಗಂಗಾವತಿ ಪಟ್ಟಣವೂ ಬೆಂಬಲ ನೀಡಿದ್ದು, ಜನ ಸಂಚಾರ, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ.
ಹಾಲು ಕೇಂದ್ರ ಔಷಧಿ ಅಂಗಡಿ ಮತ್ತು ಆಸ್ಪತ್ರೆಗಳನ್ನು ಹೊರತುಪಡಿಸಿ ಇಡೀ ಗಂಗಾವತಿ ಸಂಪೂರ್ಣ ಸ್ಥಬ್ಧವಾಗಿದೆ. ರಸ್ತೆಗಳ ಮೇಲೆ ಬಸ್ ಆಟೋ ಯಾವುದೇ ವಾಹನ ಸಂಚಾರವಿಲ್ಲ. ತಾಲ್ಲೂಕು ಆಡಳಿತ ಚಿಕ್ಜಜಂತಗಲ್,ಕಡೆಬಾಗಿಲು ಕ್ರಾಸ್ ಮುಕ್ಕುಂಪಿ ಸೇರಿ ಪ್ರಮುಖ ಚೆಕ್ ಪೋಸ್ಟ್ ಗಳಲ್ಲಿ ಬಸ್ ಹಾಗು ಖಾಸಗಿ ವಾಹನಗಳಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡಿ ವಿವರ ಬರೆದುಕೊಂಡು ಕಳಿಸಲಾಗುತ್ತಿದೆ.
ಭಾನುವಾರ ಸಂತೆಯನ್ನು ಸಂಪೂರ್ಣ ರದ್ದು ಮಾಡಲಾಗಿದೆ. ಡೇಲಿ ಮಾರ್ಕೆಟ್ ನಲ್ಲಿ ಬೆಳ್ಳಿಗ್ಗೆ ಕೆಲವರು ಕದ್ದುಮುಚ್ಚಿ ಮಾಂಸ ಮಾರಾಟವನ್ನು ಮಾಡಿದ್ದು, ಆದರೆ ಜನರು ವಿರೋಧಿಸಿದ ಘಟನೆ ಜರುಗಿದೆ.