ಕೊಪ್ಪಳ: ದಾಸೋಹಕ್ಕೆ ಭಕ್ತ ಸಾಗರ- ಗವಿಸಿದ್ದೇಶ್ವರ ಜಾತ್ರೆ ಸಂಪನ್ನ
ಜಾತ್ರೆಯಲ್ಲಿನ ಒಳಾಂಗಣದಲ್ಲೂ ಸ್ವಚ್ಛತೆ ಎದ್ದು ಕಾಣುತ್ತಿತ್ತು.
Team Udayavani, Feb 10, 2024, 4:37 PM IST
ಉದಯವಾಣಿ ಸಮಾಚಾರ
ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ಜಾತ್ರೋತ್ಸವಕ್ಕೆ ಶುಕ್ರವಾರ ಸಂಭ್ರಮದ ತೆರೆ ಕಂಡಿತು. ಭಕ್ತರು ಶ್ರೀಮಠದಲ್ಲಿ ಕರ್ತೃ ಗದ್ದುಗೆ ದರ್ಶನ ಪಡೆದು, ಪ್ರಸಾದ ಸವಿದರು. ಶ್ರೀಮಠದಲ್ಲಿ ಬನದ ಹುಣ್ಣಿಮೆ ದಿನದಿಂದ ಆರಂಭವಾದ ಜಾತ್ರಾ ಧಾರ್ಮಿಕ ಕಾರ್ಯಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು.
ಮಹಾರಥೋತ್ಸವಕ್ಕೆ ಈ ಬಾರಿ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾ ಸ್ವಾಮೀಜಿ ಚಾಲನೆ ನೀಡಿ ಭಕ್ತಗಣಕ್ಕೆ ಉಪದೇಶ ನೀಡಿದರು. ಗವಿಮಠದ ಕೈಲಾಸ ಮಂಟಪದಲ್ಲಿ ಮೂರು ದಿನಗಳ ಕಾಲ ಭಕ್ತ ಹಿತ ಚಿಂತನಾ ಸಭೆ, ಅನುಭಾವಿಗಳ ಉಪದೇಶಾಮೃತ, ಸಂಗೀತ ಕಾರ್ಯಕ್ರಮಗಳು ನಡೆದವು.
ಸ್ವಚ್ಛತೆಗೆ ಹೆಸರಾದ ಜಾತ್ರೋತ್ಸವ: ಪ್ರತಿ ವರ್ಷದ ಜಾತ್ರೆಗಳಿಗಿಂತ ಈ ವರ್ಷದ ಜಾತ್ರೆ ವಿಭಿನ್ನ ಹಾಗೂ ವಿಶಿಷ್ಟತೆಯನ್ನು ಪಡೆದಿದೆ. ಜಾತ್ರಾ ಮಹೋತ್ಸವದಲ್ಲಿ ಮಠದ ಮೈದಾನ, ಮಹಾ ದಾಸೋಹ ಮಂಟಪ, ಗವಿಮಠದ ಕರ್ತೃ ಗದ್ದುಗೆ, ಕೈಲಾಸ ಮಂಟಪ ಸೇರಿದಂತೆ ಬೆಟ್ಟದ ಪ್ರದೇಶದಲ್ಲಿ, ಜಾತ್ರೆಯಲ್ಲಿನ ಒಳಾಂಗಣದಲ್ಲೂ ಸ್ವಚ್ಛತೆ ಎದ್ದು ಕಾಣುತ್ತಿತ್ತು.
ಸ್ವಯಂ ಪ್ರೇರಿತವಾಗಿ ಭಕ್ತಗಣ ಜಾತ್ರೆಯಲ್ಲಿ ಶಿಸ್ತುಬದ್ಧ ಸೇವೆಯಲ್ಲಿ ತೊಡಗಿದ್ದು ಗಮನ ಸೆಳೆಯಿತು. ಅಲ್ಲದೇ ಮಠದ ಆವರಣದಲ್ಲಿ ತಾವೇ ಸ್ವತ್ಛ ಸೇವಾ ಕಾರ್ಯದಲ್ಲಿ ತೊಡಗಿ ಗಮನ ಸೆಳೆದರು. ಅಲ್ಲದೇ ಜನರಿಗೆ ಜಾಗೃತಿ ಮೂಡಿಸಿ ಹೆಸರಾದರು.
ಕರ್ತೃ ಗದ್ದುಗೆಯಲ್ಲಿ ಲಘು ರಥೋತ್ಸವ:ಪ್ರತಿ ವರ್ಷದ ಪೂರ್ವ ಪರಂಪರೆಯಂತೆ ಜಾತ್ರೆಯ ಸಂಪನ್ನದ ಕೊನೆಯ ದಿನ ಅಮವಾಸ್ಯೆ ದಿನ ಗವಿಮಠದ ಕರ್ತೃ ಗದ್ದುಗೆಯಲ್ಲಿ ಲಘು ರಥೋತ್ಸವ ಸಂಜೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಭಕ್ತಗಣವು ಲಘು ರಥೋತ್ಸವದಲ್ಲಿ ಪಾಲ್ಗೊಂಡು ಪುಷ್ಪಗಳ ಸಮರ್ಪಿಸಿ ಶ್ರೀಗವಿಸಿದ್ದೇಶ್ವರನ ನಾಮ ಸ್ಮರಣೆ ಮಾಡಿ ಇಷ್ಟಾರ್ಥ ಕೇಳಿಕೊಂಡರು.
ಮಹಾದಾಸೋಹದಲ್ಲಿ ಜನಸ್ತೋಮ: ಅಮಾವಾಸ್ಯೆ ದಿನವಾದ ಶುಕ್ರವಾರ ಶ್ರೀಮಠಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ಕರ್ತೃ ಗದ್ದುಗೆ, ಮಹಾ ರಥೋತ್ಸವಕ್ಕೆ ಕಾಯಿ, ಕರ್ಪೂ ರ ಅರ್ಪಿಸಿ ಮಹಾದಾಸೋಹ ಮಂಟಪದಲ್ಲಿ ಮಹಾ ಪ್ರಸಾದ ಸವಿಯಿತು. ಮಹಾ ದಾಸೋಹದಲ್ಲಿ ಗೋದಿ ಪಾಯಿಸ, ಅನ್ನ ಸಾಂಬಾರು, ಸಂಡಿಗೆ ಹಪ್ಪಳ, ಉಪ್ಪಿನ ಕಾಯಿ, ಚಟ್ನಿ, ದಾಲ್ ಸೇರಿದಂತೆ ರುಚಿಯಾದ ಪ್ರಸಾದ ಸವಿದರು.ಒಟ್ಟಿನಲ್ಲಿ 15-20 ದಿನಗಳ ಕಾಲ ನಡೆದ ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವ ಅಮಾವಾಸ್ಯೆ ದಿನದಂದು ಸಂಪನ್ನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
MUST WATCH
ಹೊಸ ಸೇರ್ಪಡೆ
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ
Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು