ಕೊಪ್ಪಳ: ಗವಿಸಿದ್ದೇಶ್ವರ ಮಹಾ ದಾಸೋಹದಲ್ಲಿ ಭಕ್ತರ ಪ್ರಸಾದಕ್ಕೆ ಬಿಸಿ ಬಿಸಿ ಮಿರ್ಚಿ
Team Udayavani, Jan 29, 2024, 3:49 PM IST
ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಮಹಾ ದಾಸೋಹದಲ್ಲಿ ಭಾನುವಾರ ಮಿರ್ಚಿ ಸೇವಾ ಸಮಿತಿಯಿಂದ ಸದ್ಭಕ್ತರಿಗಾಗಿ ಬಿಸಿ ಬಿಸಿ ಮಿರ್ಚಿ ಸೇವೆ ನಡೆಯಿತು. ಗವಿ ಸಿದ್ದೇಶ್ವರ ಮಹಾ ಸ್ವಾಮೀಜಿಗಳು, ಡಿಸಿ, ಎಸ್ಪಿ ಸೇರಿ ಗಣ್ಯಾತೀತರು ಮಿರ್ಚಿ ಸೇವಾ ಸ್ಥಳಕ್ಕೆ ಧಾವಿಸಿ ಮಿರ್ಚಿ ಎಣ್ಣೆಯಲ್ಲಿ ತೇಲಿಬಿಟ್ಟು ಸೇವಾ ಕಾರ್ಯಕ್ಕೆ ಪ್ರೋತ್ಸಾಹಿಸಿದರು.
ಕಳೆದ ಕೆಲ ವರ್ಷಗಳಿಂದ ಮಿರ್ಚಿ ಸೇವಾ ಸಮಿತಿ ಭಕ್ತರಿಗೆ ಬಿಸಿ ಬಿಸಿ ಮಿರ್ಚಿ ಸೇವೆ ಮಾಡುವ ಉದ್ದೇಶದಿಂದ ಅಜ್ಜನ ಜಾತ್ರೆಯ
ಮಹಾ ರಥೋತ್ಸವದ ಮರು ದಿನ ಮಹಾ ದಾಸೋಹದಲ್ಲಿ ಬಿಸಿ ಬಿಸಿ ಮಿರ್ಚಿ ಸಿದ್ಧಪಡಿಸಿ ಭಕ್ತರಿಗೆ ಪ್ರೀತಿಯಿಂದಲೇ ಉಣ
ಬಡಿಸುವ ಸೇವೆ ನಡೆಸಿದ್ದಾರೆ.
ಕಳೆದ ವರ್ಷ 2-3 ಲಕ್ಷ ಮಿರ್ಚಿಗಳನ್ನು ಸಿದ್ಧಪಡಿಸಿದ್ದರೆ, ಈ ಬಾರಿ 4-5 ಲಕ್ಷ ಮಿರ್ಚಿ ಉಣ ಬಡಿಸುವ ಸೇವಾ ಕಾರ್ಯಕ್ಕೆ
ಮುಂದಾಗಿದ್ದಾರೆ. ಭಾನುವಾರ ಬೆಳಗ್ಗೆ ಮಿರ್ಚಿ ಸೇವಾ ಕಾರ್ಯ ಆರಂಭವಾಯಿತು. ಈ ಮಿರ್ಚಿಗಾಗಿ 25 ಕ್ವಿಂಟಲ್ ಹಿಟ್ಟು, 22 ಕ್ವಿಂಟಲ್ ಹಸಿ ಮೆಣಸಿನಕಾಯಿ, 12 ಬ್ಯಾರಲ್ ಒಳ್ಳೆಣ್ಣೆ, 60 ಕೆಜಿ ಉಪ್ಪು, 60 ಕೆಜಿ ಅಜಿವಾನ ಹಾಗೂ 400 ಬಾಣಸಿಗರು ಹಾಗೂ ಮೆಣಸಿನಕಾಯಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸೇವಾ ಮಹಿಳೆಯರು ಸೇರಿ ಸಾವಿರಾರು ಜನರು ಮಿರ್ಚಿ ಸಿದ್ಧತಾ
ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಗವಿಶ್ರೀಗಳಿಂದ ಮಿರ್ಚಿ ಹಾಕಿ ಚಾಲನೆ:
ಮಹಾ ದಾಸೋಹದ ಆವರಣದ ಪಕ್ಕದಲ್ಲಿಯೇ ಮಿರ್ಚಿ ಸಿದ್ಧಪಡಿಸುವ ಬಾಣಸಿಗರ ಹಾಗೂ ಸೇವಾ ಕಾರ್ಯಕರ್ತರ ಸ್ಥಳಕ್ಕೆ
ಆಗಮಿಸಿದ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ತಾವೂ ಸಹ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಮಿರ್ಚಿಯನ್ನು ಎಣ್ಣೆಯಲ್ಲಿ ತೇಲಿ ಬಿಡುವ ಮೂಲಕ ಸೇವಾ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್