Kushtagi; ಜೂಜಾಟ ನಿರತರ ಮೇಲೆ ಪೊಲೀಸರ ದಾಳಿ;1.6 ಲಕ್ಷ ರೂ ಜಪ್ತಿ
Team Udayavani, Jun 18, 2023, 10:09 PM IST
ಕುಷ್ಟಗಿ: ಕುಷ್ಟಗಿ ತಾಲೂಕಿನ ಮೆಣಸಗೇರಾ ಸೀಮಾದ ಅರಣ್ಯ ಪ್ರದೇಶದಲ್ಲಿ ಜೂಜಾಟ ನಿರತರ ಮೇಲೆ ಪೊಲೀಸರ ದಾಳಿಯಿಂದ 1,61,680 ರೂ. ವಶ ಪಡಿಸಿಕೊಂಡು, ಜೂಜು ನಿರತ 13 ಜನರ ವಿರುದ್ದ ದೂರು ದಾಖಲಾಗಿದೆ.
ಮೆಣಸಗೇರಾ ಸೀಮಾದ ಅರಣ್ಯ ಪ್ರದೇಶದಲ್ಲಿ ಜೂಜು ನಿರತರ ಮೇಲೆ ಕುಷ್ಟಗಿ ಪಿಎಸೈ ಮೌನೇಶ ರಾಠೋಡ್, ಕ್ರೈಂ ಪಿಎಸೈ ಮಾನಪ್ಪ ವಾಲ್ಮೀಕಿ ನೇತೃತ್ವದ ಪೊಲೀಸರ ತಂಡ ಏಕಾಏಕಿ ದಾಳಿ ನಡೆಸಿತು. ಈ ದಾಳಿಯ ಸಂದರ್ಭದಲ್ಲಿ 1.61 ಲಕ್ಷ ರೂ. ನಗದು, ಇಸ್ಪೇಟ್ ಎಲೆ, ಹಳೆಯ ಟಾರ್ಪಲ್ ವಶಕ್ಕೆ ಪಡೆಯಲಾಗಿದೆ.
ಅಶೋಕ ಚಲವಾದಿ ಇಲಕಲ್, ಬಸವರಾಜ ಬಳಿಗಾರ ಗಜೇಂದ್ರಗಡ, ಅನಿಲ್ ಕೊಟೆಗಾರ ಇಲಕಲ್, ವಿರುಪಾಕ್ಷಯ್ಯ ವಸ್ತ್ರದ್ ಮುದ್ಗಲ್, ಪ್ರವೀಣ್ ಕುಮಾರ ಗದ್ದಿ ಹುನಗುಂದ್, ರವಿಚಂದ್ರಗೌಡ ಸೋಮ ಸಮುದ್ರ, ಚೇತನ್ ನೆಲಮಂಗಲ, ಗೌತಮ್ ಗೆಲ್ಡಾ ಇಲಕಲ್ಲ, ದುರಗೇಶ ನಾರಿನಾಳ ತಾವರಗೇರ, ಕುಮಾರ ನೆಲಮಂಗಲ, ಲೋಕಪ್ಪ ಕಾಳಿ ಕುದರಿಮೋತಿ, ಸಚಿನ್ ಚಲವಾದಿ ಹುನಗುಂದ, ಕುಂಟೆಪ್ಪ ಎಂ.ಎ. ಚಿಕ್ಕವಂಕಲಕುಂಟಿ ಈ ಆರೋಪಿಗಳ ವಿರುದ್ದ ದೂರು ದಾಖಲಿಸಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರದ ರಾಜ್ಯಗಳಲ್ಲಿ ಎಸ್ಸಿಪಿ, ಟಿಎಸ್ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ
Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ