ಕುಷ್ಟಗಿ: ಹಾಡ ಹಗಲೇ ಲಕ್ಷಾಂತರ ರೂ. ಚಿನ್ನ ದೋಚಿದ ಕಳ್ಳರು
Team Udayavani, Aug 24, 2022, 7:51 PM IST
ಕುಷ್ಟಗಿ: ಹಾಡ ಹಗಲೇ ಕುಷ್ಟಗಿ ಪಟ್ಟಣದ ಕಾರ್ಗಿಲ್ ಮಲ್ಲಯ್ಯ ಸರ್ಕಲ್ ಬಳಿಯ ಮನೆಯಲ್ಲಿ 2 ಲಕ್ಷ ರೂ. ನಗದು, 8 ತೊಲೆ ಚಿನ್ನ ಕಳುವಾದ ಪ್ರಕರಣ ನಡೆದಿದೆ.
ಕುಷ್ಟಗಿ ಪಟ್ಟಣದ 3ನೇ ವಾರ್ಡಿನ ಹಳೆ ಕುರಬನಾಳ ರಸ್ತೆಯಲ್ಲಿರುವ ಮಹಾಂತಮ್ಮ ಕಲ್ಲಪ್ಪ ಕುರಿ ಅವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿ ಚಾಲಾಕಿ ಕಳ್ಳರು ಹಗಲು ದರೋಡೆ ನಡೆಸಿದ್ದಾರೆ.
ಮನೆಯ ಬಾಗಿಲ ಬೀಗ ಮುರಿದು, ಅಲ್ಮೇರಾದಲ್ಲಿದ್ದ 2 ಲಕ್ಷ ನಗದು, 8 ತೊಲೆ ಚಿನ್ನ ಹಾಗೂ ಎರಡು ತೊಲೆಯಷ್ಟು ಬೆಳ್ಳಿ ಸಾಮಾನು ಕದ್ದೋಯ್ದಿದ್ದಾರೆ.
ಸದರಿ ಕಳವು ಪ್ರಕರಣ ತಿಳಿಯುತ್ತಿದ್ದಂತೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಜನ ಸಂಚಾರಿ ಪ್ರದೇಶವಾದ ಕಾರ್ಗಿಲ್ ಮಲ್ಲಯ್ಯ ಸರ್ಕಲ್ ಬಳಿ ಇಂತಹ ಘಟನೆ ನಡೆದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ
Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್
ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್ ತಂಗಡಗಿ
Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…
Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ