ಕುಷ್ಟಗಿ: ಹುಣಸೆ ಬೀಜಕ್ಕೆ ಯೋಗ್ಯ ದರವಿದ್ರೂ, ಉತ್ಪನ್ನ ಕಡಿಮೆ!


Team Udayavani, Mar 20, 2024, 5:58 PM IST

ಕುಷ್ಟಗಿ: ಹುಣಸೆ ಬೀಜಕ್ಕೆ ಯೋಗ್ಯ ದರವಿದ್ರೂ, ಉತ್ಪನ್ನ ಕಡಿಮೆ!

ಉದಯವಾಣಿ ಸಮಾಚಾರ
ಕುಷ್ಟಗಿ: ರಾಜ್ಯದ ಹುಣಸೆ ಬೀಜದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿರುವ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹುಣಸೆ ಬೀಜಕ್ಕೆ ಯೋಗ್ಯ ಧಾರಣಿ ಇದ್ದಾಗ್ಯೂ ಉತ್ಪನ್ನ ಕಡಿಮೆಯಾಗಿದ್ದು, ಕಳೆದ ವರ್ಷಕ್ಕೆ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅರ್ಧದಷ್ಟು ಉತ್ಪನ್ನ ಮಾರುಕಟ್ಟೆಗೆ ಆಕರಣೆಯಾಗಿದೆ. ರಾಜ್ಯದಲ್ಲಿ ಕುಷ್ಟಗಿ ಸೇರಿದಂತೆ ಪಾವಗಡ ಕೂಡ್ಲಗಿ, ಬಳ್ಳಾರಿ, ಚಿಂತಾಮಣಿ ಹುಣಸೆ ಬೀಜದ ಪ್ರಮುಖ ಮಾರುಕಟ್ಟೆಗಳಾಗಿ ಗುರುತಿಸಿಕೊಂಡಿವೆ.

ಪ್ರತಿ ವರ್ಷವೂ ಕುಷ್ಟಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಂಗ್ರಹವಾಗುವ ಹುಣಸೆ ಬೀಜ ಮಹಾರಾಷ್ಟ್ರದ ವಿವಿಧ ಉದ್ಯಮಗಳಿಗೆ ಸಾಗಾಣಿಕೆ ಆಗುತ್ತಿದೆ. ಈ ಹುಣಸೆ ಬೀಜದ ಉತ್ಪನ್ನದಿಂದ ಆಯುರ್ವೇದದ ಔಷಧ, ಜವಳಿ ಉದ್ಯಮದಲ್ಲಿ ಅಗತ್ಯವಾಗುವ ಸ್ಟಾರ್ಚ್‌ ಸೇರಿದಂತೆ ಬಣ್ಣ ತಯಾರಿಕೆಗೆ ಈ ಹುಣಸೆ ಬೀಜದ ಉತ್ಪನ್ನ ಬೇಡಿಕೆಯಲ್ಲಿದ್ದರೂ, ಮಾರುಕಟ್ಟೆಯ ಧಾರಣಿ ಆಧರಿಸಿ ಉತ್ಪನ್ನ ಹೆಚ್ಚಿದಷ್ಟು ನಿರೀಕ್ಷಿತ ಆದಾಯ ತರಲಿದೆ. ಈ ಉತ್ಪನ್ನ ಹೆಚ್ಚಲು ಮಳೆಯನ್ನೇ ಅವಲಂಬಿಸಿರುವುದು ಗಮನಾರ್ಹವೆನಿಸಿದೆ.

ಹುಣಸೆ ಹಣ್ಣು ಪದಾರ್ಥವಾಗಿರುವ ಕಾರಣದಿಂದ ಇದು ಕುಷ್ಟಗಿಯ ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯಾಪ್ತಿಯ ಉತ್ಪನ್ನಗಳ
ಪಟ್ಟಿಯಲ್ಲಿ ಇಲ್ಲ. ಪ್ರತಿ ವರ್ಷ ಖಾಸಗಿ ಮಾರುಕಟ್ಟೆಯಲ್ಲಿ ಸೀಜನ್‌ವಾರು ನಡೆಯುತ್ತಿದೆ. ಆದರೆ ಹುಣಸೆ ಬೀಜದ ವಹಿವಾಟು ಮಾತ್ರ ಈ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಕಳೆದ ವರ್ಷ 6 ಸಾವಿರ ಟನ್‌ ಆವಕವಾಗಿತ್ತು ಆಗಿನ ದರ ಪ್ರತಿ ಕ್ವಿಂಟಲ್‌ ಗೆ
1,400 ರೂ.ದಿಂದ 1,600 ರೂ. ಇತ್ತು. ಪ್ರಸಕ್ತ ವರ್ಷದಲ್ಲಿ ಹುಣಸೆ ಬೀಜದ ದರ ಹೆಚ್ಚಿದ್ದಾಗ್ಯೂ ಉತ್ಪನ್ನ ಕಡಿಮೆಯಾಗಿದೆ. ಈ ಬಾರಿ ಕಳೆದ ಉತ್ಪನ್ನಕ್ಕಿಂತ ಅರ್ಧದಷ್ಟು ಎಂದರೆ 3ಸಾವಿರ ಟನ್‌ ನಿರೀಕ್ಷಿಸಲು ಸಾಧ್ಯವಿದೆ. ಇದರ ಧಾರಣಿ ಮಾತ್ರ ಪ್ರತಿ ಕ್ವಿಂಟಲ್‌ ಗೆ 1,800 ರೂ.ದಿಂದ 2,100 ರೂ. ಇದೆ. ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಈ ಉತ್ಪನ್ನಕ್ಕೆ 400ರೂ. ದಿಂದ 500
ರೂ. ಹೆಚ್ಚಿಗೆ ಸಿಗುತ್ತಿತ್ತು.

ಹುಣಸೆ ಬೀಜಕ್ಕೆ ಕುಷ್ಟಗಿ ಪ್ರಮುಖ ಮಾರುಕಟ್ಟೆಯಾಗಿದೆ ಆದರೀಗ ಹುಣಸೆ ಮರಗಳನ್ನು ಕಡಿಯುತ್ತಿರುವುದರಿಂದ
ಉತ್ಪನ್ನ ಕಡಿಮೆ ಆಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸಕ್ಕೆ ಹೋಗುವ ಕಾರ್ಮಿಕರು, ಹುಣಸೆ ಗಿಡ ಹತ್ತಿ ಹುಣಸೆ ಹಣ್ಣನ್ನು ಬಿಡಿಸುವ ಕೆಲಸಕ್ಕೆ ಹೆಚ್ಚಿನ ಕೂಲಿ ಕೇಳುತ್ತಿದ್ದು, ಇದರ ಹುಣಸೆ ಹಣ್ಣು, ಬೀಜ ಮಾರಾಟಗಾರರಿಗೆ ಹೆಚ್ಚುವರಿ ಹೊರೆಯಾಗಿದೆ.
ಗೂಳಪ್ಪ ಶಿವಶೆಟ್ಟರ್‌, ಹುಣಸೆ ಬೀಜ ಖರೀದಿದಾರ

ಹುಣಸೆ ಬೀಜ ಉತ್ಪನ್ನ ಕುಷ್ಟಗಿ ಎಪಿಎಂಸಿಗೆ ಆಕರಣೆ ಮೊದಲಿನಂತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಉತ್ಪನ್ನ ಕೆಲವು ಖರೀ ದಿದಾರರಿಗೆ ಸೀಮಿತವಾಗಿದೆ.
ಟಿ. ನೀಲಪ್ಪ ಶೆಟ್ಟಿ ,
ಕಾರ್ಯದರ್ಶಿ ಎಪಿಎಂಸಿ ಕುಷ್ಟಗಿ

ಹುಣಸೆ ಹಣ್ಣಿಗೆ ಪ್ರತಿ ಕ್ವಿಂಟಲ್‌ ಗೆ 7,200 ರೂ. ದಿಂದ 8ಸಾವಿರ ರೂ. ಧಾರಣಿ ಇದೆ. ಹುಣಸೆ ಬೀಜ ಪ್ರತಿ ಕ್ವಿಂಟಲ್‌ ಗೆ 2,100 ರೂ. ಇದೆ. ಮಳೆಗಾಲ ಕಡಿಮೆಯಾಗಿದ್ದರಿಂದ ಈ ಉತ್ಪನ್ನಕ್ಕೆ ಉತ್ತಮ ಬೆಲೆ ಇದೆ ಆದರೆ ಉತ್ಪನ್ನ ಕಡಿಮೆ ಬಂದಿದೆ.
ಯಮನೂರಪ್ಪ ಭಜಂತ್ರಿ,
ಹುಣಸೆ ಹಣ್ಣು, ಬೀಜ ಮಾರಾಟಗಾರ.

*ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

g t devegowda

Mysore; ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ: ಜಿ ಟಿ ದೇವೇಗೌಡ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala; ಪೊಳ್ಳು ಭರವಸೆಗಳನ್ನು ಮುಂದುವರಿಸಿದ ವಿತ್ತ ಸಚಿವರು: ತಂಗಡಗಿ ಟೀಕೆ

Budget 2024; ಪೊಳ್ಳು ಭರವಸೆಗಳನ್ನು ಮುಂದುವರಿಸಿದ ವಿತ್ತ ಸಚಿವರು: ತಂಗಡಗಿ ಟೀಕೆ

3-koppala

Koppala: ಅಪರಿಚಿತ ವಾಹನ‌ ಡಿಕ್ಕಿಯಾಗಿ ಕರ್ತವ್ಯನಿರತ ಎಎಸ್ಐ ಸ್ಥಳದಲ್ಲೇ ಸಾವು

Gangavathi: ಕುಡಿದ ಮತ್ತಿನಲ್ಲಿ ರೈಲ್ವೇ ಹಳಿ ಮೇಲೆ ಮಲಗಿದ್ದ ಮೂವರು ಯುವಕರ ಮೇಲೆ ಹರಿದ ರೈಲು

Gangavathi: ಹಳಿ ಮೇಲೆ ಕುಳಿತು ಮದ್ಯ ಸೇವಿಸುತ್ತಿದ್ದ ಮೂವರು ಯುವಕರ ಮೇಲೆಯೇ ಹರಿದ ರೈಲು

ಕೊಪ್ಪಳ: ಆಮೆಗತಿಗಿಂತಲೂ ನಿಧಾನ ರಂಗಮಂದಿರ ನಿರ್ಮಾಣ

ಕೊಪ್ಪಳ: ಆಮೆಗತಿಗಿಂತಲೂ ನಿಧಾನ ರಂಗಮಂದಿರ ನಿರ್ಮಾಣ

Tungabhadra Dam: Increased inflows release water to canals from June 19

Tungabhadra Dam: ಹೆಚ್ಚಿದ ಒಳಹರಿವು; ಜು.19 ರಿಂದ ಕಾಲುವೆಗಳಿಗೆ ನೀರು ಬಿಡುಗಡೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

9-uv-fusion

College Days: ಕಾಲೇಜೆಂಬ ನೆನಪಿನ ದೋಣಿಯಲಿ

new-parli

Lok Sabha, Assembly ಕ್ಷೇತ್ರಗಳ ಪುನರ್ವಿಂಗಡಣೆ: ದಕ್ಷಿಣ ತಕರಾರು ಏನು?ಮಾಹಿತಿ ಇಲ್ಲಿದೆ

8-uv-fusion

UV Fusion: ತುಳುನಾಡಿನ ಹೆಮ್ಮೆ ಕಂಬಳ

7-uv-fusion

UV Fusion: ಮಂಗನ ಕೈಯಲ್ಲಿದೆ ಮಾಣಿಕ್ಯ

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.