ಆಸ್ತಿ ವರ್ಗಾವಣೆ ವಿಚಾರದಲ್ಲಿ ತಕರಾರು: ಮಗನ ಮೇಲೆಯೇ ತಂದೆಯಿಂದ ಮಾರಣಾಂತಿಕ ಹಲ್ಲೆ
Team Udayavani, Oct 31, 2022, 7:42 AM IST
ಕುಷ್ಟಗಿ: ಆಸ್ತಿಯನ್ನು ಮಗಳ ಹೆಸರಿಗೆ ವರ್ಗಾಯಿಸಲು ಮುಂದಾದ ತಂದೆಯ ನಿರ್ಧಾರಕ್ಕೆ ಅಡ್ಡಿಯಾದ ಮಗನಿಗೆ ತಂದೆ ಮರಣಾಂತಿಕವಾಗಿ ಕುಡಗೋಲಿನಿಂದ ಕೊಚ್ಚಿದ ಘಟನೆ ತಾಲೂಕಿನ ಪಟ್ಟಲಚಿಂತಿ ಗ್ರಾಮದಲ್ಲಿ ನಡೆದಿದೆ.
ಶಂಕ್ರಯ್ಯ ಮಲ್ಲಯ್ಯ ಗೌರಿಮಠ(32) ತಂದೆಯ ಸಿಟ್ಟಿಗೆ ಹಲ್ಲೆಗೊಳಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ.
ತಂದೆ ಮಲ್ಲಯ್ಯ ಗೌರಿಮಠ ಅವರು ಜಮೀನು ಮಗಳ ಹೆಸರಿಗೆ ವರ್ಗಾಯಿಸಲು ಮುಂದಾಗಿದ್ದರು. ಆದರೆ ಮಗನಿಗೆ ಸುತಾರಾಮ್ ಇಷ್ಟವಿರಲಿಲ್ಲ. ಈ ಬೆಳವಣಿಗೆಗೆ ರೋಸಿ ಹೋದ ಮಗ ಶಂಕ್ರಯ್ಯ ತಕರಾರು ವ್ಯಕ್ತ ಪಡಿಸಿದ್ದ. ಈ ಆಸ್ತಿ ಹಂಚಿಕೆ ವಿಚಾರದ ವ್ಯಾಜ್ಯ ಆಗಾಗ್ಗೆ ನಡೆಯುತ್ತಲೇ ಇತ್ತು. ಆಸ್ತಿಗಾಗಿ ಮಗನ ಪೀಡಿಸುವಿಕೆ ಜಾಸ್ತಿಯಾದಾಗ ಕುಪಿತಗೊಂಡ ತಂದೆ ಮಲಯ್ಯ ಕುಡಗೋಲಿನಿಂದ ಮನಸೋ ಇಚ್ಚೆ ಕೊಚ್ಚಿ ಗಾಯಗೊಳಿಸಿದ್ದಾನೆ.
ಮರಣಾಂತಿಕಾ ಗಾಯಗೊಂಡು ರಕ್ತದ ಮಡುವಿನಲ್ಲಿದ್ದ ಮಗ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಜೀವನ್ಮರಣ ಸ್ಥಿತಿಯಲ್ಲಿದ್ದಾನೆ. ಇತ್ತ ತಂದೆ ಮಲ್ಲಯ್ಯ ಗೌರಿಮಠ ಹನುಮಸಾಗರ ಠಾಣೆಗೆ ಬಂದು ಶರಣಾಗಿದ್ದಾನೆ. ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಪ್ರಧಾನಿ ಸಮ್ಮುಖದಲ್ಲಿ ಇಂದು ಕಾರ್ಯಕ್ರಮನೀಡಲಿದೆ ಬುಡಕಟ್ಟು ಮಕ್ಕಳ ತಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ